ಕೊಪ್ಪಳ:- ಮುಸ್ಲಿಮರದ್ದು ಕಾಂಟ್ರ್ಯಾಕ್ಟ್ ಮ್ಯಾರೇಜ್ ಎಂದು ಹೇಳುವ ಮೂಲಕ ಬಸವರಾಜ್ ರಾಯರೆಡ್ಡಿ ಅವರು ಮತ್ತೊಮ್ಮೆ ನಾಲಗೆ ಹರಿಬಿಟ್ಟಿದ್ದಾರೆ.
ವಿದ್ಯುತ್ ಅವಘಡ: ಬೀದಿ ದೀಪ ಆರಿಸಲು ಹೋಗಿ ಕರೆಂಟ್ ಹೊಡೆದು ಶಿಕ್ಷಕ ಸಾವು!
ನಗರದಲ್ಲಿ ಮಾತನಾಡಿದ ಅವರು, ಮುಸ್ಲಿಮರ ಮದುವೆ ನೋಂದಣಿ ಆಗುತ್ತದೆ. ಮುಸ್ಲಿಮರ ಗುರುಗಳು ನೋಂದಣಿ ಪುಸ್ತಕದಲ್ಲಿ ದಾಖಲಿಸುತ್ತಾರೆ. ಅವರದ್ದು ಕಾಂಟ್ರ್ಯಾಕ್ಟ್ ಮ್ಯಾರೇಜ್ ಬೇಡ ಎಂದರೆ ಬಿಟ್ಟು ಬಿಡುತ್ತಾರೆ ಅದರಲ್ಲೇನು ತಪ್ಪಿಲ್ಲ. ಅವರದ್ದು ಹಿಂದುಗಳ ರೀತಿ ಏಳೇಳು ಜನುಮದ ಬಂಧ ಅಲ್ಲ ಎಂದರು.
ನರೇಂದ್ರ ಮೋದಿ ಗೊತ್ತಿದ್ದು, ಮಾತನಾಡುತ್ತಾರೋ ಏನೋ ಗೊತ್ತಿಲ್ಲ. ಮೋದಿ ಮಾತಾಡಿದ್ದು ತಪ್ಪು. ಮುಸ್ಲಿಮರ ಸ್ಥಿತಿ-ಗತಿ ತೀರಾ ಹೀನಾಯವಾಗಿದೆ. ಕೇಂದ್ರದ ವಕ್ಫ್ ತಿದ್ದುಪಡಿ ಕಾಯ್ದೆಯಾಗಿದೆ ಎನ್ನುವ ಓಬಿಸಿ ಮೀಸಲಾತಿ ತೆಗೆದು, ಮುಸ್ಲಿಮರಿಗೆ ನೀಡುತ್ತಿದ್ದಾರೆ ಎಂದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತಿರುಗೇಟು ನೀಡಿದರು.