ಹುಬ್ಬಳ್ಳಿ: ರಾಜ್ಯ ಸರ್ಕಾರದ ಬೇಜವಾಬ್ದಾರಿತನದಿಂದ ಆರ್ಸಿಬಿ ಗೆಲುವಿನ ಸಂಭ್ರಮಾಚರಣೆ ಇದೊಂದು ಅಮಾಯಕರ ಬಲಿ ತೆಗೆದುಕೊಂಡು ಶೋಕಾಚರಣೆ ನಡೆಸಲಾಯಿತು. ಈ ಘಟನೆಗೆ ಸರ್ಕಾರವೇ ಕಾರಣ ಆಗಿದ್ದು ಈಗ ಅಮಾಯಕ ಪೊಲೀಸ್ ಅಧಿಕಾರಿಗಳನ್ನ ಅಮಾನತು ಮಾಡಿ ತನ್ನ ತುಘಲಕ್ ದರ್ಬಾರ್ ನಿಲುವು ಸರಕಾರ ಮೆರೆದಿದೆ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಯುವ ನಾಯಕ ರಾಜು ಅನಂತ ಸಾ ನಾಯಕವಾಡಿ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಹೇಳಿಕೆ ನೀಡಿರುವ ಅವರು ಯಾರು ಮಾಡಿದ ತಪ್ಪಿಗೆ ಯಾರಿಗೂ ಶಿಕ್ಷೆ ಕೊಟ್ಟಂತಾಗಿದ್ದು. ಮುಖ್ಯಮಂತ್ರಿ
ಸಿದ್ದರಾಮಯ್ಯ , ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ ಅವರು ನೈತಿಕ ಹೊಣೆ ಹೊತ್ತು ಮೊದಲು ರಾಜೀನಾಮೆ ಕೊಡಬೇಕು.
ನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ಚಿಕ್ಕ ಪೀಸ್ ಬೆಳ್ಳುಳ್ಳಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?
ಸಚಿವಜಮೀರ್ ಮಗ, ರಿಜ್ವಾನ್ ಮಗ, ಮುಖ್ಯ ಕಾರ್ಯದರ್ಶಿ ಮಗಳು, ಸಿಎಂ ಮೊಮ್ಮಗನಿಗೆ ಹಾಗೂ ಗಣ್ಯ ವ್ಯಕ್ತಿಗಳ ಮಕ್ಕಳ ಸಲುವಾಗಿ ವಿಧಾನಸೌಧದದ ಮುಂದೆ ಕಾರ್ಯಕ್ರಮ ಮಾಡಿದರಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಒಂದು ವಿರೋಧ ಪಕ್ಷದ ಪಕ್ಷವಾಗಿ ಭಾರತೀಯ ಜನತಾ ಪಕ್ಷ ಪರಿಣಾಮವಾಗಿ ಹೋರಾಟ ಮಾಡತಾ ಇಲ್ಲ ಕೇವಲ ಹೇಳಕೆಗಳಿಗೆ ಮಾತ್ರ ಅವರ ಹೋರಾಟ ಆಗಿದೆ.
ಹನ್ನೊಂದು ಜನರ ಸಾವು ದೊಡ್ಡ ಪ್ರಮಾಣದ ಅನ್ಯಾಯ. ಸೌಜನ್ಯಕ್ಕಾದರು ಬಿಜೆಪಿ ನಾಯಕರು ತಾರ್ಕಿಕ ಅಂತ್ಯ ಕಾಣುವವರೆಗೆ ಹೋರಾಟ ಮಾಡುತ್ತಾರೆಯೇ ಅಥವಾ ನಾಮಾ ಕಾ ವಾಸ್ತೇ ಎಂಬಂತೆ ಆರೋಪ ಪ್ರತ್ಯಾರೋಪಕ್ಕೆ ಮಾತ್ರ ಸೀಮೀತ ಮಾಡತ್ತಾರಾ ಅಂತಾ ಸಂಶಯ ಬರತಾ ಇದೆ ಎಂದರು.