ಬಾಲಿವುಡ್ನ ಹಿರಿಯ ನಟರೊಬ್ಬರು ರಾಜಮೌಳಿ ಸಿನಿಮಾನಲ್ಲಿ ನಟಿಸಲು ನೋ ಎಂದಿದ್ದಾರೆ. ಆದರೆ ದಕ್ಷಿಣ ಭಾರತದ ಸ್ಟಾರ್ ನಟ ಎಸ್ ಹೇಳಿದ್ದಾರೆ. ರಾಜಮೌಳಿ ಸಿನಿಮಾನಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರೂ ಸಹ ವಿಶ್ವಮಟ್ಟದಲ್ಲಿ ಗುರುತು ಸಿಗುತ್ತದೆ ಹಾಗಾಗಿಯೇ ನಟ-ನಟಿಯರು ಅವರ ಸಿನಿಮಾನಲ್ಲಿ ನಟಿಸಲು ತುದಿಗಾಲಲ್ಲಿರುತ್ತಾರೆ. ಆದರೆ ಬಾಲಿವುಡ್ನ ಹಿರಿಯ ನಟರೊಬ್ಬರು ರಾಜಮೌಳಿ ಸಿನಿಮಾನಲ್ಲಿ ನಟಿಸಲು ನೋ ಎಂದಿದ್ದರಂತೆ.
ಮಹೇಶ್ ಬಾಬು ನಾಯಕ ನಟನ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡುತ್ತಿದ್ದು, ಸಿನಿಮಾನಲ್ಲಿ ಮಹೇಶ್ ಬಾಬು ತಂದೆಯ ಪಾತ್ರದಲ್ಲಿ ನಟಿಸುವಂತೆ ಬಾಲಿವುಡ್ ನಟ ನಾನಾ ಪಟೇಕರ್ ಅವರನ್ನು ಕೇಳಿದ್ದರಂತೆ. ಖುದ್ದಾಗಿ ಪುಣೆಗೆ ಹೋಗಿ ಅಲ್ಲಿ ನಾನಾ ಪಾಟೇಕರ್ಗೆ ಕತೆ ಹೇಳಿದ್ದಾರೆ. 20 ಕೋಟಿ ರೂಪಾಯಿ ಸಂಭಾವನೆ ಕೊಡುವುದಾಗಿಯೂ ಹೇಳಿದ್ದಾರೆ. ಆದರೆ ನಾನಾ ಪಾಟೇಕರ್ ನೋ ಎಂದಿದ್ದಾರೆ.
ಆದರೆ ಇದೀಗ ಅದೇ ಪಾತ್ರ ದಕ್ಷಿಣ ಭಾರತದ ಸ್ಟಾರ್ ನಟನ ಪಾಲಾಗಿದೆ ಎನ್ನಲಾಗುತ್ತಿದೆ. ತಮಿಳು ಚಿತ್ರರಂಗದ ಸ್ಟಾರ್ ನಟ, ಇತ್ತೀಚೆಗೆ ಬಾಲಿವುಡ್ನಲ್ಲೂ ಒಂದರ ಹಿಂದೊಂದರಂತೆ ವಿಲನ್ ಪಾತ್ರಗಳಲ್ಲಿ ನಟಿಸುತ್ತಿರುವ ಮಾಧವನ್ ಅವರು ಇದೀಗ ರಾಜಮೌಳಿ-ಮಹೇಶ್ ಬಾಬು ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ನಾನಾ ಪಾಟೇಕರ್ ಅವರು ನೋ ಹೇಳಿದ ಪಾತ್ರದಲ್ಲಿಯೇ ಮಾಧವನ್ ಅವರು ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ರಾಜಮೌಳಿ, ಮಹೇಶ್ ಬಾಬು ಸಿನಿಮಾ ಅಡ್ವೇಂಚರಸ್ ಸಿನಿಮಾ ಆಗಿದ್ದು, ಅರಣ್ಯದಲ್ಲಿ ನಡೆಯುವ ಸಾಹಸಮಯ ಕತೆಯನ್ನು ಒಳಗೊಂಡಿದೆ. ಸಿನಿಮಾಕ್ಕೆ ಹಾಲಿವುಡ್ನ ಇಂಡಿಯಾನಾ ಜೋನ್ಸ್ ಸ್ಪೂರ್ತಿ ಆಗಿದ್ದು, ಪ್ರಿಯಾಂಕಾ ಚೋಪ್ರಾ ಈ ಸಿನಿಮಾದ ನಾಯಕಿ ಆಗಿದ್ದಾರೆ.