Close Menu
Ain Live News
    Facebook X (Twitter) Instagram YouTube
    Tuesday, June 3
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಬಿಲ್ಡಿಂಗ್ ಪರ್ಮಿಷನ್, ಸಿ.ಸಿ ಕುರಿತು ನ್ಯಾಯಾಲಯದ ತೀರ್ಪನ್ನು ಮರುಪರಿಶೀಲಿಸುವಂತೆ ಸಿಎಂ ಪತ್ರ ಬರೆದ ಶೆಟ್ಟರ್

    By Author AINMay 31, 2025
    Share
    Facebook Twitter LinkedIn Pinterest Email
    Demo

    ಬೆಳಗಾವಿ:-ಇತ್ತೀಚಿನ ಘನ ಸರ್ವೋಚ್ಚ ನ್ಯಾಯಾಲಯದ ಸಿವಿಲ್ ಅಪೀಲ್ ಸಂಖ್ಯೆ:14604/2024 ಮತ್ತು 14605/2024, ದಿನಾಂಕ:17-12-2025 ರಂದು ತೀರ್ಪು ಪ್ರಕಟಿಸಿದ ಪ್ರಕಾರ ದೇಶದ ಮಹಾನಗರ, ನಗರ, ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಇರತಕ್ಕಂತ ಮತ್ತು ವಾಸವಾಗಿರುವಂತ ಕೊಟ್ಯಾಂತರ ಜನರು ಕಟ್ಟಿಸುವಂತಹ ಮನೆಗಳಿಗೆ ಹಾಗೂ ಕಟ್ಟಡಗಳಿಗೆ ವಿದ್ಯುತ, ಕುಡಿಯುವ ನೀರು ಹಾಗೂ ಒಳಚರಂಡಿ ಸಂಪರ್ಕ ಪಡೆದುಕೊಳ್ಳಬೇಕಾದರೆ ಆ ಮನೆಯ ಮತ್ತು ಕಟ್ಟಡಗಳಿಗೆ ಬಿಲ್ಲಿಂಗ್ ಪರ್ಮಿಶನ್, ಸಿ.ಸಿ. ಇವೆಲ್ಲವನ್ನು ಪಡೆದುಕೊಂಡಿರಬೇಕು,

    ಕಿತ್ತಳೆ ಹಣ್ಣಿನ ಸಿಪ್ಪೆ ಎಸೆಯದಿರಿ: ಕಹಿಯಾದ್ರೂ ಇದರ ರಸದಲ್ಲಿ ಅಡಗಿದೆ ಆರೋಗ್ಯ ಸಿಹಿ!

    ಆಗ ಮಾತ್ರ ಅವರಿಗೆ ಈ ಎಲ್ಲ ಸಂಪರ್ಕಗಳನ್ನು ಕೊಡಬಹುದು. ಬಿಲ್ಡಿಂಗ್ ಪರ್ಮಿಶನ್ ಹಾಗೂ ಸಿ.ಸಿ ಇಲ್ಲವಾದರೆ ಈ ಸಂಪರ್ಕಗಳನ್ನು ಕೊಡಬಾರದೆಂದು ನಿರ್ದೇಶನ ಕೊಟ್ಟ ಹಿನ್ನೆಲೆಯಲ್ಲಿ ಬರುವಂತಹ ದಿನಗಳಲ್ಲಿ ನಾಡಿನ ಲಕ್ಷಾಂತರ ಬಡ ಜನರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಈ ಯಾವುದೇ ಸಂಪರ್ಕಗಳನ್ನು ಪಡೆದುಕೊಳ್ಳಲಾರದಂತಹ ಪರಿಸ್ಥಿತಿ ನಿರ್ಮಾಣ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಸದಸ್ಯರಾದ ಶ್ರೀ ಜಗದೀಶ ಶೆಟ್ಟರ ಅವರು ಹೇಳಿದರು.

    ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪು ಸದುದ್ದೇಶದಿಂದ ಕೂಡಿದ್ದಾಗಿದ್ದರೂ ಈ ಆದೇಶದಿಂದ ಮನೆ ಮತ್ತು ಕಟ್ಟಡ ಕಟ್ಟುವಂತಹ ಮಾಲೀಕರು, ಕಟ್ಟಡದ ನಕ್ಷೆ ಮತ್ತು ಮಂಜೂರಾತಿ, ಕಟ್ಟಡ ನಿರ್ಮಾಣ ಪೂರ್ಣಗೊಂಡ ಬಳಿಕ ಹಾಗೂ ಸ್ಥಳ ಪರಿಶೀಲನೆ ನಂತರವಷ್ಟೆ ಸ್ವಾಧೀನಾನುಭವ ಪತ್ರ ದೊರೆಯುವುದು.

    ಅಲ್ಲಿಯವರೆಗೆ ನೀರಿನ, ವಿದ್ಯುತ್ ಮತ್ತು ಒಳಚರಂಡಿ ಸಂಪರ್ಕ ದೊರೆಯುವುದು ಕಷ್ಟಸಾಧ್ಯ. ಹೀಗಾಗಿ ಸರ್ವೋಚ್ಛ ನ್ಯಾಯಾಲಯದ ಈ ತೀರ್ಪು ದೂರಗಾಮಿ ಪರಿಣಾಮ ಬೀರುವುದರಿಂದ ಬಡ ಜನರಿಗೆ, ಮಧ್ಯಮ ವರ್ಗದ ಜನರಿಗೆ ಮತ್ತು ಈ ಕಾಮಗಾರಿಗಳನ್ನು ನಿರ್ವಹಣೆ ಮಾಡುವಂತಹ ಗುತ್ತಿಗೆದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

    ರಾಜ್ಯ ಸರ್ಕಾರ ಈಗಾಗಲೇ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಅನುಷ್ಟಾನಗೊಳಿಸಲು ಎಲ್ಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರಿಂದ ಯಾವುದೇ ಕಟ್ಟಡ ಪರವಾನಿಗೆ, ಸಿ.ಸಿ ಮತ್ತು ನಕ್ಷೆಯ ಮಂಜೂರಾತಿಯಲ್ಲಿ ದೋಷಗಳಿದ್ದರೆ, ಆ ಕಟ್ಟಡಗಳಿಗೆ ಯಾವುದೇ ರೀತಿಯ ವಿದ್ಯುತ್, ಕುಡಿಯುವ ನೀರು, ಒಳಚರಂಡಿ ಸಂಪರ್ಕ ಪಡೆದುಕೊಳ್ಳದೆ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

    ರಾಜ್ಯ ಸರ್ಕಾರ ಈ ತೀರ್ಪಿನ ಬಗ್ಗೆ ಗಂಭೀರವಾಗಿ ಪರಿಗಣಿಸಿ, ನಾಡಿನ ಜನತೆಯ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದ ಮರುಪರಿಶೀಲನೆ ಸಲುವಾಗಿ ಮಾನ್ಯ ಸರ್ವೋಚ್ಛ ನ್ಯಾಯಾಲಯಕ್ಕೆ ಸರ್ಕಾರದಿಂದ ಅರ್ಜಿಯನ್ನು ಬರೆಯುವುದು ಮತ್ತು ಬಡ ಜನತೆಗೆ ಅನ್ಯಾಯವಾಗದ ರೀತಿಯಲ್ಲಿ ಪರ್ಯಾಯವಾದಂತಹ ಅಗತ್ಯ ಕ್ರಮ ಕೈಗೊಳ್ಳಲು ಗಂಭೀರವಾಗಿ ಆಲೋಚನೆ ಮಾಡುವಂತಹ ಅವಶ್ಯಕತೆ ಇದೆ.

