Close Menu
Ain Live News
    Facebook X (Twitter) Instagram YouTube
    Tuesday, June 24
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಹೆಣದ ಬಾಯಲ್ಲಿ ಚಿನ್ನ ಯಾಕೆ ಇಡ್ತಾರೆ!? ನಿಮಗಿದು ಗೊತ್ತಾ!?

    By AIN AuthorApril 21, 2025
    Share
    Facebook Twitter LinkedIn Pinterest Email
    Demo

    ಸನಾತನ ಧರ್ಮದಲ್ಲಿ, ಒಬ್ಬ ವ್ಯಕ್ತಿಯ ಹುಟ್ಟಿನಿಂದ ಸಾಯುವವರೆಗೆ ಒಟ್ಟು 16 ವಿಧದ ಆಚರಣೆಗಳಿವೆ, ಅವುಗಳಲ್ಲಿ ಒಂದು ಅಂತಿಮ ಸಂಸ್ಕಾರವಾಗಿದೆ. ಈ ಎಲ್ಲಾ ಆಚರಣೆಗಳನ್ನು ಗರುಡ ಪುರಾಣದಲ್ಲಿ ವಿವರವಾಗಿ ವಿವರಿಸಲಾಗಿದೆ.

    ನೀವು ಯಾವಾಗಲೂ ಯಂಗ್ ಆಗಿ ಕಾಣಿಸ್ಬೇಕಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!

    ಎಲ್ಲಾ ಆಚರಣೆಗಳನ್ನು ಗರುಡ ಪುರಾಣದಲ್ಲಿ ವಿವರವಾಗಿ ವಿವರಿಸಲಾಗಿದೆ. ಗರುಡ ಪುರಾಣದಲ್ಲಿ ಒಬ್ಬ ವ್ಯಕ್ತಿಯ ಹುಟ್ಟಿನಿಂದ ಸಾಯುವವರೆಗೆ ಅನೇಕ ಪ್ರಮುಖ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಸನಾತನ ಧರ್ಮದಲ್ಲಿ ಒಬ್ಬ ವ್ಯಕ್ತಿ ಸತ್ತಾಗ ಆ ಮನೆಯಲ್ಲಿ ಗರುಡ ಪುರಾಣವನ್ನು ಓದಲಾಗುತ್ತದೆ ಮತ್ತು ಮನೆಯಲ್ಲಿ ಒಲೆಯನ್ನು ಹಚ್ಚುವುದಿಲ್ಲ ಅಥವಾ ಯಾವುದೇ ರೀತಿಯಾದ ಆಹಾರವನ್ನು ಸಿದ್ಧೊಡಿಸುವುದಿಲ್ಲ. ಅಂತಹ ಸಮಯದಲ್ಲಿ, ಸಂಬಂಧಿಕರು ಅಥವಾ ನೆರೆಹೊರೆಯವರಿಂದ ಆಹಾರ ಬರುತ್ತದೆ

    ಯಾರಾದರೂ ಸತ್ತ ನಂತರ, ಅವರ ಅಂತ್ಯಕ್ರಿಯೆಯ ಸಮಯದಲ್ಲಿ ಅವರ ಬಾಯಿಯಲ್ಲಿ ಚಿನ್ನ, ಗಂಗಾಜಲ ಮತ್ತು ತುಳಸಿ ಎಲೆಗಳನ್ನು ಇಡುವುದನ್ನು ನಾವು ಆಗಾಗ್ಗೆ ಕೇಳುತ್ತೇವೆ ಅಥವಾ ನೋಡುತ್ತೇವೆ. ನಾವು ಇದನ್ನು ಒಂದು ಸಂಪ್ರದಾಯವಾಗಿ ಮಾಡುತ್ತಿದ್ದರೂ, ಅದರ ಹಿಂದೆ ಧಾರ್ಮಿಕ ಮತ್ತು ಸ್ವಲ್ಪ ಮಟ್ಟಿಗೆ ವೈಜ್ಞಾನಿಕ ದೃಷ್ಟಿಕೋನವಿದೆ

    ಇದರ ಹಿಂದಿನ ಕಾರಣ ಹಲವರಿಗೆ ಗೊತ್ತಿಲ್ಲ. ಆದರೆ ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಆದ್ದರಿಂದ ಜನರು ಈ ಸಂಪ್ರದಾಯವನ್ನು ಇಂದಿಗೂ ಅನುಸರಿಸುತ್ತಿದ್ದಾರೆ, ಮತ್ತೆ ಅದನ್ನು ಅನುಸರಿಸುವುದು ಅಗತ್ಯವೆಂದು ನಂಬುತ್ತಾರೆ.

