Close Menu
Ain Live News
    Facebook X (Twitter) Instagram YouTube
    Wednesday, June 25
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಆರ್.ಅಶೋಕ್ ಯಾವತ್ತು ಸತ್ಯ ಹೇಳಲ್ಲ ; ಸಾಮ್ರಾಟ್ ವಿರುದ್ಧ ಸಿಎಂ ಸಿದ್ದು ಗರಂ

    By AIN AuthorApril 20, 2025
    Share
    Facebook Twitter LinkedIn Pinterest Email
    Demo

    ಬೆಳಗಾವಿ : ಜಾತಿ ಗಣತಿ ವರದಿ ಮೂಲಪ್ರತಿ ಸಿಎಂ ಸಿದ್ದರಾಮಯ್ಯ  ಮನೆಯಲ್ಲಿದೆ ಎಂಬ ಆರ್.ಅಶೋಕ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ ಅವರು ಆರ್.ಅಶೋಕ್‌ ವಿರುದ್ಧ ಗುಡುಗಿದ್ದರು. ಆರ್. ಅಶೋಕ ಯಾವತ್ತು ಸತ್ಯ ಹೇಳಿದ್ದಾನೆ. ಮೂಲಪ್ರತಿ ನಮ್ಮ ಮನೆಯಲ್ಲಿ ಇರೋಕೆ ಹೇಗೆ ಸಾಧ್ಯವಾಗುತ್ತೆ..? ಸೀಲ್ಡ್ ಕವರ್ ನಲ್ಲಿ ಇದ್ದ ವರದಿ ಕ್ಯಾಬಿನೆಟ್ ನಲ್ಲಿ ಎಲ್ಲರ ಎದುರು ಓಪನ್ ಮಾಡಿದ್ದೇವೆ. ಬರೀ ಸುಳ್ಳು ಹೇಳುವುದು. ಬಿಜೆಪಿಯವರು ಸತ್ಯ ಸುಳ್ಳು ಮಾಡ್ತಾರೆ, ಸುಳ್ಳು ಸತ್ಯ ಮಾಡುತ್ತಾರೆ. ಆರ್‌ಎಸ್‌ಎಸ್.ನವರು ಅವರಿಗೆ ಹೇಳಿಕೊಟ್ಟಿದ್ದಾರೆ ಎಂದು.

     

    ಜಾತಿ ಗಣತಿ ಬೇಗ ಜಾರಿ ಮಾಡಿ ಎಂದು ರಾಹುಲ್ ಗಾಂಧಿ ಪತ್ರ ಬರೆದಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನನಗೆ ಯಾವ ಪತ್ರನೂ ಬರೆದಿಲ್ಲ. ರಾಹುಲ್‌ ಗಾಂಧಿ ಜೊತೆಗೆ ಚರ್ಚೆ ಮಾಡಿದ್ದೀನಿ. ಚರ್ಚೆ ಮಾಡಿ ಮಂಡಿಸಿದ್ದೇನೆ ಅಂದ್ರೆ ಏನರ್ಥ. ಅವರ ಒಪ್ಪಿಗೆ ಇಲ್ಲದೇ ಮಂಡಿಸಕ್ಕೆ ಆಗುತ್ತಾ ಎಂದರು. ಸಂಪುಟದಲ್ಲಿ ಯಾರೂ ಜಾತಿ ಗಣತಿಗೆ ವಿರೋಧ ಮಾಡಿಲ್ಲ‌‌. ಕ್ಯಾಬಿನೆಟ್ ನಲ್ಲಿ ಯಾರು ಜೋರಾಗಿ ಮಾತನಾಡಿಲ್ಲ. ನಿಮ್ಮ ಅಭಿಪ್ರಾಯ ಹೇಳಿ ಎಂದಿದ್ದೇನೆ,  ಅಭಿಪ್ರಾಯ ಕೊಟ್ಟಮೇಲೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

