Close Menu
Ain Live News
    Facebook X (Twitter) Instagram YouTube
    Saturday, May 17
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ₹29 ಕೋಟಿ ರೂ ವೆಚ್ಚದಲ್ಲಿ ನೂತನ ನ್ಯಾಯಾಲಯ ಸಂಕೀರ್ಣ: ಶಾಸಕ ಕೆ.ಎಂ.ಉದಯ್

    By Author AINMay 17, 2025
    Share
    Facebook Twitter LinkedIn Pinterest Email
    Demo

    ಮಂಡ್ಯ : ಮದ್ದೂರು ಪಟ್ಟಣದಲ್ಲಿ ತಾಲೂಕು ಮಟ್ಟದ ವಿವಿಧ ಕಛೇರಿಗಳು ಬಾಡಿಗೆ ಕಟ್ಟಡಗಳಲ್ಲಿದ್ದು, ಅವುಗಳನ್ನು ಒಂದೇ ಸಂಕೀರ್ಣದಲ್ಲಿ ಕ್ರೂಡಿಕರಿಸುವ ಬಗ್ಗೆ ಯೋಜನೆ ಸಿದ್ಧವಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಹೇಳಿದರು‌. ಮದ್ದೂರು ತಾಲೂಕಿನ ಕದಲೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ಮೇಲಂತಸ್ಥಿನ ಕಟ್ಟಡ ನಿರ್ಮಾಣ ಹಾಗೂ ಚನ್ನಸಂದ್ರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

    ಮದ್ದೂರು ಪಟ್ಟಣದಲ್ಲಿ ನೂತನವಾಗಿ ನ್ಯಾಯಲಯ ಸಂಕೀರ್ಣವನ್ನು 29 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲು ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆ ಅಂತಿಮ ಹಂತದಲ್ಲಿದ್ದು, ಆದಷ್ಟು ಬೇಗ ಮುಖ್ಯಮಂತ್ರಿಗಳ ಅನುಮೋದನೆ ಪಡೆದು ನ್ಯಾಯಾಲಯ ಸಂಕೀರ್ಣಕ್ಕೆ ಚಾಲನೆ ನೀಡಲಾಗುವುದು.

    ಗರ್ಭಿಣಿಯರು ಪಾನೀಪುರಿ ತಿನ್ನುವುದು ಒಳ್ಳೆಯದೋ, ಕೆಟ್ಟದ್ದೋ..? ಇಲ್ಲಿದೆ ಮಾಹಿತಿ

    ಹಾಲಿ ಇರುವ ನ್ಯಾಯಾಲಯದ ಕಟ್ಟಡದಲ್ಲಿ ನ್ಯಾಯಾಲಯದ ಸಭಾಂಗಣಗಳ ಸ್ಥಳಾವಕಾಶ ಕೊರತೆಯಿದ್ದು, ಬಹಳಷ್ಟು ಸಮಸ್ಯೆಯಾಗುತ್ತಿದೆ. ಹೀಗಾಗಿ ನೂತನ ಕಟ್ಟಡದ ನಿರ್ಮಾಣದ ಬಳಿಕ ಹಾಲಿ ಕಟ್ಟಡವನ್ನು ತಾಲೂಕು ಆಡಳಿತದ ಸುಪರ್ದಿಗೆ ತೆಗೆದುಕೊಂಡು ಈಗ ಬಾಡಿಗೆ ಕಟ್ಟಡಗಳಲ್ಲಿರುವ ತಾಲೂಕು ಮಟ್ಟದ ವಿವಿಧ ಇಲಾಖೆಗಳನ್ನು ನ್ಯಾಯಾಲಯದ ಸಂಕೀರ್ಣಕ್ಕೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

    ಈಗಾಗಲೇ ತಾಲೂಕು ಪಂಚಾಯತಿ ನೂತನ ಕಟ್ಟಡಕ್ಕೆ 4 ಕೋಟಿ ರೂ ವೆಚ್ಚದಲ್ಲಿ ಚಾಲನೆ ನೀಡಲಾಗುತ್ತಿದ್ದು, ಎಲ್ಲಾ ಕಟ್ಟಡಗಳು ಒಂದೇ ಕಡೆ ಇರುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಕಛೇರಿಯಿಂದ ಕಛೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗದು ಎಂದು ತಿಳಿಸಿದರು.

    ಇನ್ನು ಶಾಸಕರು ಕ್ಷೇತ್ರದಲ್ಲಿ ಗುದ್ದಲಿಪೂಜೆ ಮಾಡೋದಷ್ಟೆ ಕೆಲಸ, ಯಾವ ಕಾಮಗಾರಿಗಳು ಪ್ರಗತಿಯಲ್ಲಿಲ್ಲ ಎಂಬ ವಿರೋಧಿಗಳ ಅಪಪ್ರಚಾರಕ್ಕೆ ನಾನು ಭರವಸೆ ನೀಡುವ ವ್ಯಕ್ತಿಯಲ್ಲ ಕೆಲಸ ಮಾಡಿ ತೊರಿಸುವ ವ್ಯಕ್ತಿ ಈಗಾಗಲೇ ಎರಡೇ ವರ್ಷದಲ್ಲಿ ಕ್ಷೇತ್ರದಾದ್ಯಂತ 1 ಸಾವಿರ ಕೋಟಿ ಅನುದಾನ ತಂದು ಅಭಿವೃದ್ಧಿ ಪರ್ವ ಪ್ರಾರಂಭ ಮಾಡಿದ್ದೇನೆ. ಇದನ್ನು ಸಹಿಸದ ಕೆಲ ವಿರೋಧಿಗಳು ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ.

    ಕ್ಷೇತ್ರದಾಂದ್ಯತ ಕೆಲವು ಶುಭಾ ಸಮಾರಂಭಗಳಲ್ಲಿ ನಾನು ಭಾಗಿಯಾಗುತ್ತಿದ್ದೇನೆ.
    ನನಗೆ ಸಮಯದ ಅಭಾವವಿದೆ. ಮುಂದಿನ 1 ತಿಂಗಳಲ್ಲಿ ಅಭಿವೃದ್ಧಿ ಕಾರ್ಯಗಳ ಸಾಕ್ಷಿ ಗುಡ್ಡೆಯನ್ನು ವಿರೋಧಿಗಳ ಮುಂದೆ ಇಡಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ತಿರುಗೇಟು ನೀಡಿದರು.

    ಮದ್ದೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕೆಂದು ಪಣ ತೊಟ್ಟಿದ್ದೇನೆ. ಹೀಗಾಗಿ ನನ್ನ ಸ್ವಗ್ರಾಮದಿಂದಲೇ ಇದಕ್ಕೆ ಮುನ್ನುಡಿ ಬರೆದಿದ್ದೇನೆ. ಈಗಾಗಲೇ ಗ್ರಾಮಗಳ ರಸ್ತೆಯೂ ಒತ್ತುವರಿಯಿಂದಾಗಿ ಕಿರಿದಾದ ರಸ್ತೆಗಳಾಗಿದ್ದವು. ನಿಡಘಟ್ಟ ಗ್ರಾಮದಿಂದ ಕದಲೂರು ಮಾರ್ಗವಾಗಿ ಕುಣಿಗಲ್ ರಸ್ತೆವರೆಗೂ ಅದನ್ನು ತೆರವು ಕಾರ್ಯಾಚರಣೆ ಮೂಲಕ ರಸ್ತೆ ಅಗಲೀಕರಣ ಮಾಡಲಾಗಿದೆ. ಕೆರೆ ಅಭಿವೃದ್ಧಿ ಜೊತೆಗೆ ಪಾದಚಾರಿ ಮಾರ್ಗ, ಸೌಂದರ್ಯಕರಣ, ಡಿಜಿಟಲ್ ಲೈಬ್ರರಿ, ಪಾರ್ಕ್, ಅತ್ಯಾಧುನಿಕ ಬೀದಿ ದೀಪಗಳು, ಕಾಲುವೆಗಳಿಗೆ ಚೆಕ್ ಡ್ಯಾಂ ಹಾಗೂ ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದರು.

