Close Menu
Ain Live News
    Facebook X (Twitter) Instagram YouTube
    Friday, June 13
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಎರಡೇ ಎರಡು ‘ನೆನೆಸಿಟ್ಟ ಬಾದಾಮಿ’ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

    By AIN AuthorJune 12, 2025
    Share
    Facebook Twitter LinkedIn Pinterest Email
    Demo

    ಆರೋಗ್ಯಕಾರಿ ತೂಕದ ವಿಚಾರಕ್ಕೆ ಬಂದರೆ ಆಗ ಅದರಲ್ಲಿ ಬಾದಾಮಿಯು ಪ್ರಮುಖ ಸ್ಥಾನ ಪಡೆಯುವುದು ಎನ್ನುವುದರಲ್ಲಿ ಸಂಶಯವೇ ಇಲ್ಲ. ಯಾಕೆಂದರೆ ಇದರಲ್ಲಿ ಹಲವಾರು ಬಗೆಯ ಪೋಷಕಾಂಶಗಳಿದ್ದು, ಆರೋಗ್ಯವನ್ನು ರಕ್ಷಿಸಲು ಸಹಕಾರಿ ಆಗಿದೆ. ಹೀಗಾಗಿ ನಿತ್ಯವೂ ಬೆಳಗ್ಗೆ ಮೂರು ಬಾದಾಮಿ ತಿಂದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ದೇಹಕ್ಕೆ ಸಿಗುವುದು. ಮೂರು ಬಾದಾಮಿ ನಿತ್ಯವೂ ಸೇವನೆ ಮಾಡಿದರೆ ಆಗ ದೇಹಕ್ಕೆ ಯಾವೆಲ್ಲಾ ಲಾಭಗಳು ಸಿಗುವುದು ಎಂದು ನಾವು ನಿಮಗೆ ತಿಳಿಯದೆ ಇರುವ ವಿಚಾರಗಳನ್ನು ತಿಳಿಸಿಕೊಡಲಿದ್ದೇವೆ.

    ವಿಮಾನ ದುರಂತ: ಪವಾಡದ ರೀತಿ ಓರ್ವ ಬಚಾವ್..ಇದಲ್ವಾ ಅದೃಷ್ಟ!?

    ಭಾರತದಲ್ಲಿ ರಾತ್ರಿ ನೆನೆಸಿಟ್ಟ್ ಬಾದಾಮಿಯನ್ನು ತಿನ್ನುವುದು ಒಂದು ಸಂಪ್ರದಾಯದಂತೆ ಬಹುತೇಕ ಎಲ್ಲಾ ಕುಟುಂಬಗಳಲ್ಲಿಯೂ ನಡೆಸಿಕೊಂಡು ಬರಲಾಗುತ್ತಿದೆ. ನಮ್ಮ ಅಮ್ಮಂದಿರು ಮತ್ತು ಅಜ್ಜಿಯಂದಿರು ಈ ವಿಧಾನವನ್ನು ಹಿಂದಿನವರಿಂದ ಕಲಿತು ಬಂದು ತಮ್ಮ ಕುಟುಂಬದ ಕಿರಿಯರಿಗೂ ತಿನ್ನಿಸುವ ಮೂಲಕ ಈ ಸಂಪ್ರದಾಯವನ್ನು ಜೀವಂತವಾಗಿ ಇರಿಸಿದ್ದಾರೆ. ಆದರೆ ಏಕಾಗಿ ನೆನೆಸಿಟ್ಟು ತಿನ್ನಬೇಕು? ಹುರಿದು ಅಥವಾ ಕರಿದು ತಿಂದರೆ ಇದರ ರುಚಿ ಹೆಚ್ಚುವುದಲ್ಲವೇ? ಒಣಗಿದ್ದಂತೆಯೇ ತಿಂದರೆ ಏನು ನಷ್ಟ? ಇಂತಹ ಕೆಲವು ಪ್ರಶ್ನೆಗಳು ಎಲ್ಲರ ಮನದಲ್ಲಿಯೂ ಮೂಡಬಹುದು. ಇಂದಿನ ಲೇಖನದಲ್ಲಿ ಇಂತಹ ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರವನ್ನು ಮಾಹಿತಿಯ ರೂಪದಲ್ಲಿ ನೀಡಲಾಗಿದೆ. ಬನ್ನಿ, ನೋಡೋಣ. ನೆನೆಸಿಟ್ಟ ಬಾದಾಮಿಗಳ ಸೇವನೆಯಿಂದ ಪಡೆಯಬಹುದಾದ ಆರೋಗ್ಯಕರ ಪ್ರಯೋಜನಗಳು.