    ಈ ಸರ್ಕಾರ ಯಾವಾಗ ತೊಲಗುತ್ತೊ ಎಂಬ ಆಶಾಭಾವನೆಯಲ್ಲಿ ಜನರಿದ್ದಾರೆ: ಆರ್. ಅಶೋಕ್‌

    ದೇಶದಲ್ಲಿ ಸಮಾನತೆ ಬರಬೇಕು. ಎಲ್ಲಾ ಜಾತಿಯ ಬಡವರಿಗೆ ವಿದ್ಯಾಭ್ಯಾಸ ಸಿಗಬೇಕು. ಬಡವರು ಬಡವರಾಗಿಯೇ ಇರಬೇಕಾ? ಮುಸಲ್ಮಾನರಿಗೆ ಶಿಕ್ಷಣ ಸಿಗಬೇಕಾ ಬೇಡ್ವಾ..? ಎಲ್ಲ ಜಾತಿಯಲ್ಲಿ ಇರುವ ಬಡವರಿಗೆ ಶಿಕ್ಷಣ ಸಿಗಬೇಕಾ ಬೇಡವಾ. ನಾನು ಮೆರಿಟ್ ಮೇಲೆ ಈಗ ಮಾತನಾಡಲ್ಲ, ನೆಕ್ಸ್ಟ್ ಕ್ಯಾಬಿನೆಟ್ ನಲ್ಲಿ ಮಾತನಾಡ್ತೀನಿ ಎಂದರು.

    Demo
    Share. Facebook Twitter LinkedIn Email WhatsApp

    Related Posts

    ಪವಾಡ ಪುರುಷ ಜಗದ್ಗುರು ಶ್ರೀ ನಾಗಲಿಂಗ ಅಜ್ಜನ 144 ನೇ ಆರಾಧನಾ ಮಹೋತ್ಸವ

    June 25, 2025

    ದೇವನಹಳ್ಳಿ ಚಲೋ: ಬೃಹತ್ ಪ್ರತಿಭಟನೆಗೆ ಸಜ್ಜಾದ ರೈತರು; ಬಿಗಿ ಬಂದೋಬಸ್ತ್!

    June 25, 2025

    ಡಿವೈಡರ್ ಗೆ ಬಸ್ ಡಿಕ್ಕಿ: ತಪ್ಪಿದ ದುರಂತ.. 20 ಮಂದಿ ಸೇಫ್!

    June 25, 2025

    ಗುತ್ತಿಗೆದಾರನ ಕೊಲೆ ಪ್ರಕರಣ: ಆರೋಪಿ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

    June 25, 2025

    ಭಾರಿ ಗಾಳಿ-ಮಳೆ: ಇಂದು ಕೊಡಗಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ!

    June 25, 2025

    ಇನ್ಸ್ಟಾದಲ್ಲಿ ಪರಿಚಯ: ಪ್ರಿಯಕರನ ಮೀಟ್ ಮಾಡಲು ಬಂದವಳು ಮಸಣ ಸೇರಿದಳು!

    June 25, 2025

    ಹಳೆಯ ದ್ವೇಷ: ತಡರಾತ್ರಿ ಮೂವರ ಬರ್ಬರ ಕೊಲೆ.. ಬೆಚ್ಚಿಬಿದ್ದ ಕಲಬುರಗಿ ಮಂದಿ!

    June 25, 2025

    ಸಿದ್ದರಾಮಯ್ಯ ಸರ್ಕಾರದಲ್ಲಿ ಲಂಚವತಾರ: ಶಿಕ್ಷಕರ ಸಂಬಳ ರಿಲೀಸ್ಗೆ ಕೊಡಬೇಕಂತೆ ಲಕ್ಷ ಲಕ್ಷ ಲಂಚ!

    June 25, 2025

    ಧಾರಕಾರ ಮಳೆ: ಹಾಸನದ ಈ ತಾಲೂಕುಗಳ ಶಾಲಾ-ಕಾಲೇಜುಗಳ ರಜೆ ವಿಸ್ತರಣೆ- ಇಂದು ಸ್ಕೂಲ್ ಒಪನ್ ಇರಲ್ಲ!

    June 25, 2025

    ಆಘಾತಕಾರಿ ಘಟನೆ: ಹೃದಯಾಘಾತಕ್ಕೆ 15 ವರ್ಷದ ಬಾಲಕಿ ಸಾವು!

    June 24, 2025

    ತಮ್ಮ ಅಧಿಕಾರ ಇದ್ದಾಗ ಕುಮಾರಸ್ವಾಮಿ ಏನ್ ಮಾಡ್ತಿದ್ರು!? ಮಾತಿನಲ್ಲೇ ಚಾಟಿ ಬೀಸಿದ HK ಪಾಟೀಲ್!

    June 24, 2025

    ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ!

    June 24, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.