ಮೈಸೂರು: ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಫಲಿತಾಂಶ ಝೀರೋ. ಸುಮ್ಮನೇ ಹೆಚ್ಚಿನ ಪ್ರಚಾರ ಕೊಡ್ತಾರೆ ಅಷ್ಟೇ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಮೈಸೂರಿನಲ್ಲಿ ಮೋದಿ ಸರ್ಕಾರ ಬಂದು 11 ವರ್ಷ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಮೋದಿ ಸರ್ಕಾರಕ್ಕೆ ಝೀರೋ ಮಾರ್ಕ್ಸ್ ಎಂದಿದ್ದಾರೆ. ಮೋದಿ ಪ್ರಚಾರಕ್ಕಷ್ಟೇ ಇರೋದು ಎಂದಿದ್ದಾರೆ.
ನಿಮ್ಮ ಲ್ಯಾಪ್ ಟಾಪ್ ನಲ್ಲಿ ಬೇಗ ಚಾರ್ಜ್ ಕಡಿಮೆ ಆಗುತ್ತಾ!? ಹಾಗಿದ್ರೆ ಈ ರೀತಿ ಮಾಡಿ!
ಜೊತೆಗೆ ಮೋದಿ ಸರ್ಕಾರ ಡಿ ಮಾನೀಟೈಜೇಶನ್ ಮಾಡಿದ್ರು ಏನಾದ್ರೂ ಆಯ್ತಾ?, ಯಾರಿಗೆ ಅನುಕೂಲ ಆಯ್ತು? ಅಚ್ಚೆ ದಿನ್ ಆಯೆಗಾ ಅಂದ್ರು.. ಅಚ್ಚೆ ದಿನ್ ಬಂತಾ? ರೈತರ ಸಮಸ್ಯೆ ಬಗೆಹರಿಸುತ್ತೇನೆ ಅಂದ್ರು. ಡೆಲ್ಲಿ ರೈತರು 1 ವರ್ಷ ಚಳುವಳಿ ಮಾಡಿದ್ರು ಆದರೂ ಏನು ಆಗಲಿಲ್ಲ ಎಂದು ಹೀಗೆ ಮೋದಿ ಸರ್ಕಾರಕ್ಕೆ ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ.
ಅಲ್ಲದೇ ಮೋದಿ ಸರ್ಕಾರ ಈವರೆಗೂ ಏನು ಮಾಡಿಲ್ಲ. ಮೋದಿ ಹೇಳಿದ್ದು ಒಂದು ಕೂಡ ಮಾಡಲಿಲ್ಲ. 11 ವರ್ಷ ತುಂಬಿದೆ ಅಷ್ಟೇ. ಆದರೆ ಫಲಿತಾಂಶ ಝೀರೋ. ಸುಮ್ಮನೇ ಹೆಚ್ಚಿನ ಪ್ರಚಾರ ಕೊಡ್ತಾರೆ ಅಷ್ಟೇ ಎಂದು ಮೋದಿ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ.