ಹಾಸನ : ಪರೀಕ್ಷೆ ಅನ್ನೋದು ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟ. ಹಾಸನದಲ್ಲಿ
ಹಸೆಮಣೆ ಏರಿದ ನವವಧು ಮಾಂಗಲ್ಯ ಧಾರಣೆ ಆಗುತ್ತಲೇ ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿ ಬರೆಯುವ ಮೂಲಕ ಮಾದರಿಯಾಗಿದ್ದಾಳೆ.
ಹಾಸನ ನಗರದ ಚನ್ನಪಟ್ಟಣ ಬಡಾವಣೆಯ ಕುಮಾರ್ ಅನಸೂಯ ದಂಪತಿ ಪುತ್ರಿ ಕವನಾ ಅವರನ್ನು ಹಾಸನದ ಗುಡ್ಡೆನಹಳ್ಳಿಯ ದಿನೇಶ್ ಜೊತೆ ಮದುವೆ ನಿಶ್ಚಯವಾಗಿತ್ತು. ಹಾಸನದ ಪ್ರೈಡ್ ಪದವಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ಓದುತ್ತಿರುವ ಕವನಾ, ಕೊನೆಯ ಸಬ್ಜೆಕ್ಟ್ ಹಿನ್ನೆಲೆಯಲ್ಲಿ ಮಾಂಗಲ್ಯಧಾರಣೆಯಾಗುತ್ತಲೇ ಮದುವೆ ಮನೆಯಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದಿದ್ದಾಳೆ. ಈ ಮೂಲಕ ಮದುವೆಗಿಂತಲೂ ಪರೀಕ್ಷೆ ಕೂಡ ಮುಖ್ಯ ಎಂಬ ಸಂದೇಶವನ್ನು ಕವನಾ ರವಾನಿಸಿದ್ದಾಳೆ.
ಮಾಂಗಲ್ಯಧಾರಣೆ ಬಳಿಕ ಪರೀಕ್ಷಾ ಕೇಂದ್ರಕ್ಕೆ ಬಂದು ಬಿಕಾಂ ಫೈನಲ್ ಪರೀಕ್ಷೆ ಬರೆದ ನವವಧು: Video
By Author AIN