Close Menu
Ain Live News
    Facebook X (Twitter) Instagram YouTube
    Friday, June 6
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಹೇಮಾವತಿ ಪ್ರತಿಭಟನೆ ಹಿಂದೆ ಬ್ಲಾಕ್ ಮೇಲ್: ಶೀಘ್ರವೇ ಇವರ ಡಿಮಾಂಡ್ ಬಹಿರಂಗಪಡಿಸುವೆ – ಡಿಕೆ ಶಿವಕುಮಾರ್!

    By AIN AuthorJune 2, 2025
    Chikmagalur: Karnataka Deputy Chief Minister DK Shivakumar addresses at an event commemorating the 50th year of Sannyasa Sweekara of Sringeri Jagadguru Shankaracharya Sri Sri Bharati Tirtha Mahasannidhanam, at Sringeri near Chikmagalur, Saturday, Jan. 11, 2025. (PTI Photo)(PTI01_11_2025_000262A)
    Share
    Facebook Twitter LinkedIn Pinterest Email
    Demo

    ಬೆಂಗಳೂರು, ಜೂ.02:-“ಹೇಮಾವತಿ ಲಿಂಕ್ ಕೆನಾಲ್ ವಿರುದ್ಧ ಹೋರಾಟಗಾರರ ಬ್ಲಾಕ್ ಮೇಲ್, ಡಿಮ್ಯಾಂಡ್ ಏನೆಂಬುದನ್ನು ಸಮಯ ಬಂದಾಗ ಬಹಿರಂಗಪಡಿಸುವೆ. ಬೆಂಗಳೂರು ದಕ್ಷಿಣ ಜಿಲ್ಲೆಗೆ ನೀರು ಕೊಂಡೊಯ್ಯಲಾಗುತ್ತಿದೆ ಎಂಬುದು ಸುಳ್ಳು. ಕಳೆದ ಹತ್ತು ವರ್ಷದಲ್ಲಿ ಕುಣಿಗಲ್ ಪಾಲಿನ ನೀರಿನಲ್ಲಿ ಶೇಕಡಾ 90 ರಷ್ಟು ಬಳಕಯಾಗದೆ ಅಲ್ಲಿನ ಜನರಿಗೆ ಅನ್ಯಾಯವಾಗಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

    RCB ಫೈನಲ್ ಮ್ಯಾಚ್ ಗೆ ಕ್ಷಣಗಣನೆ: ಸ್ಟೇಡಿಯಂ ಸೇರಿ ವಿಮಾನ ಟಿಕೆಟ್ ದರದಲ್ಲಿ ಭಾರೀ ಏರಿಕೆ!

    ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮಗೋಷ್ಠಿಯಲ್ಲಿ. ಸೋಮವಾರ ಮಾತನಾಡಿ ಬೆಂಗಳೂರು ದಕ್ಷಿಣ ಜಿಲ್ಲೆಗೆ ಹೇಮಾವತಿ ನೀರಿನ ಅಗತ್ಯವಿಲ್ಲ ಅಗತ್ಯವಿಲ್ಲ” ಎಂದು ಸ್ಪಷ್ಟನೆ ನೀಡಿದರು.

    “ಹೇಮಾವತಿ ಲಿಂಕ್ ಕೆನಾಲ್ ಯೋಜನೆ ವಿರೋಧಿಸುತ್ತಿರುವುದು ಕೇವಲ ರಾಜಕಾರಣಕ್ಕಾಗಿ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಈ ಯೋಜನೆಗೆ ಅನುಮೋದನೆ ನೀಡಲಾಯಿತು. ಯಡಿಯೂರಪ್ಪ ಅವರು ಸಿಎಂ ಆದಾಗ ಆಗಿನ ಜಿಲ್ಲಾ ಮಂತ್ರಿ ಮಾಧುಸ್ವಾಮಿ ಸೇರಿ ಈ ಯೋಜನೆ ತಡೆ ಹಿಡಿದಿದ್ದರು. ಆರಂಭದಲ್ಲಿ ಈ ಯೋಜನೆ ವೆಚ್ಚ ₹600 ಕೋಟಿ ಇತ್ತು. ಈಗ ಅದು ₹900ಯಿಂದ ₹1000 ಕೋಟಿಗೆ ಏರಿಕೆಯಾಗಿದೆ” ಎಂದು ತಿಳಿಸಿದರು.

