ಬೆಂಗಳೂರು:- ಡ್ರೈವರ್ ಗೆ ಗನ್ ತೋರಿಸಿ ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದ ರೌಡಿಶೀಟರ್ ಅಂಡ್ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ; ರಿಕ್ಕಿ ರೈ ಪೊಲೀಸರ ಮುಂದೆ ಹೇಳಿದ್ದಿಷ್ಟು.
ರೌಡಿಶೀಟರ್ ಹೆಂಡತಿ ಜೊತೆ ಡ್ರೈವರ್ ಅಕ್ರಮ ಸಂಬಂಧ ಹೊಂದಿರುವ ಆರೋಪ ಕೇಳಿ ಬಂದಿದೆ. ಡ್ರೈವರ್ ಮೇಲೆ ಆವಲಹಳ್ಳಿ ಮಂಜೇಶ್ ಅಂಡ್ ಟೀಂನಿಂದ ಗನ್ ತೋರಿಸಿ ಹಲ್ಲೆ ನಡೆದಿದೆ. ಇದೀಗ ಆವಲಹಳ್ಳಿ ಮಂಜೇಶ್ ಅಂಡ್ ಟೀಂ ಅನ್ನು ಅರೆಸ್ಟ್ ಮಾಡಲಾಗಿದೆ.
ಬಂಧಿತರಲ್ಲಿ ಮಂಜೇಶ್, ಮಾಜಿ ಕಾರ್ಫೋರೇಟರ್ ಸೋಮಣ್ಣನ ಅಣ್ಣನ ಮಗನ ಕೊಲೆ ಕೇಸ್ ಆರೋಪಿ ಆಗಿದ್ದಾನೆ. ವಿನೋದ್ ಕೊಲೆ ಕೇಸ್ ನಲ್ಲಿ ಐದು ವರ್ಷಗಳು ಜೈಲಿನಲ್ಲಿದ್ದ. ರಿಲೀಸ್ ಆದಾಗ ನೈಸ್ ರೋಡ್ ಬಳಿ ಹುಡುಗರ ಜೊತೆ ಶೋ ಕೊಟ್ಟು ಬಂದಿದ್ದ. ನೂರಾರು ಹುಡುಗರ ಜೊತೆ ಹತ್ತಾರು ಕಾರುಗಳಲ್ಲಿ ಶೋ ನಡೆಸಿದ್ದ ಎನ್ನಲಾಗಿದೆ.
ಮಂಜೇಶ್ ಹೆಂಡತಿ ಜೊತೆ ಡ್ರೈವರ್ ಕಿರಣ್ ಅಕ್ರಮ ಸಂಬಂಧ ಹೊಂದಿದ್ದಾನೆಂದು ಆರೋಪಿಸಲಾಗಿದ್ದು, ಟ್ರಿಪ್ ಗೆ ಹೋಗಲು ಮಹಿಳೆವೊಬ್ಬರಿಂದ ಮಂಜೇಶ್ ಗಾಡಿ ಬುಕ್ ಮಾಡಿಸಿದ್ದ. ಕೋಟಿಲಿಂಗೇಶ್ವರಕ್ಕೆ ಹೋಗಬೇಕು ಎಂದು ಗಾಡಿ ಬುಕ್ ಮಾಡಿದ್ರು. ಮಿನಿಬಸ್ ಬಂದ ನಂತರ ಕೋಟಿಲಿಂಗೇಶ್ವರ ಬದಲಿಗೆ ಶಿವಗಂಗೆಗೆ ಕರೆದುಕೊಂಡು ಹೋಗಿದ್ರು. ಹೋಗುವಾಗ ಬಸ್ ನಲ್ಲಿ ಆರೋಪಿಗಳು, ಮಾರಣಾಂತಿಕ ಹಲ್ಲೆ ಮಾಡಿದ್ದರು.
ನನ್ನ ಹೆಂಡತಿ ನಿನಗೆ ಯಾಕೆ ಹಣ ಕೊಟ್ಟಿದ್ದು ಯಾಕೆ..? ನಿನಗೆ ನನ್ನ ಹೆಂಡತಿ ಗೂ ಏನು ಸಂಬಂಧ ಎಂದು ಅವಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆ ಮಾಡಿದ್ದಾರೆ. ಎರಡು ದಿನಗಳ ಕಾಲ ಕಿಡ್ನಾಪ್ ಮಾಡಿಕೊಂಡು ಗ್ಯಾಂಗ್ ಹಲ್ಲೆ ಮಾಡಿದರು. ವಿವಸ್ತ್ರಗೊಳಿಸಿ ಹಲ್ಲೆ ಮಾಡಿ,, ವಿಡಿಯೋ ಮಾಡಿಕೊಂಡು ಬೆದರಿಕೆ ಹಾಕಿದ್ದಾರೆ.
ಲಕ್ಷಾಂತರ ರೂಪಾಯಿ ಹಣ ಕೊಡುವಂತೆ ಬೆದರಿಕೆ ಹಾಕಿದ್ದರೆಂದು ಕಿರಣ್ ದೂರು ನೀಡಿದ್ದರು. ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರು, ರೌಡಿ ಶೀಟರ್ ಮಂಜೇಶ್ ನನ್ನು ಅರೆಸ್ಟ್ ಮಾಡಿದ್ದಾರೆ