ರಾಮನಗರ:- ರಾಮನಗರ ಹೊರವಲಯದ ಬೆಂಗಳೂರು-ಮೈಸೂರು ಹಳೇ ಹೆದ್ದಾರಿಯಲ್ಲಿ ಬೈಕ್ನಲ್ಲಿ ಹೋಗ್ತಿದ್ದ ಯುವಕ, ಯುವತಿ ಅಡ್ಡಗಟ್ಟಿ ನೈತಿಕ ಪೊಲೀಸ್ ಗಿರಿ ಮೆರೆದಿರೋ ಘಟನೆ ಜರುಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಮೆರೆದಿದ್ದಾರೆ. ಹಿಂದೂ ಯುವಕ, ಮುಸ್ಲಿಂ ಯುವತಿ ಬೈಕ್ ನಲ್ಲಿ ಪ್ರಯಾಣ ಮಾಡಿದ್ದಕ್ಕೆ ರಾಮನಗರದ ಸ್ಥಳವೊಂದರಲ್ಲಿ ಕೆಲ ಮುಸ್ಲಿಂ ಯುವಕರು ಅಡ್ಡಗಟ್ಟಿದ್ದಾರೆ. ನೀವು ಯಾರು ? ಎಲ್ಲಿಂದ ಬಂದಿದ್ದೀರಿ ? ಎಂದು ಪ್ರಶ್ನೆ ಮಾಡಿದ್ದಾರೆ. ಯುವತಿ, ಯುವಕನ ಮಾಹಿತಿ ಈವರೆಗೂ ಪತ್ತೆಯಾಗಿಲ್ಲ.
ಹಿಂದೂ ಯುವಕನ ಜೊತೆ ಮುಸ್ಲಿಂ ಯುವತಿ ಬೈಕ್ನಲ್ಲಿ ಹೋಗ್ತಿದ್ದ ಹಿನ್ನೆಲೆ ಮತ್ತೊಂದು ಬೈಕ್ನಲ್ಲಿ ಬಂದ ಇಬ್ಬರು ಮುಸ್ಲಿಂ ಯುವಕರು ಬೈಕ್ ಅಡ್ಡಗಟ್ಟಿ ಬೆದರಿಕೆ ಹಾಕಿದ್ದಾರೆ
ಮುಸ್ಲಿಂ ಯುವತಿಯನ್ನ ಯಾಕೆ ಬೈಕ್ ನಲ್ಲಿ ಕರೆದುಕೊಂಡು ಹೋಗ್ತಿದಿಯಾ ಎಂದು ಯುವಕನಿಗೆ ಅವಾಜ್ ಹಾಕಿ, ಹಿಂದೂ ಯುವಕನ ಜೊತೆ ಸುತ್ತಾಡ್ತಿದ್ದೀಯಾ, ನಿಮ್ಮ ತಂದೆಗೆ ಪೋನ್ ಮಾಡು ಎಂದು ಯುವತಿಗೂ ಬೆದರಿಕೆ ಹಾಕಿದ್ದಾರೆ.
ಮೊಬೈಲ್ನಲ್ಲಿ ವೀಡಿಯೋ ಮಾಡಿ ನೈತಿಕ ಪೊಲೀಸ್ ಗಿರಿ ಮೆರೆದಿರೋ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.