    “ಈ ವಿಚಾರದಲ್ಲಿ ಬಿಜೆಪಿ ಶಾಸಕರಿಗೆ ಅಸೂಯೆ ಅಷ್ಟೇ. ಕಳೆದ 10-12 ವರ್ಷಗಳಿಂದ ಕುಣಿಗಲ್ ತಾಲೂಕಿಗೆ ಅದರ ಪಾಲಿನ ನೀರು ತಲುಪಿಲ್ಲ. ಕುಣಿಗಲ್ ತಾಲೂಕಿನ ಜನರಿಗೆ 92%ರಷ್ಟು ನೀರು ನಷ್ಟವಾಗಿದೆ. ಕಳೆದ 10 ವರ್ಷಗಳಲ್ಲಿ 10% ನೀರು ಕೂಡ ಹೋಗಿಲ್ಲ. ಹೀಗಾಗಿ ನಾವು ಈ ಯೋಜನೆ ಕೈಗೊಂಡಿದ್ದೇವೆ” ಎಂದು ತಿಳಿಸಿದರು.

    “ಈ ಯೋಜನೆಯಿಂದ ಯಾರಿಗೂ ಅನ್ಯಾಯ ಆಗುವುದಿಲ್ಲ. ಈ ನೀರನ್ನು ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಗೆ ತೆಗೆದುಕೊಂಡು ಹೋಗಲಾಗುವುದು ಎಂದು ಹೇಳುತ್ತಿದ್ದಾರೆ. ರಾಮನಗರಕ್ಕೆ ಇದರ ಅಗತ್ಯವಿಲ್ಲ. ಈ ಜಿಲ್ಲೆಗಾಗಿ ಪ್ರತ್ಯೇಕ ನೀರಾವರಿ ಯೋಜನೆ ರೂಪಿಸಲಾಗಿದೆ. ಹೀಗಾಗಿ ರಾಮನಗರಕ್ಕೆ ಸಾಕಷ್ಟು ನೀರಿದೆ. ತುಮಕೂರು ಜಿಲ್ಲೆಯ ಕೆಲವು ಭಾಗಗಳು ಕೃಷ್ಣಾ ವ್ಯಾಪ್ತಿಯಿಂದ ನೀರು ಪಡೆಯುತ್ತಿದೆ. ಕಾವೇರಿ, ಕೃಷ್ಣಾ ನದಿಗಳಿಂದ ತುಮಕೂರಿನ ಕೆಲವು ಭಾಗಗಳಿಗೆ ನೀರು ಪೂರೈಸಿಲ್ಲವೇ? ನಾನು ಸಚಿವನಾದ ಬಳಿಕ ಕಾವೇರಿಯಲ್ಲಿರುವ ಬಾಕಿ 6 ಟಿಎಂಸಿ ನೀರನ್ನು ಬೆಂಗಳೂರಿನ ಬಳಕೆಗೆ ಆದೇಶ ಹೊರಡಿಸಿದ್ದೇನೆ” ಎಂದು ಹೇಳಿದರು.

    “ಹೇಮಾವತಿ ನೀರಿನಲ್ಲಿ ಕುಣಿಗಲ್ ತಾಲೂಕಿಗೆ 3.3 ಟಿಎಂಸಿ ನೀರು ಪಾಲು ಸಿಕ್ಕಿದ್ದು, ನಾವಿಲ್ಲಿ ಅಂತರರಾಜ್ಯ ಸಂಘರ್ಷ ಮಾಡುತ್ತಿದ್ದೇವೆಯೇ? ಇಲ್ಲವಲ್ಲ” ಎಂದರು.