    ಇದೇ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮೇಗೌಡ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್ ಮುಖಂಡರಾದ ಕೆ.ಎಂ.ರವಿ, ಚಂದ್ರು, ಲೋಕೇಶ್ ಮತ್ತಿತರರು ಇದ್ದರು.

    ವರದಿ : ಗಿರೀಶ್ ರಾಜ್ ಮಂಡ್ಯ

    Post Views: 6

    Demo
    Share. Facebook Twitter LinkedIn Email WhatsApp

    Related Posts

    ಅಂತಾಪುರ ಗ್ರಾಮದಲ್ಲಿCEPMIZ ಯೋಜನೆ ಅಡಿಯಲ್ಲಿ ಸಮುದಾಯ ಸಹಭಾಗಿತ್ವ ಕಾರ್ಯಕ್ರಮ

    May 17, 2025

    ಹೃದಯ ವಿದ್ರಾವಕ ಘಟನೆ: ತಾಳಿ ಕಟ್ಟಿದ ಕೆಲವೇ ನಿಮಿಷಗಳಲ್ಲಿ ವರನಿಗೆ ಹೃದಯಾಘಾತ!

    May 17, 2025

    ಕೊತ್ತೂರು ಮಂಜುನಾಥ್‌ʼಗೆ ಸಿಂಧೂರಕ್ಕೂ ಸಿಂಧೂರಿಗೂ ವ್ಯತ್ಯಾಸವೇ ಗೊತ್ತಿಲ್ಲ: ಪ್ರತಾಪ್ ಸಿಂಹ

    May 17, 2025

    BJP Tiranga Yatra: ಬಿಜೆಪಿ ನಾಯಕರಿಂದ ತಿರಂಗಾ ಯಾತ್ರೆ..!

    May 17, 2025

    Heavy Rain: ರಾಜ್ಯದ ಜನರನ್ನೂ ಇನ್ನೂ 3 ದಿನ ಕಾಡಲಿದೆ ಮಳೆ..! ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

    May 17, 2025

    ಹೊಸ ಪಕ್ಷ ಕಟ್ಟೇನು, ಆದ್ರೆ ನನ್ನ ಹೆಣ ಕೂಡ ಕಾಂಗ್ರೆಸ್ʼಗೆ ಹೋಗಲ್ಲ: ಶಾಸಕ ಯತ್ನಾಳ್

    May 17, 2025

    ಆರೋಗ್ಯ ಶಿಬಿರ-ದುಡಿಯೋಣ ಬಾ ಅಭಿಯಾನ.. ಗಮನ ಸೆಳೆದ ಲಂಬಾಣಿ ಡ್ಯಾನ್ಸ್ !

    May 17, 2025

    ಹುಬ್ಬಳ್ಳಿ: ಮಹಿಳಾ ಸಬಲೀಕರಣಕ್ಕಾಗಿ ಸಮೀರಾ ಖಾನ್ ಸೈಕಲ್ ಯಾತ್ರೆ!

    May 17, 2025

    Crime News: ಬಂಟ್ವಾಳದಲ್ಲಿ ವ್ಯಕ್ತಿ ಮೇಲೆ ತಲ್ವಾರ್‌ನಿಂದ ಅಟ್ಯಾಕ್‌!

    May 17, 2025

    ಭೀಕರ ರಸ್ತೆ ಅಪಘಾತ: ನಾಲ್ವರು ದುರ್ಮರಣ, ಓರ್ವ ಗಂಭೀರ!

    May 17, 2025

    ಅಪರಿಚಿತ ವಾಹನ ಡಿಕ್ಕಿ: ಪಾದಚಾರಿ ಸಾವು, ಚಾಲಕ ಎಸ್ಕೇಪ್!

    May 16, 2025

    ನವಲಿ ಸಮಾನಾಂತರ ಅಣೆಕಟ್ಟು ಬದಲು ನಮ್ಮ ಪಾಲಿನ ನೀರನ್ನು ಪಂಪ್ ಮಾಡಿ ಬಳಸಿಕೊಳ್ಳಲು ಚಿಂತನೆ: DCM ಡಿ.ಕೆ.ಶಿ!

    May 16, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.