ಚಾಮರಾಜನಗರ : ಕಿಡಿಗೇಡಿಗಳ ಗುಂಪೊಂದು ನಾಲ್ಕು ಬೈಕ್ ಗಳು ಮತ್ತು ಒಂದು ಕಾರಿಗೆ ಬೆಂಕಿ ಇಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪುಟ್ಟನಂಜಪ್ಪ ಎಂಬುವವರ ಜಾಗದಲ್ಲಿ ದುರ್ಘಟನೆ ನಡೆದಿದೆ. ಸಿದ್ದರಾಜು ಎಂಬುವರು ಪುಟ್ನನಂಜಪ್ಪ ಎಂಬುವವರ ಖಾಲಿ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡು ಮರಗೆಲಸ ನಿರ್ವಹಿಸುತ್ತಿದ್ದರು. ಸಿದ್ದರಾಜುರವರಿಗೆ ಸೇರಿದ ಕಾರು ಹಾಗೂ ಬೈಕ್ಗಳಿಗೆ ಬೆಂಕಿ ಇಟ್ಟಿದ್ದು, ಸಂಪೂರ್ಣ ಸುಟ್ಟುಕರಕಲಾಗಿವೆ.
ರಾತ್ರಿ ಎಲ್ರೂ ಮಲಗಿದ್ದಾಗ ಕಿಡಿಗೇಡಿಗಳು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಿದ್ದರಾಜು ಗುಂಡ್ಲುಪೇಟೆ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೋಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.