ಚಿತ್ರದುರ್ಗ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಚಿತ್ರದುರ್ಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇವಲ ಮತ ಬ್ಯಾಂಕ್ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಆಡಳಿತ ಮಾಡುತ್ತಿದೆ. ಇದರ ವಿರುದ್ಧ ಈಗಾಗಲೇ ಜನ ಆಕ್ರೋಶ ಹೊಂದಿದ್ದಾರೆ.ಹೀಗಾಗಿ ವಿರೋಧ ಪಕ್ಷವಾಗಿ ನಾವು ಸುಮ್ಮನೇ ಇರಲಾಗಲ್ಲ. ನಮ್ಮ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಜನಾಕ್ರೋಶ ಯಾತ್ರೆ ನಡೆಯುತ್ತಿದೆ. ಎರಡು ಹಂತದಲ್ಲಿ ಮುಗಿದ ಜನಾಕ್ರೋಶ ಯಾತ್ರೆ ನಡೆಯಲಿದ್ದು, ಮೂರನೇ ಹಂತದಲ್ಲಿ 25 ರಂದು ಚಿತ್ರದುರ್ಗಕ್ಕೆ ಯಾತ್ರೆ ಬರಲಿದೆ ಎಂದರು.
ರಾಜ್ಯದಲ್ಲಿ ಕಾನೂನು ಸರಿಯಿಲ್ಲ ಅಂದ್ರೆ ಏನೂ ನಡೀತಿಲ್ಲ ಅಂತರ್ಥ. ನಿವೃತ್ತ ಡಿಐಜಿ ಕೊಲೆಯಾಗಿದ್ದು, ಹೆಂಡತಿ ಮಗಳು ಮಾಡಿದ್ದಾರೆ ಅಂತಿದ್ದಾರೆ. ಆದರೆ ಈ ಕುರಿತು ಉನ್ನತ ತನಿಖೆ ಆಗಬೇಕು. ಹಲವರು ಶಾಸಕರು, ಸಚಿವರ ಹೆಸರು ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡರು. ಮಾಜಿ ಸಚಿವ ನಾಗೇಂದ್ರ, ಸಚಿವ ಪ್ರಿಯಾಂಕ್ ಖರ್ಗೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಚಾವ್ ಗೆ ಪ್ರಯತ್ನ ಮಾಡಿದರು ಎಂದು ಆರೋಪಿಸಿದರು. ಜಾತಿ ಜನಗಣತಿ ಜಾತಿ, ಜಾತಿಗಳನ್ನು ಒಡೆಯುವ ಪ್ರಯತ್ನವಾಗಿದ್ದು, ಕಾಂತರಾಜ್ ಆಯೋಗದ ಮೂಲ ವರದಿ ಕಳ್ಳತನ ಆಗಿದೆ ಅಂತಾರೆ. ಆದರೆ ಆ ವರದಿ ಎಲ್ಲಿ ಹೋಯಿತು, ಈ ವರದಿ ಕಳ್ಳತನವಾಗಿದ್ದು, ಸಿದ್ಧರಾಮಯ್ಯ ಆಪ್ತರ ಅವಧಿಯಲ್ಲಿ ಕಳವಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ದಲಿತರಿಗೆ ಡೇಂಜರ್, ದಲಿತ ಕಾಂಗ್ರೆಸ್ ಶಾಸಕರು ಇನ್ನೂ ಡೇಂಜರ್ . ಈ ಬಗ್ಗೆ ಎಐಸಿಸಿ ಅಧ್ಯಕ್ಷರಿಂದ, ಸ್ಥಳಿಯ ದಲಿತ ನಾಯಕರು ಯಾರೊಬ್ಬರೂ ಮಾತನಾಡಿಲ್ಲ. ಇದನ್ನು ದಲಿತರಾಗಲೀ ನಾಯಕರಾಗಲೀ ಬಾಯಿ ಬಿಚ್ಚಲ್ಲ. ವೆಸ್ಟ ಬಮಗಾಲಲ್ಲಿ ಮುಸ್ಮಾನರು ದಲಿತರ ಮನೆಗೆ ನುಗ್ಗಿ ಹಲ್ಲೆ ಮಾಡಿದರು. ಆದ್ರೆ ಈ ಬಗ್ಗೆ ಕಾಂಗ್ರೆಸ್ ಒಂದು ಮಾತೂ ಎತ್ತಿಲ್ಲ. ರಾಹುಲ್ ಗಾಂಧಿ ವೇಮುಲ ಆ್ಯಕ್ಟ್ ತರತೀವಿ ಅಂತಾರೆ. ಕಂಬಾಲಪಲ್ಲಿ ಆ್ಯಕ್ಟ್ ಯಾವಾಗ ತರತೀರಿ..?, ಆದ್ರೆ ದಲಿತರಿಗೆ ನ್ಯಾಯ ಯಾಕೆ ಕೊಡಸ್ತಿಲ್ಲ..? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಮತ್ತೊಂದು ಹೆಸರೇ ಕರಪ್ಶನ್. ಬಿಜೆಪಿಗೂ ನ್ಯಾಶನಲ್ ಹೆರಾಲ್ಡ್ ಗೂ ಯಾವುದೇ ಸಂಬಂಧ ಇಲ್ಲ. ನ್ಯಾಶನಲ್ ಹೆರಾಲ್ಡ್ ವಿಚಾರದಲ್ಲಿ ಕಾಂಗ್ರೆಸ್ ಕೊರ್ಟ್ ವಿರುದ್ಧ ಪ್ರತಿಭಟನೆ ಮಾಡಿತ್ತಿದೆ, ಬಿಜೆಪಿ ವಿರುದ್ಧ ಅಲ್ಲ. ಬೆಳಗಾವಿಯಲ್ಲಿ ಅಂಬೇಡ್ಕರ್ ಗೆ ಗಾಂಧೀಜಿ ಭೇಟಿಗೆ ಕಾಂಗ್ರೆಸ್ ಅವಕಾಶ ನೀಡಲಿಲ್ಲ ಎಂದ್ ಪ್ರಶ್ನಿಸಿದರು.