Close Menu
Ain Live News
    Facebook X (Twitter) Instagram YouTube
    Monday, June 9
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಒಂದು ಕ್ಷಣವೂ ಅಧಿಕಾರದಲ್ಲಿ ಇರಲು ಈ ಸರ್ಕಾರಕ್ಕೆ ನೈತಿಕತೆ ಇಲ್ಲ: ಪರಿಷತ್ ಶಾಸಕ ಟಿ ಎ ಶರವಣ ಆಕ್ರೋಶ

    By Author AINJune 9, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು: RCB ವಿಜಯೋತ್ಸವ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆದಂತಹ ದುರ್ಘಟನೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಶಾಸಕರಾದ ಟಿ ಎ ಶರವಣ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಸೌಧ ಭದ್ರತಾ ಡಿಸಿಎಂ ಅವರು ವಿಧಾನಸೌಧದ ಮುಂದಿನ ಕಾರ್ಯಕ್ರಮದ ಬಗ್ಗೆ ಅಸಹಾಯಕತೆ ವ್ಯಕ್ತ ಪಡಿಸಿ ಬರೆದ ಪತ್ರವೇ ನನಗೆ ಗೊತ್ತಿಲ್ಲ ಎಂದು ಸಿಎಂ ಹೇಳಿದ್ದಾರೆ.

    ಖುದ್ದು ಮುಖ್ಯಮಂತ್ರಿಗಳೇ ತಮ್ಮ ನಾಯಕತ್ವದ ರಾಜ್ಯದಲ್ಲಿ ಮುಖ್ಯ ಸಂಗತಿಗಳೇ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿರುವುದು ಆಡಳಿತ ವ್ಯವಸ್ಥೆಯ ಮೇಲೆ ಅವರ ಹಿಡಿತ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಅದಲ್ಲದೆ ಎರಡನೇ ಬಾರಿಗೆ ಸಿಎಂ ಆಗಿರುವ ಸಿದ್ದರಾಮಯ್ಯ ಆಡಳಿತದ ಮೇಲಿನ ನಿಯಂತ್ರಣ ಕಳೆದು ಕೊಂಡಿದ್ದಾರೆ. ಎಂದು ಕಿಡಿಕಾರಿದ್ದಾರೆ.
    ಇಡೀ ಕಾರ್ಯಕ್ರಮಗಳ ಬಗ್ಗೆ ಗೃಹ ಮಂತ್ರಿಗೆ ಗೊತ್ತೇ ಇಲ್ಲ ಎನ್ನುವುದು ಇನ್ನಷ್ಟು ನಾಚಿಕೆಗೇಡಿನ ಸಂಗತಿ. ಒಬ್ಬ ಗೃಹ ಸಚಿವರಾಗಲು ಅರ್ಹತೆ ಕೆಳೆದುಕೊಂಡಿರುವ ಡಾ.ಪರಮೇಶ್ವರ್ ಯಾವ ಅರ್ಹತೆಯ ಮೇಲೆ ಅಧಿಕಾರದಲ್ಲಿಮುಂದುವರೆಯುತ್ತಾರೆಯೋ ಅವರೇ ಹೇಳಬೇಕು.

    ಇನ್ನೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವರ್ತನೆ ಹಾಸ್ಯಾಸ್ಪದ. ಆರ್.ಸಿ. ಬಿ. ತಂಡವನ್ನು ಸ್ವಾಗತಿಸಲು ಅವರೇ ವಿಮಾನ ನಿಲ್ದಾಣಕ್ಕೆ ಹೋಗಿ, ಅವರ ದ್ವಜ ಕೈಯಲ್ಲಿ ಹಿಡಿದು ಕೊಂಡು ಬಂದ ರೀತಿ ನೋಡಿದ್ರೆ..ತಾವು ಹೊಂದಿರುವ ಸ್ಥಾನದ ಘನತೆಯನ್ನು ಅವರು ಮರೆತಿರುವಂತಿದೆ. ಅವರ ವರ್ತನೆ ಕನ್ನಡಿಗರು ನಾಚಿ ತಲೆತಗ್ಗಿಸುವ ರೀತಿಯಲ್ಲಿ ಇದೆ.
    ಇನ್ನೂ ಚಿನ್ನಸ್ವಾಮಿ ಕ್ರೀಡಾಂಗಣದ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟಿಲ್ಲ.

