Close Menu
Ain Live News
    Facebook X (Twitter) Instagram YouTube
    Tuesday, June 3
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    IPL 2025: ಮುಂಬೈ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದ ಗುಜರಾತ್.. Qualifier 2 ಗೆ ಲಗ್ಗೆಯಿಟ್ಟ MI

    By AIN AuthorMay 31, 2025
    Share
    Facebook Twitter LinkedIn Pinterest Email
    Demo

    ಚಂಡೀಗಢದ ಮುಲ್ಲನ್ ಪುರ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿ ಆಡಿದ್ದರು. ಇದರಲ್ಲಿ ಗುಜರಾತ್ ತಂಡವನ್ನು ಹೀನಾಯವಾಗಿ ಸೋಲಿಸಿದ Mi Qualifier 2 ಗೆ ಲಗ್ಗೆಯಿಟ್ಟಿದೆ.

    ಥಿಯೇಟರ್‌ಗಳಿಗೆ ಬೆಂಕಿ ಹಚ್ಚಬೇಕಾಗುತ್ತದೆ ಹುಷಾರ್: ನಾರಾಯಣಗೌಡ ಎಚ್ಚರಿಕೆ!

    ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ್ದ 229 ರನ್ ಗಳ ಗುರಿಯನ್ನು ಬೆನ್ನು ಹತ್ತಿದ್ದ ಗುಜರಾತ್ ಟೈಟನ್ಸ್ ತಂಡ ಹೀನಾಯ ಸೋಲುಕಂಡಿತು. ಆ ಮೂಲಕ ಹಾಲಿ ಐಪಿಎಲ್ ಟೂರ್ನಿಯ ಪ್ರಶಸ್ತಿ ರೇಸ್ ನಿಂದ ಹೊರಬಿತ್ತು,

    ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ರಿಯಾನ್ ರಿಕಲ್ಟನ್ ಬದಲಾಗಿ ಕಣಕ್ಕಿಳಿದ ಜಾನಿ ಬೈರ್ ಸ್ಟೋ ಅಬ್ಬರದ ಆರಂಭ ಒದಗಿಸಿದರು. ರೋಹಿತ್ ಶರ್ಮಾಗೆ ಕೂಡ ಎರಡು ಬಾರಿ ಗುಜರಾತ್ ಟೈಟಾನ್ಸ್ ಫೀಲ್ಡರ್ ಗಳು ಜೀವದಾನ ನೀಡಿದ್ದು ಮುಂಬೈ ಇಂಡಿಯನ್ಸ್‌ಗೆ ವರವಾಯಿತು.

    ಬೈರ್ ಸ್ಟೋ 22 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್ ಸಹಿತ 47 ರನ್ ಗಳಿಸಿ ಔಟಾದರೆ, ರೋಹಿತ್ ಶರ್ಮಾ 50 ಎಸೆತಗಳಲ್ಲಿ 9 ಬೌಂಡರಿ 4 ಸಿಕ್ಸರ್ ಸಹಿತ 81 ರನ್ ಗಳಿಸಿ ಮಿಂಚಿದರು. ಸೂರ್ಯಕುಮಾರ್ ಯಾದವ್ 20 ಎಸೆತಗಳಲ್ಲಿ 33 ರನ್ ಗಳಿಸಿದರೆ, ತಿಲಕ್ ವರ್ಮಾ 11 ಎಸೆತಗಳಲ್ಲಿ 25 ರನ್ ಗಳಿಸಿದರು. ನಾಯಕ ಹಾರ್ದಿಕ್ ಪಾಂಡ್ಯ ಕೊನೆಯಲ್ಲಿ 9 ಎಸೆತಗಳಲ್ಲಿ 3 ಸಿಕ್ಸರ್ ಸಹಿತ ಅಜೇಯ 22 ರನ್ ಗಳಿಸುವ ಮೂಲಕ ಮುಂಬೈ ಇಂಡಿಯನ್ಸ್ 228 ರನ್‌ಗಳ ಬೃಹತ್ ಮೊತ್ತ ಕಲೆಹಾಕಲು ಸಹಾಯ ಮಾಡಿದರು.

    229 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್‌ಗೆ ಮೊದಲ ಓವರ್ ನಲ್ಲೇ ದೊಡ್ಡ ಆಘಾತ ಎದುರಾಯಿತು. ನಾಯಕ ಶುಭಮನ್ ಗಿಲ್ ಕೇವಲ 1 ರನ್ ಗಳಿಸಿ ಔಟಾದರು. ಬಳಿಕ ಸಾಯಿ ಸುದರ್ಶನ್ ಮತ್ತು ಕುಸಾಲ್ ಮೆಂಡಿಸ್ ಎರಡನೇ ವಿಕೆಟ್‌ಗೆ 64 ರನ್ ಕಲೆಹಾಕಿದರು. ಉತ್ತಮವಾಗಿ ಆಡುತ್ತಿದ್ದ ಕುಸಾಲ್ ಮೆಂಡಿಸ್ ಹಿಟ್ ವಿಕೆಟ್ ಆಗಿದ್ದು ಮತ್ತೊಂದು ಹೊಡೆತವಾಯಿತು.

    ಬಳಿಕ ಬಂದ ವಾಷಿಂಗ್ಟನ್ ಸುಂದರ್ ಜೊತೆಗೂಡಿದ ಸಾಯಿ ಸುದರ್ಶನ್ 4ನೇ ವಿಕೆಟ್‌ಗೆ 84 ರನ್ ಕಲೆಹಾಕಿದರು. ವಾಷಿಂಗ್ಟನ್ ಸುಂದರ್ 24 ಎಸೆತಗಳಲ್ಲಿ 48 ರನ್ ಗಳಿಸಿದರೆ, ಸಾಯಿಸುದರ್ಶನ್ 49 ಎಸೆತಗಳಲ್ಲಿ 10 ಬೌಂಡರಿ 1 ಸಿಕ್ಸರ್ ಸಹಿತ 80 ರನ್ ಗಳಿಸಿ ಔಟಾದರು.

    ಶೆರ್ಫಾನೆ ರುಥರ್ ಫೋರ್ಡ್ 15 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಶಾರುಖ್ ಖಾನ್ ಮತ್ತು ರಾಹುಲ್ ತೆವಾಟಿಯಾ ಇದ್ದರೂ ತಂಡವನ್ನು ಗೆಲುವಿನ ದಡ ಸೇರಿಸಲು ಆಗಲಿಲ್ಲ. ಅಂತಿಮವಾಗಿ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 208 ರನ್ ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು.

    Demo
    Share. Facebook Twitter LinkedIn Email WhatsApp

    Related Posts

    ಆರ್ ಸಿಬಿ-ಪಂಜಾಬ್ ಪಂದ್ಯಕ್ಕೆ ಮಳೆ ಕಾಟ: ರದ್ದಾಗುತ್ತಾ ಫೈನಲ್ ಮ್ಯಾಚ್!

    June 2, 2025

    RCB ಫೈನಲ್ ಮ್ಯಾಚ್ ಗೆ ಕ್ಷಣಗಣನೆ: ಸ್ಟೇಡಿಯಂ ಸೇರಿ ವಿಮಾನ ಟಿಕೆಟ್ ದರದಲ್ಲಿ ಭಾರೀ ಏರಿಕೆ!

    June 2, 2025

    ಫೈನಲ್ ಮ್ಯಾಚ್ ಗೂ ಮುನ್ನ ಆರ್ ಸಿಬಿಗೆ ಆಘಾತ: ಬೆಂಗಳೂರು ತಂಡದಿಂದ ಸ್ಪೋಟಕ ಆಟಗಾರ ಔಟ್!

    June 2, 2025

    IPL 2025: ಯುದ್ಧ ಅರ್ಧ ಮಾತ್ರ ಮುಗಿದಿದೆ.. ಏನೇ ಸಮಸ್ಯೆ ಬಂದ್ರೂ ಅದು ನನ್ನ ಸ್ಟೈಲ್: ಪಂಜಾಬ್ ಕ್ಯಾಪ್ಟನ್

    June 2, 2025

    RCB ಗೆಲ್ಲಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ವಿಶೇಷ ಪ್ರಾರ್ಥನೆ ಮಾಡುತ್ತೇನೆ: ಲಕ್ಷ್ಮಿ ಹೆಬ್ಬಾಳ್ಕರ್

    June 2, 2025

    ಫ್ರೀ.. ಫ್ರೀ.. ಫ್ರೀ.. RCB ಕಪ್ ಗೆದ್ದರೆ ಮಸಾಲಪುರಿ, ಪಾನಿಪುರಿ, ಭೇಲ್ ಪುರಿ ಉಚಿತ..!

    June 2, 2025

    Chess Champion Gukesh: ವಿಶ್ವದ ನಂ.1 ಚಾಂಪಿಯನ್ ಮಣಿಸಿದ ಭಾರತದ ಯುವ ಚೆಸ್ ಚತುರ ಗುಕೇಶ್!

    June 2, 2025

    RCB ಕಪ್ ಗೆದ್ರೆ ಹೋಳಿಗೆ ಊಟ ಹಾಕ್ತೀವಿ: ಇಂದಿರಾ ಕ್ಯಾಂಟೀನ್’ಗಳಲ್ಲೂ ಹೋಳಿಗೆ ಊಟ ಹಾಕ್ಸಿ ಸಿದ್ದು ಸಾರ್..

    June 2, 2025

    Glenn Maxwell: ಏಕದಿನ ಕ್ರಿಕೆಟ್‌’ಗೆ ನಿವೃತ್ತಿ ಘೋಷಿಸಿದ RCB ಮಾಜಿ ಪ್ಲೇಯರ್..!

    June 2, 2025

    ವಿರಾಟ್ ಕೊಹ್ಲಿ-ಶ್ರೇಯರ್ ಅಯ್ಯರ್‌ನ್ನು ಶ್ಲಾಘಿಸಿದ ಬಾಹುಬಲಿ ನಿರ್ದೇಶಕ…ಯಾರಿಗೆ ʼಕಪ್ʼ ರಾಜಮೌಳಿ ಹೇಳಿದ್ದೇನು?

    June 2, 2025

    ವಿರಾಟ್​ ಕೊಹ್ಲಿ ಮಾಲೀಕತ್ವದ ಪಬ್ ವಿರುದ್ಧ ಬೆಂಗಳೂರಿನಲ್ಲಿ ಎಫ್​ಐಆರ್!

    June 2, 2025

    ಮುಂಬೈ ವಿರುದ್ಧ ಗೆಲ್ಲುತ್ತಿದ್ದಂತೆ RCB ಬಗ್ಗೆ ಪಂಜಾಬ್ ಕ್ಯಾಪ್ಟನ್ ಶ್ರೇಯಸ್ ಏನ್ ಹೇಳಿದ್ರೂ ಗೊತ್ತಾ!?

    June 2, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.