ಚಾಮರಾಜನಗರ:- ಮಹದೇಶ್ವರಬೆಟ್ಟದ ಕಾಡೊಲದಲ್ಲಿನ ಭಾವಿಯಲ್ಲಿ ಮುಳುಗಿ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರಬೆಟ್ಟ ಸಮೀಪದ ಕಾಡುಹೊಲದ ಸುಶೀಲ (30)ಮತ್ತು ಆಕೆಯ ಮಕ್ಕಳಾದ
ಚಂದ್ರು (8 ) ದಿವ್ಯ (11ಎಂಬಾತರೆ ಮೃತಪಟ್ಟಂತಹ ದುರ್ದೈವಿಗಳಾಗಿದ್ದಾರೆ.
ಮನೆಯಲ್ಲಿ ಕೌಟುಂಬಿಕ ಕಲಹದಿಂದ ಬೇಸತ್ತು ತನ್ನ ಮಕ್ಕಳ ಜೊತೆ ಸುಶೀಲ ಮನೆಯಿಂದ ತೆರಳಿ ಕಾಡೊಲ ಸಮೀಪದಲ್ಲಿನ ಜಮಿನೊಂದರ ಭಾವಿಗೆ ಬಿದ್ದಿದ್ದಾರೆ ಎನ್ನಲಾಗಿದೆ ಸೋಮವಾರದಂದು ಜಮೀನಿನ ಬಾವಿಯಲ್ಲಿ ನೀರನ್ನು ತರಲು ತೆರಳಿದಂತಹ ಜಮೀನು ಮಾಲೀಕನಿಗೆ ಬಾವಿಯ ಬಳಿ ಚಪ್ಪಲಿ,ತಾಳಿ ಹಾಗೂ ಇನ್ನಿತರ ವಸ್ತುಗಳನ್ನು ಪ್ರತ್ಯೇಕ್ಷ ವಾಗಿದ್ದು ಕೂಡಲೆ ಗ್ರಾಮಸ್ಥರು ಮತ್ತು ಪೊಲೀಸರನ್ನು ಕರೆಸಿ ಪರಿಶೀಲಿಸಿದಾಗ ತಾಯಿ ಸೇರಿ ಮಕ್ಕಳು ಬಾವಿಯಲ್ಲಿ ಬಿದ್ದು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.