ಗದಗ:- ಕನ್ನಡದ ಕುರಿತು ನಟ ಕಮಲ್ ಹಾಸನ್ ಕೊಟ್ಟಿರುವ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಕಾನೂನು ಸಚಿವ ಎಚ್ ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಸಾಹಿತ್ಯದ ಮೂಲಕ ಸಮಾಜವನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು: ಸಿ.ಎಂ.ಸಿದ್ದರಾಮಯ್ಯ!
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕಮಲ್ ಹಾಸನ್ ಅವರಿಗೆ ದೇವರು ಸದ್ಬುದ್ದಿ ದಯಪಾಲಿಸಲಿ. ಕನ್ನಡಿಗರ ಮನಸ್ಸು ನೋಯಿಸೋ ಕೆಲಸ ಮಾಡಿದ್ದಾರೆ. ತಕ್ಷಣ ನಟ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಯಾಚಿಸಲಿ. ಇದು ಪ್ರತಿಷ್ಠೆಯ ಪ್ರಶ್ನೆ ಅಲ್ಲ. ನಟ ಕಮಲ್ ಹಾಸನ್ ಅಜ್ಞಾನ ಪ್ರದರ್ಶನ ಮಾಡಿದ್ದಾರೆ.
ನೀವು ಕಲಾಕಾರರು ಅಂತಾ ಕನ್ನಡಿಗರೂ ನಿಮ್ಮ ಅಭಿಮಾನಿಗಳಿದ್ದಾರೆ. ಕನ್ನಡಿಗರ ಪ್ರೀತಿ ಕಳೆದುಕೊಳ್ಳಬೇಡಿ. ಕನ್ನಡದ ಬಗ್ಗೆ ಲಘುವಾಗಿ ಮಾತನಾಡಿದ್ದಕ್ಕೆ ಸೌಜನ್ಯಯುತವಾಗಿ ತಕ್ಷಣ ಅವರು ಕ್ಷಮೆ ಯಾಚನೆ ಮಾಡಬೇಕು ಎಂದರು.
ಇನ್ನೂ ಸಿವಿಲ್ ಪ್ರೊಸೀಜರ್ ಕೋಡ್ ಕಾನೂನಿಗೆ ರಾಷ್ಟ್ರಪತಿಗಳಿಂದ ಅಂಕಿತ ವಿಚಾರವಾಗಿ ಮಾತನಾಡಿ, ಕರ್ನಾಟಕ ಸರ್ಕಾರ, ಶಾಸನಸಭೆ ಸಿವಿಲ್ ಪ್ರೊಸೀಜರ್ ಕೋಡ್ ಅಮೆಂಡ್ ಮೆಂಟ್ ಮಾಡಿ. 89A ಪ್ರಾವಿಜನ್ ಸೇರಿಸಿ ಕೇಸ್ ಮ್ಯಾನೇಜ್ಮೆಂಟ್ ಸಿಸ್ಟಂ ತಗೊಂಡು ಆ ಕಾನೂನನ್ನ ರಾಜ್ಯಪಾಲರ ಮೂಲಕ ರಾಷ್ಡಪತಿಗಳಿಗೆ ಕಳಿಸಿದ್ವಿ. 19 ನೇ ತಾರೀಖಿಗೆ ಸಿವಿಲ್ ಪ್ರೊಸೀಜರ್ ಕೋಡ್ ಕಾನೂನಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. 23 ನೇ ತಾರೀಖಿಗೆ ಆ ಕಾನೂನನ್ನ ನೋಟಿಫೈ ಮಾಡಿದ್ದೇವೆ. ಈಗ ರಾಜ್ಯದಲ್ಲಿ CPC ಅಮೆಂಡ್ಮೆಂಟ್ 2 ಜಾರಿಗೆ ಬಂದಿದೆ. ಸಿವಿಲ್ ಕೇಸ್ ಗೆ 2 ತಿಂಗಳ ಕಾಲ ರಾಜಿಗೆ ಅವಕಾಶ ಮಾಡಿ ಕೊಡ್ತಾರೆ.
ಅದು ರಾಜಿ ಆಗಲಿಲ್ಲ ಅಂದಾಗ ನ್ಯಾಯಾಲಯ ಕೇಸ್ ನ ಕಲಾಪ ಪ್ರಾರಂಭವಾಗತ್ತೆ. ಕಲಾಪ ಪ್ರಾರಂಭವಾದ ದಿನ ಎಷ್ಟು ದಿನ ಈ ಕೇಸ್ ನಡೆಯತ್ತೆ, ಆಗ್ಯೂ೯ಮೆಂಟ್ ಯಾವಾಗ ಮುಗಿಸಬೇಕು, ತೀರ್ಪು ಯಾವಾಗ ಕೊಡಬೇಕು ಅನ್ನೋದನ್ನ ನಿರ್ಣಯಿಸುತ್ತೇವೆ. ಸಿವಿಲ್ ಕೇಸ್ ಗಳು 10, 20, 30 ವರ್ಷ ನಡೀತಿದ್ದವು, ಇನ್ನು ಮುಂದೆ ಆ ತರ ನಡೆಯೋದಿಲ್ಲ. ತೀರ್ಪು ಯಾವಾಗ ಬರತ್ತೆ ಅಂತಾ ಹೇಳಿ, 2 ವರ್ಷದೊಳಗೆ ಆ ಕೇಸ್ ಮುಗಿಸಬೇಕು ಅಂತಾ ದೊಡ್ಡ ಕ್ರಾಂತಿಕಾರಕ ಬದಲಾವಣೆ ತರಲಾಗುತ್ತದೆ. ಅದು ಈಗ ಕಾನೂನು ಆಗಿದೆ. ಶ್ರೀ ಸಾಮಾನ್ಯನ ಪ್ರಕರಣ ಎರಡು ವರ್ಷದಲ್ಲಿ ಅದು ಪೂರ್ಣ ಆಗಬೇಕು. 10 ಲಕ್ಷ ಪ್ರಕರಣಗಳು ನಮ್ಮ ರಾಜ್ಯದ ನ್ಯಾಯಾಲಯಗಳಲ್ಲಿ ಬಾಕಿ ಇವೆ. ನ್ಯಾಯ ಸಿಗಬೇಕು, ಅವನ ಬದುಕಿಗೆ ಬೇಗ ಪ್ರಕರಣ ಮುಗಿದು ಸಮಸ್ಯೆಗೆ ಪರಿಹಾರ ದೊರಕಬೇಕು ಎಂದರು.