    ಈ ಹಿನ್ನಲೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದಂತಹ ಶ್ರೀ ಸಿದ್ದರಾಮಯ್ಯನವರಿಗೆ ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಸದಸ್ಯರಾದ ಶ್ರೀ ಜಗದೀಶ ಶೆಟ್ಟರ ಅವರು ಪತ್ರದ ಮುಖೇನ ವಿನಂತಿಸಿದ್ದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಬಾಳಪ್ಪ ತೇರದಾಳ AIN NEWS ಬೆಳಗಾವಿ

    Demo
    Share. Facebook Twitter LinkedIn Email WhatsApp

    Related Posts

    ಬಜ್ಪೆಯಲ್ಲಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಆರೋಪಿ ಅರೆಸ್ಟ್!

    June 3, 2025

    RCB Vs PBKS: ಪಟಾಕಿ ಸಿಡಿಸಿ ಆರ್.ಸಿ.ಬಿ ಅಭಿಮಾನಿಗಳ ಸಂಭ್ರಮ!

    June 3, 2025

    ಹುಬ್ಬಳ್ಳಿಯಲ್ಲಿ L&T ಅಧಿಕಾರಿಗಳ ಎಡವಟ್ಟು; ಒಬ್ಬ ಸಾವು ಇನ್ನೊಬ್ಬನ ಸ್ಥೀತಿ ಗಂಭೀರ!

    June 3, 2025

    ನಿರ್ಮಾಣ ಹಂತದಲ್ಲಿದ್ದ ಹೆಬ್ಬಾಗಿಲು ಕುಸಿದು ಓರ್ವ ಸಾವು..! ಮೂವರಿಗೆ ಗಾಯ

    June 3, 2025

    ಅನೈತಿಕ ಸಂಬಂಧ: ಹೆಂಡತಿಯನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಪತಿ!

    June 3, 2025

    ಲಕ್ಕುಂಡಿಯಲ್ಲಿ ಬಯಲು ವಸ್ತು ಸಂಗ್ರಹಾಲಯ ನಿರ್ಮಿಸಲಾಗುವುದು: ಸಿಎಂ.ಸಿದ್ದರಾಮಯ್ಯ

    June 3, 2025

    Onion Price: ಈರುಳ್ಳಿ ದರ ಕುಸಿತ: ಹೆದ್ದಾರಿಯಲ್ಲಿಯೇ ಈರುಳ್ಳಿ ಸುರಿದು ರೈತನ ಪ್ರತಿಭಟನೆ

    June 3, 2025

    ಐಪಿಎಲ್ ಫೈನಲ್ ಪಂದ್ಯ: ಅಭಿಮಾನಿಗಳಿಂದ RCB ಗೆಲುವಿಗಾಗಿ ಕೋಲಾರಮ್ಮಗೆ ವಿಶೇಷ ಪೂಜೆ

    June 3, 2025

    ರಾಜ್ಯದಲ್ಲಿ ಮತ್ತೊಂದು ಹೀನ ಕೃತ್ಯ: ವೃದ್ಧೆ ಹೊತ್ತೊಯ್ದು ಅತ್ಯಾಚಾರ, ಕೊಲೆ..!

    June 3, 2025

    IPL Final: RCB ಟೀಮ್’ಗೆ ಸಪೋರ್ಟ್ ಮಾಡುವಂತೆ ಡಂಗೂರ ಸಾರಿದ ಗ್ರಾಮಸ್ಥರು

    June 3, 2025

    ಹುಬ್ಬಳ್ಳಿ- ತುಳಜಾಪುರ ನಡುವೆ “ರಾಜಹಂಸ” ಬಸ್ ವ್ಯವಸ್ಥೆ

    June 3, 2025

    RCB ಗೆಲುವಿಗಾಗಿ ಹುಬ್ಬಳ್ಳಿ ಅಭಿಮಾನಿಗಳಿಂದ ವಿಶೇಷ ಪೂಜೆ, ಪ್ರಾರ್ಥನೆ

    June 3, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.