    ನಿಮಗಿಂತ ಹೆಚ್ಚು ಶಬ್ಧ ಬಳಸುವ ಸಾಮರ್ಥ ನನಗಿದೆ, ಆದರೆ ಅದರ ಅಗತ್ಯವಿಲ್ಲ

    “ಇದೇ ಕೃಷ್ಣಪ್ಪ ಹಾಗೂ ಸುರೇಶ್ ಗೌಡರು ತಾಂತ್ರಿಕ ಸಮಿತಿ ರಚಿಸುವಂತೆ ಕೇಳಿದರು. ತಾಂತ್ರಿಕ ಸಮಿತಿ ರಚನೆಯಾಗಿ ಅದರ ವರದಿಯೂ ಬಂದಿದೆ. ಈಗ ರೈತರನ್ನು ಕರೆದುಕೊಂಡು ಹೋಗಿ ಅಡಚಣೆ ಮಾಡುತ್ತಿದ್ದಾರೆ. ಕಾನೂನು ಕೈಗೆ ತೆಗೆದುಕೊಂದಿದ್ದಾರೆ. ಕಾನೂನು ಕೈಗೆ ತೆಗೆದುಕೊಳ್ಳಬೇಡಿ. ಈ ವಿಚಾರದಲ್ಲಿ ರಾಜಕಾರಣ ಬೇಡ. ನೀವು ಬಳಸಿರುವ ಶಬ್ದಗಳಿಗಿಂತ ಹೆಚ್ಚು ಶಬ್ದಗಳನ್ನು ಬಳಸುವ ಶಕ್ತಿ ಸಾಮರ್ಥ್ಯ ನನಗೂ ಇದೆ. ಇಂತಹ ಶಬ್ಧ ಬಳಸಿದರೆ ಟಿವಿಯಲ್ಲಿ ಒಂದು ನಿಮಿಷ ತೋರಿಸಬಹುದು. ಸಮಯ ಬಂದಾಗ ಇದರ ಪರಿಣಾಮ ಗೊತ್ತಾಗುತ್ತದೆ. ನಾನು ಉತ್ತರ ನೀಡುತ್ತೇನೆ. ಈಗ ಅದರ ಅಗತ್ಯವಿಲ್ಲ. ಈಗ ಜನರ ಹಿತ ಕಾಯಬೇಕು” ಎಂದು ತಿಳಿಸಿದರು.

    “ಕುಣಿಗಲ್ ಜನ ಬೇರೆಯವರ? ಅವರೂ ತುಮಕೂರಿನ ಭಾಗದವರಲ್ಲವಾ? ಮಾಗಡಿಯವರು ಬೇರೆಯವರಾ? ನಾವು ಎತ್ತಿನಹೊಳೆ ಯೋಜನೆಯಿಂದ ತುಮಕೂರಿನ ಹಲವು ಕೆರೆಗಳನ್ನು ತುಂಬಿಸುತ್ತಿಲ್ಲವೇ? ಈ ಯೋಜನೆ ಆರಂಭವಾಗಿದ್ದು ಕೇವಲ ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಮಾತ್ರ ನೀರು ಪೂರೈಸಲು ಎಂದು. ಆದರೆ ತುಮಕೂರಿಗೂ ನೀರು ನೀಡುತ್ತಿಲ್ಲವೇ? ಇದು ಜನರಿಗೆ ಅರ್ಥವಾಗುತ್ತದೆ. ಆದರೆ ಬ್ಲಾಕ್ ಮೇಲ್ ಮಾಡುವ ಹೋರಾಗಾರರಿಗೆ ಅರ್ಥ ಆಗುವುದಿಲ್ಲ” ಎಂದು ವ್ಯಂಗ್ಯವಾಡಿದರು.

    “ತುಮಕೂರಿಗೆ ಹೇಮಾವತಿ ನೀರು ತರಲು ಕುಣಿಗಲ್ ನ ವೈ.ಕೆ ರಾಮಯ್ಯ, ಹುಚ್ಚಮಾಸ್ತೀಗೌಡ ಅವರು ಹೋರಾಟ ಮಾಡಿದ್ದಾರೆ. ನಾವು ಅದನ್ನು ಜಾರಿ ಮಾಡುತ್ತಿದ್ದೇವೆ. ಈ ಯೋಜನೆಗೆ ಈಗಾಗಲೇ ₹400 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಆರಂಭವಾಗಿದೆ” ಎಂದು ತಿಳಿಸಿದರು.

