ಚಾಮರಾಜನಗರ:- ಜಿಲ್ಲೆಯ ಹನೂರು ಪಟ್ಟಣದ ಆರ್ ಎಸ್ ದೊಡ್ಡಿ ಗ್ರಾಮದಿಂದ ಚಿಂಚಳ್ಳಿ ಗ್ರಾಮಕ್ಕೆ ಟ್ರಾಕ್ಟರ್ ನಲ್ಲಿ ಜೋಳದ ಕಡ್ಡಿ ತುಂಬಿಕೊಂಡು ಸಾಗುತ್ತಿದ್ದ ವೇಳೆ ಆಕಸ್ಮಿಕವಾಗಿ ಟ್ರ್ಯಾಕ್ಟರ್ ಗೆ ಬೆಂಕಿ ಬಿದ್ದಿದೆ.
ಗೋಡಂಬಿ ತಿನ್ನೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!? ನೀವು ಇದನ್ನು ತಿಳಿಯಲೇಬೇಕು?
ಟ್ಯ್ರಾಕ್ಟರ್ ಗೆ ಬೆಂಕಿಬಿದ್ದಿರುವ ಬಗ್ಗೆ ಅರಿವೇ ಇಲ್ಲದೆ ಟ್ರ್ಯಾಕ್ಟರ್ ಚಾಲನೆಯಲ್ಲಿ ಚಿಂಚಳ್ಳಿ ಗ್ರಾಮದ ರವಿ ಆರ್ ಎಸ್ ದೊಡ್ಡಿ ಗ್ರಾಮದಿಂದ ಚಿಂಚಳ್ಳಿ ಗ್ರಾಮಕ್ಕೆ ಜೋಳದ ಕಡ್ಡಿಯನ್ನು ತುಂಬಿಕೊಂಡು ಸಾಗುತ್ತಿದ್ರು.
ಈ ವೇಳೆ ಬಕ್ರೀದ್ ಬಂದೋಬಸ್ತ್ ಮುಗುಸಿಕೊಂಡು ವಾಪಸ್ಸಾಗುತ್ತಿದ್ದ ಹನೂರುಪೋಲೀಸ್ ಠಾಣೆಯ ಆನಂದಮೂರ್ತಿ ಬೆಂಕಿಗಾಹುತಿ ಗಮನಿಸಿ ಕೂಡಲೆ ಬೆಂಕಿ ನಂದಿಸಲು ಕ್ರಮವಹಿಸಿ ರೈತನ ಪ್ರಾಣ ಉಳಿಸಿದ ಘಟನೆ ನಡೆದಿದೆ.