Close Menu
Ain Live News
    Facebook X (Twitter) Instagram YouTube
    Friday, June 6
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ: 10ಕ್ಕೂ ಹೆಚ್ಚು ಮಂದಿ ಸಾವು..ಸರ್ಕಾರಕ್ಕೆ ಛೀಮಾರಿ ಹಾಕಿದ ಪರಿಷತ್ ಶಾಸಕ ಟಿಎ ಶರವಣ!

    By AIN AuthorJune 4, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು:- ಚೊಚ್ಚಲ IPL ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆಗೆ ಬಂದಿದ್ದ 10 ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಿಂದ ಸಾವನ್ನಪ್ಪಿದ್ದಾರೆ. ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

    RCB ಸಂಭ್ರಮಾಚರಣೆ ಆಘಾತ: 11 ಮಂದಿ ಸಾವು.. ಛೇ, ಛೇ ಇಂಥಾ ಸೆಲಬ್ರೇಷನ್ ಬೇಕಿತ್ತಾ!?

    ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪರಿಷತ್ ಶಾಸಕ ಟಿಎ ಶರವಣ ಅವರು ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ. ಆರ್ ಸಿ ಬಿ ಗೆಲುವಿನ ಪ್ರಚಂಡ ವಿಜಯೋತ್ಸವ. ಪ್ರಚಂಡ ಮರಣೋತ್ಸವವಾಗಿ ಬದಲಾಗಿದ್ದು, ಹತ್ತಕ್ಕೂ ಹೆಚ್ಚು ಮಂದಿ ಅಭಿಮಾನಿಗಳು, ಮುಗ್ಧರು, ಕಾಲ್ತುಳಿತಕ್ಕೆ ಜೀವತೆತ್ತಿರುವ ಘೋರ ದುರಂತ ವಾಗಿದೆ. ಈ ದುರಂತದ ಹೊಣೆಯನ್ನು ಇದನ್ನು ತಪ್ಪಿಸುವಲ್ಲಿ ವಿಫಲವಾದ ಸರಕಾರ ಮತ್ತು ಕಾರ್ಯಕ್ರಮದ ಆಯೋಜಕರು ಹೊರಬೇಕಾಗಿದೆ ಎಂದು ವಿಧಾನಪರಿಷತ್ ಹಿರಿಯ ಸದಸ್ಯ ಜೆಡಿಎಸ್ ನಾಯಕ ಟಿ. ಎ.ಶರವಣ ನೊಂದು ಹೇಳಿದ್ದಾರೆ.

    ಈ ಘಟನೆಯಿಂದ ಮನಸ್ಸು ಭಾರವಾಗಿದೆ. ಅಮಾಯಕ ಯುವಕರು, ಭವಿಷ್ಯದಲ್ಲಿ ಬೇಕಾದಷ್ಟು ಜವಾಬ್ದಾರಿ ಹೊರಬೇಕಾದ ತರುಣರು ದಾರುಣವಾಗಿ ಪ್ರಾಣ ಬಿಟ್ಟಿದ್ದಾರೆ. ಇದಕ್ಕೆ ಹೊಣೆ ಯಾರು? ಎಂದು ಶರವಣ ಸರಕಾರಕ್ಕೆ ಛೀಮಾರಿ ಹಾಕಿದ್ದಾರೆ. ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಘಟನೆಗಳನ್ನು ನೀಡಿದರೆ ಅವ್ಯವಸ್ಥೆಯ ಆಗರವಾಗಿದೆ. ಪೂರ್ವ ಸಿದ್ಧತೆ ಇಲ್ಲದೆ, ಪೊಲೀಸ್ ಬಂದೋ ಬಸ್ತ್ ಇಲ್ಲದೆ ಈ ಕಾರ್ಯಕ್ರಮ ನಡೆಸಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಥ ಭೀಕರ ಕಾಲ್ತುಳಿತ ಘಟನೆ ನಡೆದರೂ ಪೊಲೀಸ್ ಮತ್ತು ಖಾಸಗಿ ಭದ್ರತಾ ಸಿಬ್ಬಂದಿ ಇಲ್ಲದಿರುವುದಕ್ಕೆ ಯಾರು ಕಾರಣ? ಈ ಕಾರ್ಯಕ್ರಮದ ಅಯೋಜಕರು ಯಾರು? ಇವತ್ತೇ ಈ ಕಾರ್ಯಕ್ರಮ ನಡೆಸಲೇ ಬೇಕಾದ ತುರ್ತು ಏನಿತ್ತು? ಸರಕಾರ ಈ ಕಾರ್ಯಕ್ರಮಕ್ಕೆ ಹೇಗೆ ಅನುಮತಿ ನೀಡಿತು? ಅನುಮತಿ ಕೊಟ್ಟ ಮೇಲೆ ಪೊಲೀಸ್ ಬಂದೋ ಬಸ್ತ್ ಯಾಕಿರಲಿಲ್ಲ ? ಇದರಲ್ಲಿ ಪೊಲೀಸ್ ವಿಫಲರಾಗಿದ್ದಾರೆ ಯೇ? ಎಂದು ಶರವಣ ಪ್ರಶ್ನೆಗಳ ಸುರಿಮಳೆ ನಡೆಸಿದ್ದಾರೆ.

