ಅಹಮದಾಬಾದ್ ನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್ ಸಿಬಿ ತಂಡವು, 18 ವರ್ಷಗಳ ನಂತರ ನೊದಲ ಬಾರಿಗೆ ಟ್ರೋಫಿಗೆ ಮುತ್ತಿಡುತ್ತಿದ್ದಂತೆ, ಚಿತ್ರದುರ್ಗ ನಗರದ ಗಾಂಧಿ ವೃತ್ತ ಸೇರಿದಂತೆ ಹಲವು ಕಡೆಗಳಲ್ಲಿ ಆರ್ ಸಿಬಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಆರ್ ಸಿಬಿ ಗೆಲುವನ್ನು ಬೈಕ್ ರ್ಯಾಲಿಗಳ ಮೂಲಕ, ಗೆಲುವಿನ ಘೋಷಣೆ ಹಾಕಿದರು.ಗಲ್ಲಿಗಳಲ್ಲಿಯೂ ಆರ್ ಸಿಬಿ ಗೆಲುವನ್ನು ಅಭಿಮಾನಿಗಳು ರಾತ್ರಿಯಡಿ ಆಚರಿಸಿದರು. ಒಟ್ಟಿನಲ್ಲಿ ಆರ್ ಸಿಬಿಯ ಗೆಲುವನ ಹರ್ಷ ಮುಗಿಲು ಮುಟ್ಟಿತ್ತು.
ಚಿತ್ರದುರ್ಗದಲ್ಲಿ ಆರ್ ಸಿ ಬಿ ಐಪಿಎಲ್ ನ ಫೈನಲ್ ಗೆಲ್ಲುತ್ತಿದ್ದಂತೆ,ಕ್ರಿಕೆಟ್ ಮತ್ತು ಆರ್ ಸಿ ಬಿ ಆಭಿಮಾನಿಗಳು ಹುಚ್ಚೆದ್ದು ನಗರದ ಗಾಂಧಿ ವೃತ್ತದಲ್ಲಿ ಇಂದು ತಡರಾತ್ರಿ ಕುಣಿದು ಕುಪ್ಪಳಿಸಿದರು. ಐಪಿಎಲ್ ಮಾದರಿ ಟ್ರೋಫಿ ತಂದಿದ್ದ ಯುವಕರು, ಅದನ್ಬು ತಲೆ ಮೇಲೆ ಹೊತ್ತಿಕೊಂಡು ಕುಣಿದರು. ಪಟಾಕಿ ಸದ್ದು ಎಲ್ಲೆಡೆ ಮೊಳಗಿ ಬಂದವು. 18 ವರ್ಷಗಳಿಂದ ಇಂತಹ ಕ್ಷಣಕ್ಕಾಗಿ ಕಾಯುತ್ತಿದ್ದ ಕೋಟೆ ನಾಡಿನ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.