    ಬಾದಾಮಿಯಲ್ಲಿ ಹಲವಾರು ಅಗತ್ಯ ಪೋಷಕಾಂಶಗಳಿವೆ. ಬಾದಾಮಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು, ಪ್ರೋಟೀನ್, ವಿಟಮಿನ್ ಇ, ಮೆಗ್ನೀಶಿಯಂ ಹಾಗೂ ಇತರ ಪೋಷಕಾಂಶಗಳಿವೆ. ಇವೆಲ್ಲವೂ ಬಾದಾಮಿ ಒಣಗಿದ್ದಾಗ ಲಭಿಸುವುದಕ್ಕಿಂತ ಹೆಚ್ಚಾಗಿ ನೆನೆಸಿಟ್ಟು ಹಸಿಯಾದಾಗ ಲಭಿಸುತ್ತವೆ. ದಿನದ ಪ್ರಾರಂಭವನ್ನು ಅತ್ಯುತ್ತಮವಾಗಿ ಪ್ರಾರಂಭಿಸಲು ಈ ಎಲ್ಲಾ ಪೋಷಕಾಂಶಗಳು ನೆರವಾಗುತ್ತವೆ.

    ಬಾದಾಮಿಯನ್ನು ಒಣದಾಗಿದ್ದಾಗ ಸೇವಿಸುವುದಕ್ಕಿಂತ ನೆನೆಸಿಟ್ಟು ಸೇವಿಸಿದಾಗ ಜೀರ್ಣಿಸಿಕೊಳ್ಳುವುದು ಸುಲಭ. ನೆನೆಸಿಟ್ಟ ಬಾದಾಮಿ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಅಲ್ಲದೇ ಈಗ ಪೋಷಕಾಂಶಗಳನ್ನು ಹೀರಿಕೊಳ್ಳಲು ಹೆಚ್ಚಿನ ಸಹಾಯ ಸಿಗುತ್ತದೆ. ಈ ಪೋಷಕಾಂಶಗಳು ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಕಿಣ್ವಗಳ ಉತ್ಪಾದನೆಗೆ ಪ್ರಚೋದನೆ ನೀಡುತ್ತವೆ. ಪರಿಣಾಮವಾಗಿ ಜೀರ್ಣಕ್ರಿಯೆ ಸುಲಭ ಮತ್ತು ಪರಿಪೂರ್ಣವಾಗುತ್ತದೆ.

    ಬಾದಾಮಿಗಳಲ್ಲಿ ವಿಟಮಿನ್ ಇ ಸಮೃದ್ದ ಪ್ರಮಾಣದಲ್ಲಿದೆ. ಈ ವಿಟಮಿನ್ ಇ ನಮ್ಮ ಚರ್ಮ ಮತ್ತು ಕೂದಲಿನ ಪೋಷಣೆಗೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶವಾಗಿದೆ. ಬಾದಾಮಿಯಲ್ಲಿರುವ ವಿಟಮಿನ್ ಇ ನಿಮ್ಮ ಚರ್ಮವನ್ನು ನಯವಾಗಿ ಮತ್ತು ಸೊಂಪಾಗಿಸಲು ನೆರವಾಗುತ್ತದೆ.

