ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇನ್ನೇನು ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದ್ರೆ ಶಾಕಿಂಗ್ ಸುದ್ದಿ ಏನಪ್ಪಾ ಅಂದ್ರೆ ಪಂದ್ಯ ನಡೆಯೋದು ಡೌಟ್ ಎನ್ನಲಾಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಮಳೆಯ ಅರ್ಭಟ ಜೋರಾಗಿದೆ. ಸಂಜೆ ಆದರೆ ಸಾಕು ಕಳೆದರೆಡು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಧ್ಯಾಹ್ನದ ವೇಳೆ ಮಳೆ ಮೋಡಗಳು ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ. ಅಲ್ಲದೆ ಈ ದಿನ ಕೂಡ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗೆ ಆಟದ ನಡುವೆ ಅಥವಾ ಆಟಕ್ಕಿಂತ ಮುಚ್ಚೆ ಧಾರಾಕಾರವಾಗಿ ಮಳೆಯಾದರೆ ಆಟ ನಡೆಯುವುದು ಕಷ್ಟವಿದೆ. ವಿಶೇಷವಾಗಿ ನಿರಂತರವಾಗಿ ಮಳೆಯಾದರೆ ಆಟ ಮುಂದೂಡುವ ಸಾಧ್ಯತೆಗಳು ಇವೆ.
ಆದರೆ ಚಿನ್ನಸ್ವಾಮಿ ಕ್ರೀಡಾಂಗಳದಲ್ಲಿ ಮಳೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮಳೆ ಬಂದರೆ ನೆಲಕ್ಕೆ ದೊಡ್ಡ ದೊಡ್ಡ ಟಾರ್ಪಲಿನ್ ಹಾಸಲಾಗುತ್ತದೆ. ಇದರಿಂದ ನೆಲ ಒದ್ದೆಯಾಗುವುದಿಲ್ಲ. ಅಲ್ಲದೆ ನೀರು ಹರಿದು ಹೋಗಲು ದೊಡ್ಡ ಚರಂಡಿ ವ್ಯವಸ್ಥೆ ಕೂಡ ಇದೆ. ಹೀಗಾಗಿ ಸಾಧಾರಣ ಮಳೆಯಾದರೆ ಅಥವ ಜೋರಾಗಿ ಮಳೆ ಬಂದು ನಿಂತು ಹೋದರೆ ಸಮಸ್ಯೆಗಳು ಆಗುವುದಿಲ್ಲ.
ಆದರೆ ನಿರಂತರವಾಗಿ ಜಿಟಿ ಜಿಟಿ ಮಳೆಯಾದರೆ ಪಂದ್ಯ ನಡೆಸುವುದು ತುಂಬಾ ಕಷ್ಟ ಇದೆ. ಹವಾಮಾನ ವರದಿ ಪ್ರಕಾರ ಇಂದು ಬೆಂಗಳೂರಿನಲ್ಲಿ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು ಸಂಜೆಗೆ 22 ಡಿಗ್ರಿ ಸೆಲ್ಸಿಯಸ್ಗೆ ಇಳಿಕೆಯಾಗುವ ಸಾಧ್ಯತೆ ಇದೆ. ಅಲ್ಲದೆ ಎಂದಿನಂತೆ ಮಧ್ಯಾಹ್ನದಿಂದ ಮಳೆ ಮೋಡ ಆವರಿಸಲಿದೆ. ಇದಲ್ಲದೆ ಗುಡುಗು, ಮಿಂಚು, ಗಾಳಿಯೊಂದಿಗೆ ಧಾರಾಕಾರ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