ಚಾಮರಾಜನಗರ:- ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಪವಾಡ ಪುರುಷ ಮಲೆಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿ ಎಣೆಕೆ ಕಾರ್ಯ ನಡೆದಿದ್ದು, ದಾಖಲೆಯ ₹3.26 ಕೋಟಿ ಸಂಗ್ರಹವಾಗಿದೆ.
ಈ ರಾಜ್ಯ ಅವರಪ್ಪನದ್ದಾ? ಅಥವಾ ಆ ಎರಡು ಜಾತಿಗಳದ್ದಾ?- ಹರಿಹಾಯ್ದ ಬಸವರಾಜ ಸೂಳಿಭಾವಿ!
ಸಾಲು ಸಾಲು ರಜೆಗಳು ಇದ್ದ ಕಾರಣ ಮುದ್ದು ಮಾದಪ್ಪನ ಹುಂಡಿ ತುಂಬು ತುಳುಕಿದೆ. ಮಾದಪ್ಪನ ಸನ್ನಿಧಿಯಲ್ಲಿ ಸಂಗ್ರಹವಾಗಿದ್ದ ಹಣ ಹಾಗೂ ಚಿನ್ನಾಭರಣಗಳ ಎಣಿಕೆ ಹಾಗೂ ಪರ್ಗಾವಣೆ ಕಾರ್ಯವನ್ನು ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮಿಗಳ ನೇತೃತ್ವದಲ್ಲಿ ನಡೆಸಲಾಯಿತು.
35 ದಿನಗಳಲ್ಲಿ ಹುಂಡಿಯಲ್ಲಿ ಹಣ ಮತ್ತು ಇ ಹುಂಡಿ ಸೇರಿ
3,26,95,339 2, ಚಿನ್ನ 47 ಗ್ರಾಂ, ಹಾಗೂ 2 ಕೆ.ಜಿ.200 ಗ್ರಾಂ ಬೆಳ್ಳಿ ಪದಾರ್ಥ ಸಂಗ್ರಹವಾಗಿದೆ. 11 ವಿದೇಶಿ ನೋಟುಗಳು ಹಾಗೂ 2000 ಮುಖಬೆಲೆಯ 20 ನೋಟುಗಳು ದೊರೆತಿವೆ.
ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ.
ಜಿ.ಎಲ್, ಲೆಕ್ಕಾಧೀಕ್ಷಕ ಗುರುಮಲ್ಲಯ್ಯ, ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಮಹದೇವಪ್ಪ ಬಿ., ಮರಿಸ್ವಾಮಿ ಹಾಗು ಚಾಮರಾಜನಗರ ಜಿಲ್ಲಾಡಳಿತ ಕಚೇರಿಯ ಶ್ರೀಮತಿ ಕಲ್ಯಾಣಮ್ಮ ಹಾಗೂ ಪ್ರಾಧಿಕಾರದ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಕೊಳ್ಳೇಗಾಲದ ಬ್ಯಾಂಕ್ ಆಫ್ ಬರೋಡ ಮುಖ್ಯ ವ್ಯವಸ್ಥಾಪಕರು ಎಣಿಕೆ ಕಾರ್ಯದ ವೇಳೆ ಉಪಸ್ಥಿತರಿದ್ದರು.