    ಚರ್ಮಕ್ಕೆ ಬಾದಾಮಿ ಎಣ್ಣೆಯನ್ನು ಬಳಸುವುದರಿಂದಲೂ ಹೆಚ್ಚಿನ ಪ್ರಯೋಜನ ಪಡೆಯಬಹುದು. ಕೂದಲಿನ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾ ಬಾದಾಮಿ ನೆರವಾಗುತ್ತದೆ. ವಿಶೇಷವಾಗಿ ಕೂದಲು ಉದುರುವಿಕೆಯ ತೊಂದರೆ ಇರುವ ವ್ಯಕ್ತಿಗಳಿಗೆ ಬಾದಾಮಿ ಎಣ್ಣೆ ಹೆಚ್ಚಿನ ನೆರವು ನೀಡುತ್ತದೆ.

    ಬಾದಾಮಿಯ ಗುಣಗಳಲ್ಲಿ ಅತ್ಯುತ್ತಮ ಪ್ರಯೋಜನವೆಂದರೆ ಮೆದುಳಿನ ಕ್ಷಮತೆ ಹೆಚ್ಚಿಸುವುದು. ಈ ಬಗ್ಗೆ ನಡೆಸಿದ ಕೆಲವಾರು ಅಧ್ಯಯನಗಳಲ್ಲಿ ಬಾದಾಮಿಯನ್ನು ನಿತ್ಯವೂ ಬೆಳಗ್ಗಿನ ಆಹಾರವಾಗಿ ಸೇವಿಸುವ ವ್ಯಕ್ತಿಗಳ ಮೆದುಳಿನ ಕ್ಷಮತೆ ಉಳಿದವರಿಗಿಂತ ಹೆಚ್ಚಿರುತ್ತದೆ ಎಂದು ಕಂಡುಕೊಳ್ಳಲಾಗಿದೆ. ಬಾದಾಮಿಯಲ್ಲಿರುವ ವಿಟಮಿನ್ ಇ ಮೆದುಳಿನ ತಾರ್ಕಿಕ, ಸ್ಮರಣಾ ಮತ್ತು ಚಿಂತನಾ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ ಹಾಗೂ ಮರೆಗುಳಿತನವನ್ನು ಇಲ್ಲವಾಗಿಸುತ್ತದೆ. ಮಕ್ಕಳಿಗೆ ಪರೀಕ್ಷಾ ಸಮಯದಲ್ಲಿ ಹೆಚ್ಚಿನ ಸ್ಮರಣ ಶಕ್ತಿಯ ಅಗತ್ಯವಿರುವ ಕಾರಣದಿಂದಲೇ ತಾಯಂದಿರುವ ಮಕ್ಕಳಿಗೆ ತಪ್ಪದೇ ಬಾದಾಮಿಯನ್ನು ತಿನ್ನಿಸುತ್ತಾರೆ

    ನಮ್ಮ ಆರೋಗ್ಯಕ್ಕೆ ಕೊಲೆಸ್ಟ್ರಾಲ್ ಬೇಕೇ ಬೇಕು. ಆದರೆ ಇದರಲ್ಲಿ ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಗಳೆಂಬ ಎರಡು ಬಗೆ ಗಳಿರುತ್ತವೆ. (ಕ್ರಮವಾಗಿ ಹೆಚ್. ಡಿ. ಎಲ್ ಮತ್ತು ಎಲ್. ಡಿ. ಎಲ್) ಇವೆರಡೂ ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಸರೈಡ್ ಎಂಬ ಇನ್ನೊಂದು ಬಗೆಯ ಕೊಬ್ಬುಗಳು ಒಂದು ಅನುಪಾತದಲ್ಲಿದ್ದಾಗಲೇ ಉತ್ತಮ ಅರೋಗ್ಯ ಪಡೆಯಲು ಸಾಧ್ಯ. ಬಾದಾಮಿಯಲ್ಲಿರುವ ಪೋಷಕಾಂಶಗಳು ಈ ಸಮತೋಲನವನ್ನು ಸಾಧಿಸಲು ಹೆಚ್ಚಿನ ನೆರವು ನೀಡುತ್ತವೆ. ಅಂದರೆ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಲು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಲು ನೆರವಾಗುತ್ತವೆ. ಇದರಿಂದ ಹೃದಯದ ಮೇಲಿನ ಹೊರೆ ತಗ್ಗುತ್ತದೆ ಹಾಗೂ ತನ್ಮೂಲಕ ಹೃದಯದ ಕ್ಷಮತೆ ಮತ್ತು ಆರೋಗ್ಯ ಎರಡೂ ಹೆಚ್ಚುತ್ತವೆ.

