ತುಮಕೂರು : ಪೊಲೀಸ್ ಠಾಣೆಯ ಎದುರು ದಲಿತ ಸಮುದಾಯದವರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ನಡೆದಿದೆ. ಮನೆ ಮಗಳು ಕಿಡ್ನಾಪ್ ಆಗಿದ್ದಾಳೆಂದು ದೂರು ನೀಡಿದರೂ ಪೊಲೀಸರು ಎಫ್ ಐಆರ್ ದಾಖಲಿಸಿಕೊಳ್ಳುತ್ತಿಲ್ಲ ಎಂದು ತಿಪಟೂರು ಪೊಲೀಸ್ ಸ್ಟೇಷನ್ ಎದುರು ಪ್ರತಿಭಟನೆ ನಡೆಸಿದರು.
ರಂಗಸ್ವಾಮಿ ಎಂಬುವರ ಮಗಳನ್ನು ರಕ್ಷಿತ್ ಎಂಬ ಯುವಕ ಕಿಡ್ನಾಪ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕಳೆದ ಏಪ್ರಿಲ್ 12ರಂದು ಆಟೋದಲ್ಲಿ ಬಂದಿದ್ದ ರಕ್ಷಿತ್ ನ ತಾಯಿ ಹಾಗೂ ಆತನ ಸ್ನೇಹಿತರು ರಂಗಸ್ವಾಮಿ ಮಗಳನ್ನ ಕಿಡ್ನಾಪ್ ಮಾಡಿದ್ದಾರೆ. ಈ ಬಗ್ಗೆ ಏಪ್ರಿಲ್ 14ರಂದು ತಿಪಟೂರು ನಗರ ಠಾಣೆಗೆ ದೂರು ನೀಡಿದರೂ ಸಹ ಎಫ್ಐಆರ್ ದಾಖಲಿಸಿಕೊಂಡಿಲ್ಲ. ಕೇವಲ ಮೌಖಿಕವಾಗಿ ಹುಡುಕಿಕೊಡುತ್ತೇವೆ ಎಂದು ವಾಪಾಸ್ ಕಳಿಸಿದ್ದಾರೆ ಎಂದು ರಂಗಸ್ವಾಮಿ ಆರೋಪಿಸಿದ್ದಾರೆ.
ಮಹಾ ”ವಾಟರ್” ಪಾಲಿಟಿಕ್ಸ್ ; ಮಹಾರಾಷ್ಟ್ರ ಸರ್ಕಾರ ವಿಳಂಬ ನೀತಿಗೆ ಜಾರಕಿಹೊಳಿ ಕಿಡಿ
ನಮಗೆ ನ್ಯಾಯ ಬೇಕು, ನಾವು ದಲಿತರು ಎಂಬ ಕಾರಣಕ್ಕೆ ನಮಗೆ ನ್ಯಾಯ ಸಿಗುತ್ತಿಲ್ಲ ಎಂಬ ಆರೋಪಿಸಿ ಪೊಲೀಸ್ ಠಾಣೆಯ ಮುಂದೆ ರಂಗಸ್ವಾಮಿ ಕುಟುಂಬ ಸಮೇತ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದರು. ಈ ಹಿಂದೆಯೂ ದಲಿತ ಸಂಘಟನೆಗಳು ತಿಪಟೂರು ನಗರ ಪೊಲೀಸರ ಮೇಲೆ ಸಾಕಷ್ಟು ಆರೋಪ ಮಾಡಿದ್ದರು.