Close Menu
Ain Live News
    Facebook X (Twitter) Instagram YouTube
    Friday, June 6
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಮದ್ದೂರು ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ಅಮಾನತಿಗೆ ಶಾಸಕ ಕೆ.ಎಂ.ಉದಯ್ ಸೂಚನೆ

    By AIN AuthorMay 29, 2025
    Share
    Facebook Twitter LinkedIn Pinterest Email
    Demo

    ಮಂಡ್ಯ :-  ಮಂಡ್ಯದಲ್ಲಿ ಸಂಚಾರ ಪೊಲೀಸರು ಬೈಕ್ ಅಡ್ಡಗಟ್ಟಿದ್ದ ಪರಿಣಾಮ ಬೈಕ್ ನಿಂದ ಬಿದ್ದು ಮೃತಪಟ್ಟ ಮಗುವಿನ ಮನೆಗೆ ಮದ್ದೂರು ಶಾಸಕ ಕೆ.ಎಂ.ಉದಯ್ ಬುಧವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

    ಪ್ರೀತಿಸಿ ಮದುವೆಯಾಗಿದ್ದವಳ ಕೊಂದು ಎಸ್ಕೇಪ್ ಆಗಿದ್ದ ಪತಿ ಅರೆಸ್ಟ್!

    ಮದ್ದೂರು ತಾಲ್ಲೂಕಿನ ಗೊರವನಹಳ್ಳಿ ಗ್ರಾಮದ ಅಶೋಕ್ ಅವರ ಮನೆಗೆ ಶಾಸಕ ಕೆ.ಎಂ.ಉದಯ್ ಭೇಟಿ ನೀಡುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ, ನೋವು ಕಂಡು ಶಾಸಕರು ದುಃಖಿತರಾದರು.

    ಮದ್ದೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲೇ ಸೂಕ್ತ ಚಿಕಿತ್ಸೆ ನೀಡಿದ್ದರೆ, ಪೋಷಕರು ಮಂಡ್ಯದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ, ಇಂತಹ ದುರ್ಘಟನೆಯೂ ಸಂಭವಿಸುತ್ತಿರಲಿಲ್ಲ ಎಂದು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಗಳ ವಿರುದ್ಧ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಶಾಸಕರೆದುರು ದೂರುಗಳ ಸುರಿಮಳೆಗೈದು ಆಕ್ರೋಶ ವ್ಯಕ್ತಪಡಿಸಿದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಂಡಿದ್ದು, ಮೂವರು ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದ್ದು, ತನಿಖೆಯ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

    ನಾಯಿ ಕಡಿತಕ್ಕೆ ಮದ್ದೂರು ಪಟ್ಟಣದ ತಾಲೂಕು ಆಸ್ಪತ್ರೆಯಲ್ಲೆ ಸೂಕ್ತ ಚಿಕಿತ್ಸೆ ನೀಡದೇ ಮತ್ತು ವೈದ್ಯರು ತುರ್ತಾಗಿ ಮಗುವನ್ನು ಮಂಡ್ಯ ಆಸ್ಪತ್ರೆಗೆ ಕಳುಹಿಸಲು ಆಂಬುಲೆನ್ಸ್ ವ್ಯವಸ್ಥೆಯನ್ನು ಸಹ ಮಾಡದಿರುವುದೇ ಅಪಘಾತಕ್ಕೆ ವೈದ್ಯರು ಸಹ ಪರೋಕ್ಷವಾಗಿ ಕಾರಣವಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಹೀಗಾಗಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಬಾಲಕೃಷ್ಣರನ್ನು  ಅಮಾನತು ಮಾಡಲು ಆರೋಗ್ಯ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಅವರನ್ನು ಪೋನ್ ಮೂಲಕ ಸಂಪರ್ಕಿಸಿ, ಅಮಾನತುಗೊಳಿಸುವಂತೆ ವಿನಂತಿಸಲಾಗಿದೆ ಎಂದು ತಿಳಿಸಿದರು.

