ಬೆಂಗಳೂರು: ಪಹಲ್ಗಾಮ್ ನಲ್ಲಿ 26 ಜನರ ಹತ್ಯೆ ಪ್ರಕರಣ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ಮುಂದುವರೆದಿದೆ. ನಾನೂ ಕೂಡ ಬಾಂಬ್ ಕಟ್ಟಿಕೊಂಡು ಪಾಕಿಸ್ತಾನ ವಿರುದ್ಧ ಯುದ್ಧ ಮಾಡೋಕೆ ರೆಡಿ ಎಂದಿದ್ದ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟಕ್ಕರ್ ಕೊಟ್ಟಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶೋಭಾ ಕರಂದ್ಲಾಜೆ, ಜಮೀರ್ ಅಹಮದ್ ಬಾಂಬ್ ಕಟ್ಟಿಕೊಂಡು ಪಾಕಿಸ್ತಾನಕ್ಕೆ ಹೋಗೋದು ಬೇಡ. ಸಂಸಾರ ಸಮೇತ ಪಾಕಿಸ್ತಾನದಲ್ಲಿ ಹೋಗಿ ಎರಡು ವರ್ಷ ಇದ್ದು ಬರಲಿ. ಪ್ರಕರಣದಲ್ಲಿ ದಾರಿ ತಪ್ಪಿಸಲು ಏನು ಬೇಕಾದರೂ ಮಾತಾಡಬಹುದು ಅಂತ ಮಾತಾಡ್ತಾರೆ ಅಂತ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ನಾಲಾಯಕ್ ಗೃಹ ಸಚಿವ
ರಾಜ್ಯದ ಜನರನ್ನ ರಕ್ಷಣೆ ಮಾಡಲು ಪರಮೇಶ್ವರ್ ಇರಲಿ, ಇಲ್ಲದಿದ್ರೆ ಗೃಹ ಇಲಾಖೆಗೆ ರಾಜೀನಾಮೆ ಕೊಟ್ಟು ಪರಮೇಶ್ವರ್ ಬೇರೆ ಇಲಾಖೆ ತಗೊಳ್ಳಲಿ. ಗೃಹ ಇಲಾಖೆ ನಿಭಾಯಿಸಲು ಪರಮೇಶ್ವರ್ ಗೆ ಶಕ್ತಿ ಇಲ್ಲ. ಪರಮೇಶ್ವರ್ ಒಬ್ಬ ನಾಲಾಯಕ್ ಗೃಹ ಸಚಿವ ಎಂದು ವಾಗ್ದಾಳಿ ನಡೆಸಿದ ಶೋಭಾ ಕರಂದ್ಲಾಜೆ, ಕರ್ನಾಟಕದ ನವ ಟಿಪ್ಪು ಸುಲ್ತಾನ ಸಿದ್ದರಾಮಯ್ಯ. ರಾಜ್ಯ ಟಿಪ್ಪು ಸುಲ್ತಾನ್ ದರ್ಬಾರ್ ರಾಜ್ಯದಲ್ಲಿ ನಡೀತಿದೆ ಎಂದು ಆರೋಪಿಸಿದ್ದಾರೆ.
ಕನ್ನಡ ನನ್ನ ಎರಡನೇ ಭಾಷೆ..ನಿಮ್ಮ ತೀರ್ಪನ್ನು ಸ್ವಾಗತಿಸ್ತೇನೆ ಎಂದ ಗಾಯಕ ಸೋನು ನಿಗಮ್!
ನಿಮಗೆ 135 ಸೀಟ್ ಕೇವಲ ಮುಸ್ಲಿಂರಿಂದ ಬಂದಿಲ್ಲ, ಹಿಂದೂಗಳು ಸಹ ವೋಟ್ ಹಾಕಿದ್ದಾರೆ. ಹಿಂದೂಗಳ ರಕ್ಷಣೆ ಯಾರು ಮಾಡ್ತಾರೆ..? ಉತ್ತರದಲ್ಲಿ ಒಬ್ಬರು ಪಪ್ಪು, ದಕ್ಷಿಣ ಭಾರತದಲ್ಲಿ ಟಿಪ್ಪು. ಅಲ್ಲಿ ಪಾಕಿಸ್ತಾನ ಪರ ಮಾತನಾಡ್ತಾರೆ. ಇಲ್ಲಿ ಒಂದು ವರ್ಗದ ಪರ ಮಾತನಾಡ್ತಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.