ದೊಡ್ಡಬಳ್ಳಾಪುರ: ಜಾತ್ರೆಗೆ ಹೋಗಿದ್ದ ವೇಳೆ ಲಕ್ಷಾಂತರ ಬೆಲೆ ಬಾಳುವ ಮಾಂಗಲ್ಯ ಸರ ಕಳ್ಳತನವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮಲ್ಲೋಹಳ್ಳಿಯಲ್ಲಿ ನಡೆದಿದೆ. ರಂಗಮ್ಮ(71) ಮಾಂಗಲ್ಯ ಸರ ಕಳೆದುಕೊಂಡ ಮಹಿಳೆಯಾಗಿದ್ದು,
ಬಿಳಿ ಕೂದಲು ಬುಡದಿಂದಲೇ ಕಡು ಕಪ್ಪಾಗ್ಬೇಕಾ!? ಈ ಹಣ್ಣಿನ ಗಿಡದ ಎಲೆಯನ್ನು ನೀರಲ್ಲಿ ಕುದಿಸಿ ತಲೆಗೆ ಹಚ್ಚಿ ಸಾಕು!
ಏ. 13 ರಂದು ನಡೆದ ರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವದಲ್ಲಿ 50 ಗ್ರಾಂ ತೂಕದ ಮಾಂಗಲ್ಯ ಸರ ಕಳ್ಳತನವಾಗಿದೆ. ನೆಲಮಂಗಲದಿಂದ ಮಲ್ಲೋಹಳ್ಳಿಗೆ ಬಸ್ ನಲ್ಲಿ ಬಂದಿದ್ದರು.
ಜಾತ್ರೆಯ ಸಮಯದಲ್ಲಿ ಮಜ್ಜಿಗೆ ಪಾನಕ ಕುಡಿಯುವ ವೇಳೆ ವೃದ್ದೆ ನೋಡಿಕೊಂಡಾಗ ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ. ಕೂಲಿ ಮಾಡಿ ಮಾಂಗಲ್ಯ ಸರ ಮಾಡಿಸಿಕೊಂಡಿದ್ದ ವೃದ್ಧೆ ಇದೀಗ ಕಂಗಲಾಗಿದ್ದಾರೆ. ದೊಡ್ಡಬೆಳವಂಗಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.