ವಿಜಯಪುರ:- ಜಾತಿ ಗಣತಿ ವಿಚಾರವಾಗಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತಿರ್ಮಾನ ಮಾಡುವ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಜಾತಿಗಣತಿ ಕಿಚ್ಚು: ಯಾವುದೇ ತೀರ್ಮಾನಕ್ಕೆ ಬರದ ಸರ್ಕಾರ: ಚರ್ಚೆ ಅಪೂರ್ಣ, ಒಮ್ಮತಕ್ಕೆ ಬಾರದ ಸಂಪುಟ ಸಭೆ!
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಜಾತಿಗಣತಿ ನಾಲ್ಕು ವರ್ಷವಾದ್ರೂ ತೆಗೆದುಕೊಳ್ಳುವದಿಲ್ಲ. ರಾಜ್ಯದ ಸಿಎಂಗೆ ಜಾತಿ ಜನಗಣತಿ ವಿಚಾರವಾಗಿ ಸಿದ್ದರಾಮಯ್ಯ ನವರಿಗೆ ಪ್ರಾಮಾಣಿಕ ಕಳಕಳಿ ಇಲ್ಲ. ಹಿಂದೂಳಿದ ಸಮುದಾಯಗಳಿಗೆ ನ್ಯಾಯ ಕೊಡುವ ಇಚ್ಛಾಶಕ್ತಿ ಇಲ್ಲ.
ಸಮಾಜಗಳ ನಡುವೆ ಹುಡುಗಾಟಿಕೆ ಮಾಡುತ್ತಿದ್ದಾರೆ. ಸಿಎಂ ಈ ಹುಡುಗಾಟವನ್ನ ಬಿಡಬೇಕು. ತಮ್ಮ ಸಿಎಂ ಸ್ಥಾನ ಭದ್ರಗೊಳಿಸುವ ಸಲುವಾಗಿ ಈ ತರಹದ ಹುಡುಗಾಟಿಕೆ ಸಿಎಂ ಬಿಡಬೇಕು ಎಂದು ವಿಜಯೇಂದ್ರ ಹೇಳಿದ್ದಾರೆ.