    ಸತ್ತವರ ಬಾಯಿಯಲ್ಲಿ ಚಿನ್ನ ಇಡುವುದರ ಹಿಂದಿನ ಕಾರಣ ಹಾಗೂ ತುಳಸಿ ಮತ್ತು ಗಂಗಾ ನೀರನ್ನು ಇಡುವುದರ ಹಿಂದಿನ ಕಾರಣಗಳನ್ನು ನಾವು ಈ_ಗ ತಿಳಿದುಕೊಳ್ಳೋಣ ಬನ್ನಿ…

    ಸನಾತನ ಧರ್ಮದಲ್ಲಿ, ಸಾವನ್ನು ದೇಹದ ನಾಶವೆಂದು ಮಾತ್ರ ಪರಿಗಣಿಸಲಾಗುತ್ತದೆ, ಆದರೆ ಆತ್ಮವನ್ನು ಅಮರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಮೃತರ ಆತ್ಮಕ್ಕೆ ಶಾಂತಿ ಮತ್ತು ಮೋಕ್ಷ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಈ ಸಂಪ್ರದಾಯ ಅನುಸರಿಸುತ್ತಾರೆ.

    ಮೃತರ ಬಾಯಿಯಲ್ಲಿ ಚಿನ್ನವನ್ನು ಇಡಲು ಕಾರಣವೆಂದರೆ ಚಿನ್ನವನ್ನು ಪವಿತ್ರ ಮತ್ತು ಮಂಗಳಕರ ಲೋಹವೆಂದು ಪರಿಗಣಿಸಲಾಗುತ್ತದೆ. ಪುರಾಣಗಳ ಪ್ರಕಾರ, ಚಿನ್ನವು ಮೃತರ ಆತ್ಮಕ್ಕೆ ಆಧ್ಯಾತ್ಮಿಕ ಪರಿಶುದ್ಧತೆಯ ಅನುಭವವನ್ನು ನೀಡುತ್ತದೆ. ಹೀಗಾಗಿ ಆತ್ಮವು ಮೋಕ್ಷವನ್ನು ಪಡೆಯುತ್ತದೆ ಎಂದು ನಂಬಲಾಗಿದೆ.

    ಗಂಗಾ ನೀರನ್ನು ಶುದ್ಧ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಮೃತರ ದೇಹದ ಮೇಲೆ ಗಂಗಾ ಜಲವನ್ನು ಸಿಂಪಡಿಸಿ ಬಾಯಿಯಲ್ಲಿ ಹಾಕುವುದು ಆತ್ಮದ ಶುದ್ಧತೆಯನ್ನು ಸಂಕೇತಿಸುತ್ತದೆ. ಆತ್ಮವು ದೇಹವನ್ನು ಬಿಟ್ಟು ಸುಲಭವಾಗಿ ಹೊರಹೋಗಲು ಗಂಗಾ ನೀರು ಸಹಾಯ ಮಾಡುತ್ತದೆ ಮತ್ತು ರಾಕ್ಷಸರು ಅದನ್ನು ತೊಂದರೆಗೊಳಿಸುವುದಿಲ್ಲ ಎಂದು ನಂಬಲಾಗಿದೆ.

    ತುಳಸಿ ಎಲೆಗಳನ್ನು ವಿಷ್ಣುವಿಗೆ ಪ್ರಿಯವೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ಗ್ರಂಥಗಳಲ್ಲಿ ಮೃತರ ಬಾಯಿಯಲ್ಲಿ ತುಳಸಿಯನ್ನು ಇಡುವುದರಿಂದ ಯಮನ ಶಾಪದಿಂದ ರಕ್ಷಣೆ ದೊರೆಯುತ್ತದೆ ಎಂದು ಹೇಳಲಾಗಿದೆ. ಕೆಲವು ಗ್ರಂಥಗಳ ಪ್ರಕಾರ, ತುಳಸಿ ಮತ್ತು ಗಂಗಾ ನೀರಿನ ಉಪಸ್ಥಿತಿಯಲ್ಲಿ ಆತ್ಮವು ಸ್ವರ್ಗವನ್ನು ಪಡೆಯುತ್ತದೆ ಎಂದು ಹೇಳಲಾಗುತ್ತದೆ

