ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲೂಕಿನ ಮಲ್ಲೋಹಳ್ಳಿಯಲ್ಲಿ ನಡೆದ
ರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ವೇಳೆ ಖದೀಮರು ಕೈಚಳಕ ತೋರಿದ್ದಾರೆ.
ನೆಲಮಂಗಲದಿಂದ ಮಲ್ಲೋಹಳ್ಳಿ ಜಾತ್ರೆಗೆ ಕುಟುಂಬದವರೊಂದಿಗೆ ಬಂದಿದ್ದ ವೃದ್ಧೆ ರಂಗಮ್ಮ(71) ಎಂಬುವರ ಮಾಂಗಲ್ಯ ಸರ ದೋಚಿ ಕಳ್ಳರು ಎಸ್ಕೇಪ್ ಆಗಿದ್ದಾರೆ.
ಏ. 13ರಂದು ರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವ ನಡೆಯಿತು. ಜಾತ್ರೆ ಸಮಯದಲ್ಲಿ ಮಜ್ಜಿಗೆ ಪಾನಕ ಕುಡಿಯುವ ವೇಳೆ ಮಾಂಗಲ್ಯಸರ ನೋಡಿಕೊಂಡ ವೃದ್ಧೆ, ಆನಂತರ ನೋಡಿದಾಗ ಕತ್ತಲ್ಲಿ ಇರಲಿಲ್ಲ. ಈ ವೇಳೆ 50 ಗ್ರಾಂ ತೂಕದ ಮಾಂಗಲ್ಯ ಸರ ಕಳವಾಗಿದೆ. ಕೂಲಿ ಮಾಡಿ ರಂಗಮ್ಮ ಮಾಂಗಲ್ಯ ಸರ ಮಾಡಿಸಿಕೊಂಡಿದ್ದರು. ದೊಡ್ಡಬೆಳವಂಗಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.