ಚಿತ್ರದುರ್ಗ: ಬೆಂಗಳೂರು ಹಾಗೂ ಹೊಸಪೇಟೆಗಳ ಮಧ್ಯೆ ಸಂಚರಿಸುವ ರೈಲುಗಳಿಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಅಮೃತಾಪುರಗಳಲ್ಲಿ ನಿಲುಗಡೆ ಮಾಡುವಂತೆ ಸಂಸದ ಗೋವಿಂದ ಕಾರಜೋಳ ಕೇಂದ್ರ ಸರಕಾರದ ಅನುಮತಿ ಮೇರೆಗೆ ರೈಲು ನಿಲುಗಡೆಗೆ ಕ್ರಮ ಕೈಗೊಂಡಿದ್ದು, ಸಂಸದ ಗೋವಿಂದ ಕಾರಜೋಳ ರೈಲು ನೊಲುಗಡೆಗೆ ಹಸಿರು ನಿಶಾನೆ ತೋರಿದ್ರು.
ಅಕ್ಷಯ್ ಕುಮಾರ್ ಕೇಸರಿ-2 ಸಿನಿಮಾಗೆ ಬಿಗ್ ಶಾಕ್..ಆನ್ ಲೈನ್ನಲ್ಲಿ ಸಿನಿಮಾ ಲೀಕ್!
ಬೆಂಗಳೂರಿಂದ ಹೊಸದುರ್ಗ-ಹೊಳಲಗಕೆರೆ- ಚಿಕ್ಕಜಾಜೂರು-ಚಳ್ಳಕೆರೆ ಮಾರ್ಗವಾಗಿ ಹೊಸಪೇಟೆಗೆ ಹಾಗೂ ಹೊಸಪೇಟೆಯಿಂದ ಇದೇ ಮಾರ್ಗವಾಗಿ ಬೆಂಗಳೂರಿಗೆ ತೆರಳುವ ಟ್ರೈನ್ ಗಳು ಹೊಳಲ್ಕೆರೆ ಹಾಗೂ ಅಮೃತಾಪುರ ರೈಲು ನಿಲ್ದಾಣಗಳಲ್ಲಿ ರೈಲು ನಿಲುಗಡೆ ಇರಲಿಲ್ಲ. ಹಾಗಾಗಿ ಈ ಮಾರ್ಗದಲ್ಲಿ ರೈಲು ವ್ಯವಸ್ಥೆ ಇದ್ದೂ ಇಲ್ಲದಂತಾಗಿತ್ತು. ಇದರಿಂದ ಸಾಕಷ್ಟು ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಈ ವಿಚಾರಚನ್ನು ಸಂಸದ ಗೋವಿಂದ ಕಾರಜೋಳ ಕೇಂದ್ರ ರೈಲ್ವೆ ಸಚಿವರ ಗಮನಕ್ಕೆ ತಂದು ಈ ಎರಡು ಕಡೆಗಳಲ್ಲೊ ರೈಲು ನಿಲಿಗಡೆಗೆ ಅವಕಾಶ ಮಾಡಿಕೊಟ್ಟಿದ್ದು, ಸ್ಥಳೀಯರಲ್ಲಿ ಸಂಭ್ರಮಕ್ಕೆ ಕಾರವಾಗಿದೆ.