    ಕಾರ್ಯಕ್ರಮದ ಆಯೋಜಕರು ಇರಬಹದು, ಅಥವಾ ಅಗತ್ಯ ಪೂರ್ವ ಸಿದ್ಧತಾ ಅಥವಾ ಭದ್ರತಾ ಕ್ರಮ ಕೈಗೊಳ್ಳದ ಪೋಲೀಸರೆ ಇರಬಹದು . ತಕ್ಷಣ ಅವರನ್ನು ಬಂಧಿಸಬೇಕು. ಆಯೋಜಕರ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಘಟನೆಯಲ್ಲಿ ಹಲವು ವೈಫಲ್ಯಗಳು ಇರುವುದರಿಂದ ತಕ್ಷಣವೇ ಇದರ ಬಗ್ಗೆ ನ್ಯಾಯಾಂಗ ತನಿಖೆ ನಡೆಯಲಿ ಎಂದು ಟಿಎ ಶರವಣ ಒತ್ತಾಯಿಸಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಬೆಂಗಳೂರಿಗೆ ಹೊಸ ಕಮಿಷನರ್: ದಯಾನಂದ್ ಜಾಗಕ್ಕೆ ಸೀಮಂತ್ ಕುಮಾರ್ ನೇಮಿಸಿ ಸರ್ಕಾರ ಆದೇಶ!

    June 6, 2025

    ಬೆಂಗಳೂರಿನ ಮುಂದಿನ ಕಮಿಷನರ್ ಯಾರಾಗ್ತಾರೆ!? ಈ ಇಬ್ಬರಲ್ಲಿ ಒಬ್ಬರು ಫಿಕ್ಸ್!?

    June 5, 2025

    Breaking News: ಕಾಲ್ತುಳಿತಕ್ಕೆ 11 ಮಂದಿ ಬಲಿ: ಕಮಿಷನರ್ ದಯಾನಂದ್ ಸೇರಿ ನಾಲ್ವರು ಅಧಿಕಾರಿಗಳು ಸಸ್ಪೆಂಡ್!

    June 5, 2025

    ನಾನು ಕೂಡ ಆರ್‌ಸಿಬಿ ದೊಡ್ಡ ಫ್ಯಾನ್, ಆದ್ರೆ ನೋವು ಜಾಸ್ತಿ ಆಗಿದೆ: ಕಾಲ್ತುಳಿತಕ್ಕೆ ರಕ್ಷಿತಾ ಬೇಸರ!

    June 5, 2025

    ದಯವಿಟ್ಟು ಭಾರತಕ್ಕೆ ಬನ್ನಿ: RCBಗೆ ವಿಶ್ ಮಾಡಿದ ವಿಜಯ್ ಮಲ್ಯಗೆ ನಯವಾಗಿ ಸ್ವಾಗತಿಸಿದ SBI

    June 5, 2025

    4 ವರ್ಷದ ಮಗು ಬಲಿ ಪಡೆದ ಏರ್ ಕೂಲರ್‌.. ಘಟನೆ ಹೇಗಾಯ್ತು?

    June 5, 2025

    ಕಾಲ್ತುಳಿತ ಕೇಸ್: ಆರ್‌ಸಿಬಿ ಫ್ರಾಂಚೈಸಿ, ಕೆಎಸ್‌ಸಿಎ ವಿರುದ್ಧ ದಾಖಲಾಯ್ತು FIR!

    June 5, 2025

    ಮಹಾರಾಷ್ಟ್ರ ಸಿಎಂ ಆಲಮಟ್ಟಿ ಎತ್ತರದ ಬಗ್ಗೆ ತಕರಾರು ಮಾಡಿರುವುದು ಅಸಮಂಜಸ ಮತ್ತು ರಾಜಕೀಯ ಪ್ರೇರಿತ: ಬೊಮ್ಮಾಯಿ

    June 5, 2025

    ಡಿ.ಕೆ ಶಿವಕುಮಾರ್’ಗೆ ಕಣ್ಣೀರು ಬರುತ್ತಾ? ನನಗೇನೋ ಹಾಗೆ ಅನಿಸಿಲ್ಲ: ನಿಖಿಲ್ ಕುಮಾರಸ್ವಾಮಿ ವ್ಯಂಗ್ಯ

    June 5, 2025

    Stampede: ಕಾಲ್ತುಳಿತದಲ್ಲಿ 11 ಜನರ ಸಾವು: ಮೃತ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ RCB!

    June 5, 2025

    ಕಾಲ್ತುಳಿತ ದುರಂತ: ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್ -ವಿಚಾರಣೆ ಮುಂದೂಡಿಕೆ!

    June 5, 2025

    ಬೃಹತ್ ಕಾರ್ಯಕ್ರಮ, ಸಮಾರಂಭಗಳಿಗೆ ಹೊಸ SOP ರೂಪಿಸುತ್ತೇವೆ: ಸಚಿವ ಡಾ. ಜಿ.ಪರಮೇಶ್ವರ್

    June 5, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.