ಬೆಂಗಳೂರು:- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಬಿಗ್ ಫೈಟ್ ನಡೆಯಲಿದೆ. ಆದ್ರೆ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದ ಟಾಸ್ ಪ್ರಕ್ರಿಯೆ ವಿಳಂಬವಾಗಿದೆ. ಹೀಗಾಗಿ ಪಂದ್ಯ ರದ್ದಾಗುವ ಸಾಧ್ಯತೆ ಇದೆ.
ಕಳೆದ ಕೆಲವು ದಿನಗಳಿಂದ, ಬೆಂಗಳೂರಿನಲ್ಲಿ ರಾತ್ರಿ 2 ರಿಂದ 3 ಗಂಟೆಗಳ ಕಾಲ ಮಳೆಯಾಗುತ್ತಿದೆ. ಆದ್ದರಿಂದ, ಪಂದ್ಯ ಕಡಿಮೆ ಓವರ್ಗಳೊಂದಿಗೆ ನಡೆಯುವ ನಿರೀಕ್ಷೆಯಿದೆ.
ಇನ್ನೂ ತುಂತುರು ಮಳೆಯಾಗುತ್ತಿದ್ದು, ಬಿಸಿಸಿಐ ಅಧಿಕಾರಿಗಳು ಯಾವುದೇ ಛತ್ರಿ ಅಥವಾ ಜಾಕೆಟ್ಗಳಿಲ್ಲದೆ ಬೌಂಡರಿಯ ಬಳಿ ಕಾಯುತ್ತಿದ್ದಾರೆ. ತುಂತುರು ಮಳೆ ದು ಸಂಪೂರ್ಣವಾಗಿ ನಿಲ್ಲುವವರೆಗೆ ಆಟ ಸಾಧ್ಯವಿಲ್ಲ. 5 ಓವರ್ಗಳ ಪಂದ್ಯಕ್ಕಾಗಿ ರಾತ್ರಿ 10.54 ರ ವರೆಗೂ ಕಾದು ನಂತರ ತಡವಾಗಿ ಪ್ರಾರಂಭಿಸಬಹುದು ಎಂದು ಹೇಳಲಾಗಿದೆ.