ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ರೌಡಿಗಳು ಬಾಲ ಬಿಚ್ಚಿದ್ದಾರೆ. ಅದ್ರಲ್ಲೂ ಸಿಟಿಯ ಗಡಿ ಭಾಗದಲ್ಲಿ ರೌಡಿಗಳ ಹಾವಳಿ ಹೆಚ್ಚುತ್ತಿದೆ. ನಿನ್ನೆ ರೌಡಿಗಳ ನಡುವೆ ಮಾರಾಮಾರಿ ನಡೆದಿದೆ.
ಯಲಹಂಕ ನ್ಯೂಟೌನ್ ಠಾಣ ವ್ಯಾಪ್ತಿಯ ಅಟ್ಟೂರು ಮುಖ್ಯರಸ್ತೆಯ ನಾಟಿ ಬಾರ್ ಮುಂದೆ ನಡೆದಿದೆ. ಬಾಣಸವಾಡಿ ರೌಡಿಶೀಟರ್ ಆರ್ ಎಕ್ಸ್ ರವಿ ಮೇಲೆ ನ್ಯೂಟೌನ್ ರೌಡಿಶೀಟರ್ ಗಾಂಜ ಅಭಿ ಅಂಡ್ ಗ್ಯಾಂಗ್ ಹಲ್ಲೆ ನಡೆಸಿದ್ದಾರೆ. ಮೀಟರ್ ಬಡ್ಡಿ ವ್ಯವಹಾರ ನಡೆಸೋ ಅಭಿ ರವಿ ಕಡೆಯವರಿಗೆ ಫೈನಾನ್ಸ್ ನೀಡಿದ್ದಾನೆ.
ಫೈನಾನ್ಸ್ ವಿಚಾರವಾಗಿ ರವಿಯನ್ನ ಮಾತುಕತೆಗೆ ಅಂತ ಕರೆಸಿದ್ದಾರೆ. ಈ ವೇಳೆ ರವಿ ನಾಟಿ ಬಾರ್ ಮುಂದೆ ಹೋಗ್ತಿದ್ದಂತೆ. ರವಿ ಮೇಲೆ ಅಭಿ, ಶೇಖರ, ಮಲ್ಲಿಕಾರ್ಜುನ, ನಾಗಾರ್ಜುನ, ನಂದೀಶ ಸೇರಿದಂತೆ ಒಂದಷ್ಟು ಜನ ಮಾರಾಣಾಂತಿಕವಾಗಿ ಥಳಿಸಿದ್ದಾರೆ. ಇನ್ನೂ ಈ ವೇಳೆ ರವಿ ಕೂಡ ಕೆಲವರ ಮೇಲೆ ಹಲ್ಲೆ ಮಾಡಿದ್ದಾನೆ. ರವಿ ಮೇಲೆ ಹಲ್ಲೆ ಮಾಡಿದವರ ಪೈಕಿ ನಾಗಾರ್ಜುನ ಸ್ತಳೀಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾನೆ.ಇನ್ನೂ ಘಟನೆ ನಂತರ ಆರೋಪಿಗಳು ಎಸ್ಕೇಪ್ ಆಗಿದ್ದು, ಹಲ್ಲೆಗೊಳಗಾದ ರವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಈ ಗಾಂಜ ಅಭಿ ಮೇಲೆ ಈ ಹಿಂದೆ ಸಾಕಷ್ಟು ಕೇಸ್ ದಾಖಲಾಗಿದೆ. ಅದ್ಯ ಯಲಹಂಕ ನ್ಯೂಟೌನ್ ಪೊಲೀಸ್ರು ಆರೋಪಿಗಳೊಗಾಗಿ ಬಲೆ ಬೀಸಿದ್ದಾರೆ.