    ಕಾನೂನು ಕೈಗೆತ್ತಿಕೊಂಡರೆ ಕಾನೂನು ಕ್ರಮ

    “ಕಾನೂನನ್ನು ಕೈಗೆತ್ತಿಕೊಳ್ಳುವವರು ಯಾರೇ ಆದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಕಾನೂನು ಕೈಗೆತ್ತಿಕೊಂಡು ಸರ್ಕಾರವನ್ನು ಬೆದರಿಸಲು ಸಾಧ್ಯವಿಲ್ಲ. ಅವರ ಬೇಡಿಕೆಗಳನ್ನು ನಾನು ಬಹಿರಂಗಪಡಿಸಲು ಬಯಸುವುದಿಲ್ಲ. ನನಗೆ ಎಲ್ಲವೂ ಗೊತ್ತಿದೆ. ಅನಗತ್ಯವಾಗಿ ಸ್ವಾಮೀಜಿಗಳನ್ನು ಕರೆತರುತ್ತಿರುವುದೇಕೆ? ಅವರಿಗೂ ಇದಕ್ಕೆ ಏನು ಸಂಬಂಧ?” ಎಂದರು.

    “ಮೇಕೆದಾಟು ಪಾದಯಾತ್ರೆ ಮಾಡುವಾಗ ನಾನು ಕಾನೂನು ಕೈಗೆತ್ತಿಕೊಂಡೆನಾ? ಕೃಷ್ಣಾ ಹೋರಾಟದಲ್ಲಿ ಕಾನೂನು ಕೈಗೆತ್ತಿಕೊಂಡರೆ? ಪ್ರತಿ ನಿತ್ಯ ಕಾಮಗಾರಿ ನಿಲ್ಲಿಸಿದರೆ ಅದರ ನಷ್ಟ ಭರಿಸುವವರು ಯಾರು? ಜನಸಾಮಾನ್ಯರನ್ನು ದಾರಿತಪ್ಪಿಸುತ್ತಿದ್ದಾರೆ” ಎಂದರು.

    ಅಸೂಯೆಯಿಂದ ಗ್ಯಾರಂಟಿ ಬಗ್ಗೆ ಟೀಕೆ

    ಗ್ಯಾರಂಟಿ ಫಲಾನುಭವಿಗಳಿಗಿಂತ ಅನುಷ್ಠಾನ ಸಮಿತಿ ಸದಸ್ಯರಿಗೆ ಹಣ ಹೋಗುತ್ತಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, “ರಾಜ್ಯಪಾಲರು, ವಿವಿಧ ಆಯೋಗಗಳ ಅಧ್ಯಕ್ಷಸ್ಥಾನಕ್ಕೆ ಯಾರನ್ನು ನೇಮಕ ಮಾಡುತ್ತಾರೆ? ಆಡಳಿತ ಪಕ್ಷದ ಮುಖಂಡರನ್ನಲ್ಲವೇ? ನಮಗೆ ಅಧಿಕಾರಕ್ಕೆ ಕೊಟ್ಟ ಕಾರ್ಯಕರ್ತರಿಗೆ ನಾವು ಶಕ್ತಿ ನೀಡಿದ್ದೇವೆ. ಇದು ನಮ್ಮ ರಾಜಕೀಯ ಇಚ್ಚಾಶಕ್ತಿ. ಇದು ನಮ್ಮ ಹಕ್ಕು, ನಾವು ನೇಮಕ ಮಾಡಿದ್ದೇವೆ. ನಾವು ಈ ಯೋಜನೆಗೆ ಅನುದಾನ ಮೀಸಲಿಟ್ಟಿದ್ದು ಅದನ್ನು ಜಾರಿ ಮಾಡುತ್ತೇವೆ. ನಮ್ಮ ಯೋಜನೆಗಳಿಂದ ಅಸೂಯೆಗೊಂಡು ಈ ರೀತಿ ಟೀಕೆ ಮಾಡಿತ್ತಿದ್ದಾರೆ” ಎಂದು ತಿಳಿಸಿದರು.

