ಕೋಲಾರ: ನಮಗೆ ಮಾತ್ರ ಆಚರಣೆ ಮಾಡಲು ಅವಕಾಶ ಮಾಡಿಕೊಡಿ ಎಂದು ಕೋಲಾರದಲ್ಲಿ ವಹ್ನಿಕುಲ ತಿಗಳ ಸಮುದಾಯದಿಂದ ಬೃಹತ್ ಪ್ರತಿಭಟನೆ ಮಾಡಲಾಗಿತು. ಕೋಲಾರ ಜಿಲ್ಲಾಧಿಕಾರಿ ಕಚೇರಿ ಎದುರು ನೂರಾರು ಮಂದಿ ಜಮಾಯಿಸಿ ನಮ್ಮ ಕರಗ ನಮ್ಮ ನಮ್ಮ ಸಂಪ್ರದಾಯ ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ಮಾಡಿದರು.
ಬಿಳಿ ಕೂದಲು ಬುಡದಿಂದಲೇ ಕಡು ಕಪ್ಪಾಗ್ಬೇಕಾ!? ಈ ಹಣ್ಣಿನ ಗಿಡದ ಎಲೆಯನ್ನು ನೀರಲ್ಲಿ ಕುದಿಸಿ ತಲೆಗೆ ಹಚ್ಚಿ ಸಾಕು!
ಎಲ್ಲಾ ಜಾತಿ ಜನಾಂಗದವರು ಕರಗ ಹೊರುವ ಪದ್ದತಿ ಶುರುವಾಗಿದೆ. ಹಾಗಾಗಿ ನಮಗೆ ಮಾತ್ರ ಆಚರಣೆ ಮಾಡಲು ಅವಕಾಶ ಮಾಡಿಕೊಡಿ ಎಂದು ಬೇಡಿಕೆಯಿಟ್ಟಿದ್ದು, ಕೋಲಾರದ ಕಾರಂಜಿಕಟ್ಟೆ ದರ್ಮರಾಯಸ್ವಾಮಿ ದೇವಾಲಯದಿಂದ ಡಿಸಿ ಕಚೇರಿಗೆ ರ್ಯಾಲಿ ಮಾಡಿ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಿದ್ದಾರೆ.
ಕರಗವನ್ನ ಈಗಾಗಲೆ ರಾಜ್ಯ ಸರ್ಕಾರದ ಜಾತಿ ಗಣತಿಗೆ ವಿರೋಧ ವ್ಯಕ್ತಪಡಿಸಿರುವ ವಹ್ನಿಕುಲ ಕ್ಷತ್ರಿಯ ಸಮಾಜ ಮಾತ್ರ ಹೊರುವಂತೆ ಒತ್ತಾಯ ಮಾಡಿದ್ದಾರೆ.