    ಈ ಸಂಪ್ರದಾಯಗಳನ್ನು ಕೇವಲ ನಂಬಿಕೆಯಿಂದ ಮಾತ್ರವಲ್ಲ, ಆಧ್ಯಾತ್ಮಿಕ ನಂಬಿಕೆ ಮತ್ತು ಮಾನಸಿಕ ತೃಪ್ತಿಗಾಗಿಯೂ ಅನುಸರಿಸಲಾಗುತ್ತದೆ. ಇದರ ಹಿಂದಿನ ಏಕೈಕ ಉದ್ದೇಶವೆಂದರೆ ಅಗಲಿದ ಆತ್ಮಕ್ಕೆ ಶಾಂತಿ ತರುವುದು ಮತ್ತು ಅದರ ಮುಂದಿನ ಪ್ರಯಾಣವನ್ನು ಸುಗಮಗೊಳಿಸುವುದು ಎಂದು ಹೇಳಲಾಗುತ್ತದೆ

    Demo
    Share. Facebook Twitter LinkedIn Email WhatsApp

    Related Posts

    ಕರ್ನಾಟಕದಲ್ಲಿ ಇಂದಿನಿಂದ ಮುಂಗಾರು ಚುರುಕು: ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ!

    June 24, 2025

    ಬೆಳ್ಳಂ ಬೆಳಗ್ಗೆ ‘ಲೋಕಾ’ ರೇಡ್: ಕರ್ನಾಟಕದ ಹಲವೆಡೆ ದಾಳಿ, ಪರಿಶೀಲನೆ!

    June 24, 2025

    Power Cut: ಬೆಂಗಳೂರಿನ ಬಹುತೇಕ ಪ್ರದೇಶದಲ್ಲಿ ಇಂದು ಪವರ್ ಕಟ್!

    June 24, 2025

    Breaking News: ಬಿಬಿಎಂಪಿ ಎಂಜಿನಿಯರ್ ಪ್ರಕಾಶ್ ಮನೆ ಮೇಲೆ ಲೋಕಾಯುಕ್ತ ದಾಳಿ!

    June 24, 2025

    ಮಂಗಳವಾರ ಸಂಜೆ ಹೀಗೆ ಮಾಡಿದ್ರೆ ಕಷ್ಟಗಳೆಲ್ಲಾ ಕ್ಷಣಾರ್ಧದಲ್ಲಿ ಮಾಯವಾಗತ್ತೆ!

    June 24, 2025

    ದಾಳಿ-ಪ್ರತಿದಾಳಿ: ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ.. ಟ್ರಂಪ್ ವಿರುದ್ಧ ಇರಾನ್ ಪ್ರತೀಕಾರ!

    June 24, 2025

    ಹಿಂದಿಯ ಖ್ಯಾತ ಸೀರಿಯಲ್ ಶೂಟಿಂಗ್ ಸೆಟ್ ನಲ್ಲಿ ಭೀಕರ ಬೆಂಕಿ ಅವಘಡ: ಅರ್ಧಕ್ಕೆ ನಿಲ್ಲುತ್ತಾ ಧಾರವಾಹಿ?

    June 23, 2025

    ಚಿನ್ನ ವಂಚಕಿ ಐಶ್ವರ್ಯಾ ಗೌಡಗೆ ಭಾರೀ ಸಂಕಷ್ಟ: ED ಇಂದ ಆಸ್ತಿ ಮುಟ್ಟುಗೋಲು!

    June 23, 2025

    ಇ.ಡಿ ಫೇಸ್ ಮಾಡೋಕೆ ನಮ್ಮ ಕುಟುಂಬ ರೆಡಿ: DCM ಡಿಕೆ ಶಿವಕುಮಾರ್!

    June 23, 2025

    ಬೆಳಗ್ಗೆ ಎದ್ದ ಕೂಡಲೇ ತಲೆನೋವು ಬರುತ್ತಾ!? ಹಾಗಿದ್ರೆ ರಾತ್ರಿ ಮಾಡುವ ಈ ತಪ್ಪು ಕಾರಣ!

    June 23, 2025

    ಇಡಿ ತನಿಖೆಗೆ ಸಂಪೂರ್ಣ ಸಹಕಾರ ಕೊಟ್ಟಿದ್ದೇನೆ: ಡಿಕೆ ಸುರೇಶ್!

    June 23, 2025

    ನಿಮಗಿದು ಗೊತ್ತಾ!? ಕರಿಬೇವಿನ ಎಲೆಗಳನ್ನು ನೆನೆಸಿ ನೀರು ಕುಡಿಯುವುದರಿಂದ, ಸಿಗುವ ಆರೋಗ್ಯ ಬೆನಿಫಿಟ್ ಎಷ್ಟು ಗೊತ್ತಾ!?

    June 23, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.