    ಅದಕ್ಕೂ ಸರಕಾರಕ್ಕೂ ಸಂಬಂಧ ಇಲ್ಲ ಎಂದು ಸಿಎಂ ಹೇಳಿದ್ದಾರೆ. ಹಾಗಾದ್ರೆ ಡಿಸಿಎಂ ಈ ಕಾರ್ಯಕ್ರಮಕ್ಕೆ ಯಾಕೆ ಹೋದರು? ಡಿಸಿಎಂ ಅವರನ್ನು ಸಂಪುಟದಿಂದ ಸಿಎಂ ವಜಾ ಮಾಡುತ್ತಾರ? ಸ್ಟೇಡಿಯಂ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ ಅಂದಮೇಲೆ ಖುದ್ದು ಡಿಸಿಎಂ ತಮ್ಮ ಅಭಿಮಾನಿಗಳಿಗೆ, ಸಾರ್ವಜನಿಕರಿಗೆ ದೊಡ್ಡ ಸಂಖ್ಯೆಯಲ್ಲಿ ಚಿನ್ನ ಸ್ವಾಮಿ ಸ್ಟೇಡಿಯಂ ಗೆ ಬರುವಂತೆ ಹೇಗೆ ಕರೆ ಕೊಟ್ಟರು? ಈ ಘಟನೆಗಳನ್ನು ನೋಡಿದರೆ ಡಿಸಿಎಂ ಜವಾಬ್ದಾರಿ ಇಲ್ಲದ ರೀತಿ ವರ್ತಿಸಿದ್ದು, ಅವರನ್ನು ಸಂಪುಟದಿಂದ ಬಿಡಬೇಕು ಎನ್ನುವುದಕ್ಕೆ ಪುರಾವೆ ಸಿಗುತ್ತದೆ ಎಂದು ಹೇಳಿದರು.

    ಅದಲ್ಲದೆ ಕಾಲ್ತುಳಿತ ಘಟನೆಗಳು ನಡೆದು, ಸಾವುನೋವು ಸಂಭವಿಸಿದ ಬಳಿಕವೂ ಶಿವಕುಮಾರ್ ಅವರು ಚಿನ್ನಸ್ವಾಮಿ ಕ್ರೀಡಾಂಗಣ ವಿಜಯೋತ್ಸವದಲ್ಲಿ ಪಾಲ್ಗೊಂಡಿರುವುದು ನೋಡಿದರೆ ಅವರೊಬ್ಬ ಮಾನವೀಯತೆಯೇ ಇಲ್ಲದ ಮನುಷ್ಯರಾಗಿ ಕಾಣುತ್ತಾರೆ. ಈ ದುರಂತದ ನೈತಿಕ ಹೊಣೆಯನ್ನು ಅವರು ಹೊರಬೇಕಾಗಿದೆ.