    ಮಗು ರಿತೀಕ್ಷ ಅವರ ಕುಟುಂಬಕ್ಕೆ ನಮ್ಮ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ತಾತ್ಕಾಲಿಕವಾಗಿ ಆರ್ಥಿಕ ನೆರವು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹೆಚ್ಚಿನ ಸಹಾಯವನ್ನು ಸರ್ಕಾರದಿಂದ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.

    ಇದೇ‌ ವೇಳೆ ಪುರಸಭಾ ಅಧ್ಯಕ್ಷೆ ಕೋಕಿಲ ಅರುಣ್ ಕುಮಾರ್, ಉಪಾಧ್ಯಕ್ಷ ಪ್ರಸನ್ನಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚಲುವರಾಜು, ಮನ್ ಮುಲ್ ನಿರ್ದೇಶಕ ಹರೀಶ್, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಪಿ.ರಾಘವ, ಮಧುಕುಮಾರ್, ಮತ್ತಿತರರು ಇದ್ದರು.

    ವರದಿ : ಗಿರೀಶ್ ರಾಜ್ ಮಂಡ್ಯ

    Demo
    Share. Facebook Twitter LinkedIn Email WhatsApp

    Related Posts

    ಟಿಪ್ಪರ್ ಗೆ ತಗುಲಿದ ಕರೆಂಟ್ ವೈಯರ್.. ದಿಢೀರ್ ಹೊತ್ತಿಕೊಂಡ ಬೆಂಕಿ: ಚಾಲಕ ಸಾವು!

    June 5, 2025

    ಹುಬ್ಬಳ್ಳಿ: ಅಮೀನಗಡ “ವಿಜಯಾ ಕರದಂಟು” ಮತ್ತು ಸ್ವೀಟ್ ಮಾರ್ಟ್ ಉದ್ಘಾಟನೆ!

    June 5, 2025

    ಪೊಲೀಸ್ ಇಲಾಖೆಗೆ ಕಳಂಕ ತರುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ: ಪ್ರತಾಪ್ ಸಿಂಹ

    June 5, 2025

    RCB Victory Parade Stampede: ಸಿಎಂ, ಡಿಸಿಎಂ ಘಟನೆಯಿಂದ ಬೇಜಾರಾಗಿದ್ದಾರೆ – ಶಾಸಕ ಪ್ರದೀಪ್ ಈಶ್ವರ್

    June 5, 2025

    ಪರಿಸರ ವಿರುದ್ದವಾದುದನ್ನು ಮಾನವರಾದರು ಮಾಡಬೇಡಿ: ಡಾ. ರವಿ ಜಮಖಂಡಿ

    June 5, 2025

    ಹುಬ್ಬಳ್ಳಿ: ಐಪಿಓಗೆ ಅರ್ಜಿ ಸಲ್ಲಿಸಿದ ಏಕಸ್!

    June 5, 2025

    ಕಲಘಟಗಿ: ಅನಧಿಕೃತವಾಗಿ ವಾಸಿಸುತ್ತಿದ್ದವರಿಗೆ ‘ಪಟ್ಟಾ’ ವಿತರಣೆ’

    June 5, 2025

    ಭೀಕರ ಅಪಘಾತ ಬಾಲಕ ಸೇರಿದಂತೆ ಇಬ್ಬರ ಸಾವು : ಹಲವರ ಸ್ಥಿತಿ ಗಂಭೀರ!

    June 5, 2025

    ಕೋಲಾರ: ಮುಳಬಾಗಿಲು ಪಟ್ಟಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ..!

    June 4, 2025

    ಬಾಲಾಜಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ನ್ಯೂರೋ ನೇವಿಗೇಶನ್ ಸಿಸ್ಟಂ ಅಳವಡಿಕೆ

    June 4, 2025

    ಕಳಸಾ – ಬಂಡೂರಿ ಹಾಗೂ ಮಲಪ್ರಭಾ ನದಿ ಜೋಡಣೆ ಹೋರಾಟ ಸಮಿತಿ ತೀವ್ರ ಖಂಡನೆ

    June 4, 2025

    ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ: ದಂಪತಿ ಸೇರಿ ಮೂವರು ಸ್ಥಳದಲ್ಲಿಯೇ ಸಾವು..!

    June 4, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.