ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಧಪಟ್ಟಂತೆ ನಟ ದರ್ಶನ್ ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ ನೀಡಿದೆ.
Rohit Sharma: ಐಪಿಎಲ್ ಇತಿಹಾಸದಲ್ಲಿ ಎರಡೆರಡು ದಾಖಲೆ ಬರೆದ ಹಿಟ್ ಮ್ಯಾನ್ ರೋಹಿತ್ ಶರ್ಮಾ!
ವಿದೇಶ ಪ್ರಯಾಣಕ್ಕೆ ಅನುಮತಿ ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಆದೇಶವನ್ನು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ಕೋರ್ಟ್, ಜುಲೈ 1 ರಿಂದ ಜುಲೈ 27 ರವರೆಗೆ ಸಿನಿಮಾ ಚಿತ್ರೀಕರಣಕ್ಕಾಗಿ ವಿದೇಶ ಪ್ರವಾಸ ಮಾಡಲು ಅನುಮತಿ ನೀಡಿದೆ.
ಇದೀಗ ನಟನಿಗೆ ವಿದೇಶಕ್ಕೆ ಹೋಗಲು 25 ದಿನಗಳ ಕಾಲ ಅನುಮತಿ ನೀಡಿದೆ ಕೋರ್ಟ್. ಜೂನ್ 1ರಿಂದ ಜೂನ್ 25ರವರೆಗೆ ವಿದೇಶಕ್ಕೆ ಹೋಗಲು ಅವಕಾಶ ನೀಡಿದೆ. ಸಿನಿಮಾ ಶೂಟಿಂಗ್ ಹಿನ್ನೆಲೆ ದುಬೈ ಹಾಗೂ ಯೂರೋಪ್ ಗೆ ಹೋಗಲು ಅನುಮತಿ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ರು ದರ್ಶನ್. ನ್ಯಾ. ಐ.ಪಿ ನಾಯ್ಕ್ ಅವರಿಂದ ಕೊನಗೂ ಆದೇಶ ಬಂದಿದೆ.
ಇನ್ನು ದರ್ಶನ್ ಸಿನಿಮಾ ವಿಚಾರಕ್ಕೆ ಬರೋದರೆ, ಡೆವಿಲ್ ಚಿತ್ರದ ನಿರೀಕ್ಷೆ ಜಾಸ್ತಿ ಇದೆ. ಈ ಸಿನಿಮಾದಲ್ಲಿ ದರ್ಶನ್ ವಿಲನ್ ಆಗಿದ್ದಾರೆ. ಆದರೆ, ಟೈಟಲ್ ಅಲ್ಲಿ ವಿಲನ್ ದಿ ಹೀರೋ ಅಂತಲೇ ಹೇಳಿದೆ. ಹಾಗಾಗಿಯೇ ದರ್ಶನ್ ಇಲ್ಲಿ ವಿಲನ್ ಕೂಡ ಹೌದು.
ಹೀರೂ ಕೂಡ ಹೌದು ಅನ್ನೋ ಫೀಲ್ ಬರುತ್ತದೆ. ಆದರೆ ಡೈರೆಕ್ಟರ್ ಮಿಲನ ಪ್ರಕಾಶ್ ಈ ಬಗ್ಗೆ ಹೆಚ್ಚಿಗೆ ಏನೂ ಹೇಳಿಕೊಂಡಿಲ್ಲ.ಕಾಟೇರ ಚಿತ್ರದ ಕೆಲಸ ಮುಗಿದ್ಮೇಲೆ ದರ್ಶನ್, ಈ ಸಿನಿಮಾದ ಶೂಟಿಂಗ್ ಅಲ್ಲಿಯೇ ಬ್ಯುಸಿ ಆದ್ರು.
ಆದರೆ ಶೂಟಿಂಗ್ ಟೈಮ್ನಲ್ಲಿ ಎಡಗೈಗೆ ಪೆಟ್ಟು ಕೂಡ ಮಾಡಿಕೊಂಡ್ರು. ಆದರೂ ಆ್ಯಕ್ಷನ್ ಸೀನ್ ಮುಗಿಸಿದ್ಮೇಲೆನೆ ಎಡಗೈ ಶಸ್ತ್ರ ಚಿಕಿತ್ಸೆ ಮಾಡಿಸಿದರು. ಸದ್ಯ, ಈ ಹಿಂದೆ ಹೈಕೋರ್ಟ್ ಜಾಮೀನು ನೀಡುವಾಗ ಬೆಂಗಳೂರು ಬಿಡುವಂತಿಲ್ಲ ಎಂಬ ಷರತ್ತು ವಿಧಿಸಿತ್ತು. ಕೊನೆಗೆ ದೇಶಾದ್ಯಂತ ಪ್ರಯಾಣಕ್ಕೆ ಅನುಮತಿ ನೀಡಿತ್ತು. ಸಿನಿಮಾ ಚಿತ್ರೀಕರಣ ಕಾರಣ ನೀಡಿ ಷರತ್ತುಗಳನ್ನು ಸಡಿಸಿಲಿಕೊಂಡಿದ್ದರು.