    ಕುಂಭಮೇಳ ಕಾಲ್ತುಳಿತ ಘಟನೆಯನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿ ಯೋಗಿ ರಾಜೀನಾಮೆ ಕೊಟ್ಟರ ಎಂದು ಕಾಂಗ್ರೆಸ್ ಕೇಳುತ್ತದೆ. ಈ ಘಟನೆಗೂ ಕುಂಭಮೇಳ ಘಟನೆಗೂ ಸಂಬಂಧ ಇಲ್ಲ. ಇದು ಸರಕಾರಿ ಪ್ರಾಯೋಜಿತ ಹತ್ಯಾಕಾಂಡವಾಗಿದ್ದು, ಪೊಲೀಸರು ಭದ್ರತೆ ನೀಡಲು ಆಗುವುದಿಲ್ಲ ಎಂದು ಹೇಳಿದ ಬಳಿಕವೂ, ಸಾರ್ವಜನಿಕರನ್ನು ಸರಕವೇ ಆಹ್ವಾನಿಸಿ, ಅವರನ್ನು ಸಾಯಿಸಿದೆ. ಇದಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹಮಂತ್ರಿ ಹೊಣೆ ಒತ್ತು ಅಧಿಕಾರದಿಂದ ತೊಲಗಬೇಕು. ಒಂದು ಕ್ಷಣವೂ ಅಧಿಕಾರದಲ್ಲಿ ಇರಲು ಈ ಸರಕಾರಕ್ಕೆ ನೈತಿಕತೆ ಇಲ್ಲ ಎಂದು ವಿಧಾನ ಪರಿಷತ್ ಶಾಸಕರಾದ ಟಿ ಎ ಶರವಣ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಇಬ್ಬರು ಮಕ್ಕಳ ತಾಯಿ ಜೊತೆ ಅಕ್ರಮ ಸಂಬಂಧ: ಓಯೋ ರೂಮಿಗೆ ಕರೆಸಿ ಪ್ರಿಯತಮೆ ಹತ್ಯೆಗೈದ ಟೆಕ್ಕಿ..!

    June 9, 2025

    Corona Virus: ದೇಶದಲ್ಲಿ ಮುಂದುವರೆದ ಕೊರೋನಾ ವೈರಸ್ ಹಾವಳಿ: 24 ಗಂಟೆಗಳಲ್ಲಿ 358 ಜನರಲ್ಲಿ ಸೋಂಕು ದೃಢ

    June 9, 2025

    Gold Rate Today: ವಾವ್.. ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ! ಬಂಗಾರಪ್ರಿಯರು ಫುಲ್ ಖುಷ್

    June 9, 2025

    Video: ಮಿತಿಮೀರಿದ ಹಿಂದಿವಾಲಗಳ ಕುಚೇಷ್ಟೆ: ಆರ್ಥಿಕತೆ ನಡೆಯುವುದೇ ನಮ್ಮಿಂದ – ಆಟೋ ಚಾಲಕನ ಮೇಲೆ ದರ್ಪ ತೋರಿದ ಹಿಂದಿ ಮಹಿಳೆ

    June 9, 2025

    ತುಮಕೂರನ್ನೂ ಬೆಂಗಳೂರಿಗೆ ಸೇರಿಸಿಕೊಂಡ್ರೆ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದಾಗುತ್ತದೆ: ಸಚಿವ ಪರಮೇಶ್ವರ್

    June 9, 2025

    Bengaluru Stampede: ಹೆಡ್ ಕಾನ್ಸ್ಟೇಬಲ್ ಏಕಾಂಗಿ ಪ್ರತಿಭಟನೆ: ಬೆಂಬಲಕ್ಕೆ ಧಾವಿಸಿದ ಸುರೇಶ್ ಕುಮಾರ್!

    June 9, 2025

    Apple iPhone: ಐಫೋನ್ ಪ್ರಿಯರಿಗೆ ಭರ್ಜರಿ ನ್ಯೂಸ್: ಮಾರುಕಟ್ಟೆಗೆ ಲಗ್ಗೆ ಇಟ್ಟ ಆಪಲ್ 17 ಸೀರೀಸ್..! ಬೆಲೆ ಎಷ್ಟು ಗೊತ್ತಾ?

    June 9, 2025

    ವಿಧಾನಸೌಧ ವಿಚಾರವನ್ನು ಸಿಎಂ ತಲೆಗೆ ಕಟ್ಟಲು ಡಿಸಿಎಂ ಪ್ಲ್ಯಾನ್​ ಇದೆ: ಆರ್ ಅಶೋಕ್!

    June 9, 2025

    ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ವಾಹನಕಳ್ಳತನ: ಇಬ್ಬರು ಅರೆಸ್ಟ್!

    June 9, 2025

    ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಸಿ.ಎಂ.ಸಿದ್ದರಾಮಯ್ಯ

    June 9, 2025

    Rain News: ಇಂದಿನಿಂದ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಚುರುಕು!

    June 9, 2025

    ಏರ್ಪೋರ್ಟ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಯುಕನನ ಶವ ಪತ್ತೆ!

    June 9, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.