ಹಾವೇರಿ : ಕ್ಯಾಬಿನೆಟ್ ನಲ್ಲಿ ಜಾತಿಗಣತಿ ವರದಿ ಚರ್ಚೆ ಕುರಿತು ಮಾಜಿ ಸಚಿವ ಬಿ.ಸಿ ಪಾಟೀಲ್ ವ್ಯಂಗ್ಯವಾಡಿದ್ದಾರೆ. ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಮಾತನಾಡಿದ ಅವರು, ಜಾತಿ ಗಣತಿ ವರದಿಯ ಸಮೀಕ್ಷೆಯೂ ವೈಜ್ಞಾನಿಕವಾಗಿಲ್ಲ
ನಮ್ಮ ಮನೆಗೆ ಬಂದು ಎಷ್ಟು ಜನ ಲಿಂಗಾಯತರು ಇದ್ದೀರಿ ಅಂತೇಳಿ ಯಾರಾದರೂ ಬಂದು ಕೇಳಿದ್ರಾ..?, ನಮ್ಮ ಪಠಣ್ ಅವರ ಮನೆಗೆ ಹೋಗಿ ಕೇಳಿದ್ರಾ, ಹನಮಂತಪ್ಪನ ಮನೆಗೆ ಹೋಗಿ ಕೇಳಿದ್ರಾ..? ಕಟ್ಟೆ ಮೇಲೆ ಕುತ್ಕೊಂಡು ಶಾನಬೋಕಿ ಮಾಡ್ಕೊಂಡು..ಏ ಊರಲ್ಲಿ ಲಿಂಗಾಯತ ಎಷ್ಟು ಇದ್ದೀರಿ. ಕುರುಬರು ಎಷ್ಟು ಇದ್ದೀರಿ ಎಂದು ಬರೆದುಕೊಂಡು ಹಳಸಿದ ವರದಿ ತಂದರೆ ಒಪ್ಪಬೇಕಾ..?
ಜಾತಿಗಣತಿ ಜಾರಿಗೆ ತಂದರೆ ಖಚಿತವಾಗಿ ಸರ್ಕಾರ ಪತನವಾಗಲಿದೆ: ರಂಭಾಪುರಿ ಜಗದ್ಗುರು ಸ್ಫೋಟಕ ಹೇಳಿಕೆ
ನೀವು ಮಾಡಿದ ಜಾತಿಗಣತಿ ವರದಿ ಸಮೀಕ್ಷೆ ಸರಿಯಿಲ್ಲ. ವೈಯಕ್ತಿಕ ಲಾಲಸೆ.ನಿಮ್ಮ ಕುರ್ಚಿಯ ಭದ್ರತೆಗೆ ಮಂಡನೆ ಮಾಡ್ತಿರೋದು. ಇದೊಂದು ಹಳಸಿದ ವರದಿಯಾಗಿದೆ. 2013-14 ರಲ್ಲಿ ಪ್ರೇಶ್ ಇತ್ತು ಆವಾಗಲೇ ಮಂಡನೆ ಮಾಡಬೇಕಿತ್ತು. ನಿಮ್ಮ ಕುರ್ಚಿ ಅಲ್ಲಾಡುತ್ತಿದೆ ಎಂದು ಹೇಳಿ, ಡ್ರೈವರ್ಟ್ ಮಾಡಿದರೆ ನಾವು ಒಪ್ಪಲ್ಲ ಎಂದಿದ್ದಾರೆ.