ಬೆಂಗಳೂರು:- ಇತ್ತೀಚೆಗೆ ಬೆಂಗಳೂರಿನ ಯಾವುದೇ ಮೂಲೆಗೆ ಹೋದ್ರು ಒಂದಲ್ಲ ಒಂದು ಅವಾಂತರ ಸೃಷ್ಟಿ ಮಾಡಿ ಸೈಕೋಗಳ ಹಾಗೆ ವರ್ತನೆ ಮಾಡೋರ ಸಂಖ್ಯೆಗೆನೂ ಕಡಿಮೆಯಿಲ್ಲ , ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡೋದು ವಾಹನಗಳಿಗೆ ಹಾನಿ ಮಾಡೋದು ಕಂಡು ಬರ್ತಿದೆ.ಕುಡಿದ ನಶೆಯಲ್ಲಿ ಸಿಕ್ಕ ಸಿಕ್ಕ ವಾಹನಗಳ ಗ್ಲಾಸ್ ಗಳನ್ನು ಹೊಡೆದು ಅಟ್ಟಹಾಸ ಮೆರೆದಿದ್ದವನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ…
ಕರ್ನಾಟಕ ಸರ್ಕಾರವನ್ನು ಮಲ್ಲಿಕಾರ್ಜುನ ಖರ್ಗೆ ಅವರೇ ಬೀಳಿಸುತ್ತಾರೆ: ಶ್ರೀರಾಮುಲು!
ಹೌದು.. ಕೈಯಲ್ಲಿ ಲಾಂಗ್ ಹಿಡಿದುಕೊಂಡು ಸಿನಿಮಾದಲ್ಲಿ ಬರುವ ವಿಲನ್ ಹಾಗೆ ಕಣ್ಣ ಮುಂದೆ ನಿಲ್ಲಿಸಿದ ವಾಹನಗಳ ಗ್ಲಾಸ್ ನ್ನ ಪುಡಿ ಪುಡಿ ಮಾಡುತ್ತಿರವ ಕುಡುಕನ ಅವಾಂತರ ಕಂಡು ಕೆಆರ್ ಪುರಂ ನ ಜನ ಒಂದು ಕ್ಷಣ ಭಯ ಭೀತರಾಗಿದ್ರು ಎಲ್ಲಿ ತಮ್ಮ ಪ್ರಾಣಕ್ಕು ಕುತ್ತು ಬರುತ್ತೋ ಅಂತ ಭಯದಿಂದ ಓಡಿದ್ರು.
ಇಂದು ಬೆಳಗ್ಗೆ ಸುಮಾರು 5.30 ರ ಸಮಯದಲ್ಲಿ ಕೆ ಆರ್ ಪುರಂ ನ ಮಾರ್ಕೆಟ್ ನಲ್ಲಿ ಇದ್ದಕ್ಕಿದ್ದಂತೆ ನಶೆಯಲ್ಲಿ ತೇಲಾಡುತ್ತಿದ್ದ ಯಜವಕನೊಬ್ಬ ಕೈಯಲ್ಲಿ ಲಾಂಗು ಹಿಡಿದು ಕೊಂಡು ಆವಜ್ ಹಾಕಿಕೊಂಡು ಸುಮಾರು ಏಳೆಂಟು ವಾಹನಗಳ ಟಾಟಾ ಏಸ್ ಮಾರುತಿ ಓಮಿನಿ ಗೂಡ್ಸ್, ಆಟೋ ಸೇರಿದಂತೆ ಹಲವು ವಾಹನಗಳ ಗಾಜುಗಳನ್ನ ಪುಡಿ ಪುಡಿ ಮಾಡಿದ್ದಾನೆ ಇದನ್ನು ನೋಡಿದ ಜನ ಶಾಕ್ ಆಗಿದ್ರು .ಆತನನ್ನು ಅಟ್ಟಾಡಿಸಿ ಹಿಡಿಯುವ ಪ್ರಯತ್ನ ಮಾಡಿದ್ರು.
ಸುಮಾರು ಐದಾರು ನಿಮಿಷಗಳ ನಂತರ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿದ್ದಾರೆ .
ಇನ್ನು ಇವನ ಅವಾಂತರ ಕಂಡು ಯಾರೋ ಒಬ್ಬರು ವಿಡಿಯೋ ಮಾಡಿದ್ರು.ಪೋಲಿಸರಿಗೆ ಮಾಹಿತಿ ನೀಡಿ ದೂರು ಕೂಡ ನೀಡಿದ್ರು ಪ್ರಕರಣ ದಾಖಲಿಸಿ ಕೊಂಡ ಕೆಆರ್ ಪುರಂ ಪೋಲಿಸರು .ದೇವಸಂದ್ರದ ಮೆಕ್ಕಾ ಮಸೀದಿ ಬಳಿ ವಾಸವಾಗಿರೋ ಸೂಫಿಯಾನ್ ನ್ನ ಅರೆಸ್ಟ್ ಮಾಡಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ…