ಬೆಂಗಳೂರು: ಸಮೀಕ್ಷೆಯಲ್ಲಿ ಒಕ್ಕಲಿಗ, ಲಿಂಗಾಯತ, ಮುಸ್ಲಿಂ, SC-ST ಅಂತ ಪ್ರಶ್ನೆ ಬರಲ್ಲ ಎಂದು ಕಾಂಗ್ರೆಸ್ ಶಾಸಕ ಬಾಲಕೃಷ್ಣ ಹೇಳಿದ್ದಾರೆ. ವಿಕಾಸಸೌಧದಲ್ಲಿ ಮಾತನಾಡಿದ ಅವರು, ಇಂದು ಜಾತಿಗಣತಿ ವರದಿ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸಭೆ ಮಾಡಲು ಕರೆದಿದ್ದಾರೆ.
ನಮ್ಮ ಅಭಿಪ್ರಾಯಗಳನ್ನ ಸಭೆಯಲ್ಲಿ ಹೇಳ್ತೀವಿ. ನಮ್ಮ ಸಮುದಾಯದ ತೀರ್ಮಾನ ಏನು ಮಾಡಬೇಕು ಅಂತ ನಿರ್ಧಾರ ಮಾಡಲು ಸಭೆ ಕರೆದಿದ್ದಾರೆ. ಸಮೀಕ್ಷೆಯಲ್ಲಿ ಒಕ್ಕಲಿಗ, ಲಿಂಗಾಯತ, ಮುಸ್ಲಿಂ, SC-ST ಅಂತ ಪ್ರಶ್ನೆ ಬರಲ್ಲ.
ಬಿಳಿ ಕೂದಲು ಬುಡದಿಂದಲೇ ಕಡು ಕಪ್ಪಾಗ್ಬೇಕಾ!? ಈ ಹಣ್ಣಿನ ಗಿಡದ ಎಲೆಯನ್ನು ನೀರಲ್ಲಿ ಕುದಿಸಿ ತಲೆಗೆ ಹಚ್ಚಿ ಸಾಕು!
ರಾಜ್ಯದಲ್ಲಿ ವಾಸ ಮಾಡೋ ಜನಸಂಖ್ಯೆ ಎಷ್ಟು ಇದೆ ಅಂತ ತೀರ್ಮಾನ ಮಾಡಬೇಕು. ಸಮೀಕ್ಷೆ ಬಗ್ಗೆ ಸರ್ಕಾರ ಇನ್ನು ಸ್ಪಷ್ಟ ನಿರ್ಧಾರ ಮಾಡಿಲ್ಲ. ಪ್ರತಿ ಮನೆಗೂ ಹೋಗಿ ಸಮೀಕ್ಷೆ ಮಾಡಿ ವರದಿ ಕೊಡಲಿ ಎನ್ನೋದು ನಮ್ಮ ಅಭಿಪ್ರಾಯ. ಪ್ರತಿ ಮನೆಗೆ ಹೋಗಿ ಸರ್ಕಾರ ಸರ್ವೆ ಮಾಡಬೇಕು. ಸಿಎಂ ಹಾಗೂ ಡಿಸಿಎಂಗೆ ಒತ್ತಾಯ ಮಾಡ್ತೀವಿ ಎಂದಿದ್ದಾರೆ.