    Demo
    Share. Facebook Twitter LinkedIn Email WhatsApp

    Related Posts

    ಬೆಂಗಳೂರಿಗೆ ಹೊಸ ಕಮಿಷನರ್: ದಯಾನಂದ್ ಜಾಗಕ್ಕೆ ಸೀಮಂತ್ ಕುಮಾರ್ ನೇಮಿಸಿ ಸರ್ಕಾರ ಆದೇಶ!

    June 6, 2025

    ಬೆಂಗಳೂರಿನ ಮುಂದಿನ ಕಮಿಷನರ್ ಯಾರಾಗ್ತಾರೆ!? ಈ ಇಬ್ಬರಲ್ಲಿ ಒಬ್ಬರು ಫಿಕ್ಸ್!?

    June 5, 2025

    Breaking News: ಕಾಲ್ತುಳಿತಕ್ಕೆ 11 ಮಂದಿ ಬಲಿ: ಕಮಿಷನರ್ ದಯಾನಂದ್ ಸೇರಿ ನಾಲ್ವರು ಅಧಿಕಾರಿಗಳು ಸಸ್ಪೆಂಡ್!

    June 5, 2025

    ನಾನು ಕೂಡ ಆರ್‌ಸಿಬಿ ದೊಡ್ಡ ಫ್ಯಾನ್, ಆದ್ರೆ ನೋವು ಜಾಸ್ತಿ ಆಗಿದೆ: ಕಾಲ್ತುಳಿತಕ್ಕೆ ರಕ್ಷಿತಾ ಬೇಸರ!

    June 5, 2025

    ದಯವಿಟ್ಟು ಭಾರತಕ್ಕೆ ಬನ್ನಿ: RCBಗೆ ವಿಶ್ ಮಾಡಿದ ವಿಜಯ್ ಮಲ್ಯಗೆ ನಯವಾಗಿ ಸ್ವಾಗತಿಸಿದ SBI

    June 5, 2025

    4 ವರ್ಷದ ಮಗು ಬಲಿ ಪಡೆದ ಏರ್ ಕೂಲರ್‌.. ಘಟನೆ ಹೇಗಾಯ್ತು?

    June 5, 2025

    ಕಾಲ್ತುಳಿತ ಕೇಸ್: ಆರ್‌ಸಿಬಿ ಫ್ರಾಂಚೈಸಿ, ಕೆಎಸ್‌ಸಿಎ ವಿರುದ್ಧ ದಾಖಲಾಯ್ತು FIR!

    June 5, 2025

    ಮಹಾರಾಷ್ಟ್ರ ಸಿಎಂ ಆಲಮಟ್ಟಿ ಎತ್ತರದ ಬಗ್ಗೆ ತಕರಾರು ಮಾಡಿರುವುದು ಅಸಮಂಜಸ ಮತ್ತು ರಾಜಕೀಯ ಪ್ರೇರಿತ: ಬೊಮ್ಮಾಯಿ

    June 5, 2025

    ಡಿ.ಕೆ ಶಿವಕುಮಾರ್’ಗೆ ಕಣ್ಣೀರು ಬರುತ್ತಾ? ನನಗೇನೋ ಹಾಗೆ ಅನಿಸಿಲ್ಲ: ನಿಖಿಲ್ ಕುಮಾರಸ್ವಾಮಿ ವ್ಯಂಗ್ಯ

    June 5, 2025

    Stampede: ಕಾಲ್ತುಳಿತದಲ್ಲಿ 11 ಜನರ ಸಾವು: ಮೃತ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ RCB!

    June 5, 2025

    ಕಾಲ್ತುಳಿತ ದುರಂತ: ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್ -ವಿಚಾರಣೆ ಮುಂದೂಡಿಕೆ!

    June 5, 2025

    ಬೃಹತ್ ಕಾರ್ಯಕ್ರಮ, ಸಮಾರಂಭಗಳಿಗೆ ಹೊಸ SOP ರೂಪಿಸುತ್ತೇವೆ: ಸಚಿವ ಡಾ. ಜಿ.ಪರಮೇಶ್ವರ್

    June 5, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.