ಬೆಂಗಳೂರು: ನಾನು ಎರಡು ಬಾರಿ CM ಇದ್ದಾಗ ಕೇಂದ್ರದ ಮಂತ್ರಿ ಗಳ ಮುಂದೆ ಹೋಗಿ ಭಿಕ್ಷೆ ಬೇಡಿಲ್ಲ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ. ಫ್ರೀಡಂ ಪಾರ್ಕ್ನಲ್ಲಿ ಮಾತನಾಡಿದ ಅವರು, ನಾನು ಎರಡು ಬಾರಿ ಸಿಎಂ ಇದ್ದಾಗ ಕೇಂದ್ರದ ಮಂತ್ರಿ ಗಳ ಮುಂದೆ ಹೋಗಿ ಭಿಕ್ಷೆ ಬೇಡಿಲ್ಲ, ನಿಖಿಲ್ ಕುಮಾರಸ್ವಾಮಿ ಯವರು ಯುವಕರಿದ್ದಾರೆ. ಈ ರಾಜ್ಯವನ್ನು ಜನತಾ ದಳದಿಂದಲೇ ಉಳಿಸೋಕೆ ಸಾಧ್ಯ.
ನೀವು ಸ್ವಿಮಿಂಗ್ ಮಾಡುತ್ತೀರಾ..? ಹಾಗಾದ್ರೆ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ..!
ಗುತ್ತಿಗೆದಾರರರು ಎಷ್ಟು ಕಷ್ಟ ಅನುಭವಿಸ್ತಿದ್ದೀರಿ ಎಂದು ಗೊತ್ತಿದೆ. ನಿಮ್ಮ ಕುಟುಂಬದ ಹೆಣ್ಣು ಮಕ್ಕಳ ಕತ್ತಿನ ಸರವನ್ನು ಬ್ಯಾಂಕ್ ನಲ್ಲಿ ಸಾಲ ಇಟ್ಟು ಜೀವನ ಮಾಡ್ತಿದ್ದೀರಿ, ಮೂರು ಪಕ್ಷಗಳು ಅಂತಾ ಮಾಧ್ಯಮಗಳು ಹೇಳ್ತಾರೆ. ನಾನು ಯಾವುದಾದರೂ ಗುತ್ತಿಗೆದಾರನಿಗೆ ಒತ್ತಡ ಹಾಕಿದ್ದರ ಬಗ್ಗೆ ಹೇಳಿದ್ರೆ ಏನೇ ಶಿಕ್ಷೆ ಕೊಟ್ಟರು ಅದನ್ನು ಅನುಭವಿಸಲು ಸಿದ್ದನಿದ್ದೇನೆ ಎಂದರು.
ಬೆಂಗಳೂರಿನ ಪುಟ್ಟೇನಹಳ್ಳಿಯ ಜನರು ನನಗೆ ಹೆಲಿಕ್ಯಾಪ್ಟರ್ ನಲ್ಲಿ ಸನ್ಮಾನ ಮಾಡಿದ್ರು, ಆದರೆ ಚುನಾವಣೆ ಬಂದಾಗ ಬೇರೆ ಪಕ್ಷಕ್ಕೆ ಮತವನ್ನು ಹಾಕ್ತಾರೆ. ಬೆಂಗಳೂರಿನ ಉಸ್ತುವಾರಿ ಸಚಿವರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಯಾರೋ ಕಾಂಗ್ರೆಸ್ಸಿನ ಪುಡಾರಿಗಳು ನನ್ನ ಬಗ್ಗೆ ಟೀಕೆ ಮಾಡ್ತಾರೆ. ನನ್ನ ಬಳಿ ಟನ್ ಗಟ್ಟಲೆ ದಾಖಲೆಯ ಮಾತನ್ನು ನಾನು ಸುಮ್ಮ ಸುಮ್ಮನೆ ಹೇಳಿಲ್ಲ. ನನ್ನ ಧ್ವನಿಯನ್ನು ಬಂದ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.