ಬಳ್ಳಾರಿ: ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್ ರನ್ನು ಬಳ್ಳಾರಿಯಲ್ಲಿ ಅದ್ದೂರಿಯಾಗಿ ಸನ್ಮಾನ ಮಾಡಲಾಯಿತು. ಶಾಸಕ ನಾಗೇಂದ್ರ ಮತ್ತು ಭರತ್ ರೆಡ್ಡಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಮಾನಿಯೊಬ್ಬ ನಾಸೀರ್ ಹುಸೇನ್ ಅವರಿಗೆ ದೃಷ್ಟಿ ತೆಗೆದು ಹಣವನ್ನು ತೂರಿದರು.
ಸಾಮಾನ್ಯ ಕಾರ್ಯಕರ್ತರಾಗಿ ಬಳ್ಳಾರಿಯಿಂದ ರಾಜಕೀಯ ಜೀವನ ಆರಂಭ ಮಾಡಿದ ನಾಸೀರ್ ಹುಸೇನ್, ದೇಶದ ಅತಿದೊಡ್ಡ ಪಕ್ಷವಾದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗೋದು ಅಂದ್ರೆ ಸರಳವಾದ ಮಾತಲ್ಲ. ನಿರಂತರ ಹೋರಾಟದಿಂದ ಈ ಸ್ಥಾನಕ್ಕೆ ಬಂದಿದ್ದಾರೆಂದು ಶಾಸಕ ನಾಗೇಂದ್ರ ಹೇಳಿದರು.
ಇನ್ನೂ ಈ ವೇಳೆ ಕಾರ್ಯಕರ್ತರ ಒತ್ತಾಸೆ ಮೇರೆಗೆ ನಾಗೇಂದ್ರ ಭರ್ಜರಿ ಸ್ಟೆಪ್ ಹಾಕಿ ರಂಜಿಸಿದರು.