    ವಿಶೇಷವಾಗಿ ಅಧಿಕ ರಕ್ತದೊತ್ತಡದ ತೊಂದರೆ ಇರುವ ವ್ಯಕ್ತಿಗಳು ನಿತ್ಯವೂ ರಾತ್ರಿ ನೆನೆಸಿಟ್ಟ ಬಾದಾಮಿಯನ್ನು ಬೆಳಿಗ್ಗೆ ಸೇವಿಸುವ ಮೂಲಕ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ. ಕೇವಲ ಹೃದಯ ಮತ್ತು ಮೆದುಳಿಗೆ ಮಾತ್ರವಲ್ಲ, ಒಟ್ಟಾರೆ ಆರೋಗ್ಯಕ್ಕೆ ಬಾದಾಮಿ ಉತ್ತಮವಾಗಿದೆ. ಬಾದಾಮಿ ಕೆಲವು ಬಗೆಯ ಕ್ಯಾನ್ಸರ್ ಗಳನ್ನೂ ತಡೆಯುತ್ತದೆ ಎಂದು ಕಂಡುಕೊಳ್ಳಲಾಗಿದೆ.

    ನೆನೆಸಿಟ್ಟ ಬಾದಾಮಿಯ ಸಿಪ್ಪೆಯನ್ನು ಕೊಂಚ ಒತ್ತಡದಲ್ಲಿ ಜಾರಿಸಿದರೆ ಸುಲಭವಾಗಿ ಸುಲಿಯಲು ಸಾಧ್ಯವಾಗುತ್ತದೆ. ಈ ಸಿಪ್ಪೆ ಕೊಂಚ ಕಹಿ ಇರುವ ಕಾರಣ ತಾಯಂದಿರುವ ಸಿಪ್ಪೆ ನಿವಾರಿಸಿಯೇ ಮಕ್ಕಳಿಗೆ ನೀಡುತ್ತಾರೆ.

    Demo
    Share. Facebook Twitter LinkedIn Email WhatsApp

    Related Posts

    ಮಳೆಗಾಲದಲ್ಲಿ ಹಾವುಗಳು ಮನೆ ಬಳಿ ಸುತ್ತಾಡುತ್ತಾ ಇದೆಯಾ? ಹಾಗಿದ್ರೆ ಈ ಕೆಲಸ ಮಾಡಿ!

    June 13, 2025

    ಕಿಡ್ನಿ ಸ್ಟೋನ್‌ ಕರಗಲು ವೀಳ್ಯದೆಲೆ ರಸಕ್ಕೆ ಇದನ್ನು ಬೆರೆಸಿ ತಿನ್ನಿ.. ಆಮೇಲೆ ನೋಡಿ ಚಮತ್ಕಾರ!

    June 13, 2025

    ನಕ್ಕರೆ ಡಿಂಪಲ್ ಬೀಳುತ್ತಾ!? ಇದು ಅದೃಷ್ಟ ಅಲ್ಲ ಮರ್ರೆ.. ಇದು ಆರೋಗ್ಯ ಸಮಸ್ಯೆ ಅಂತೆ!

    June 13, 2025

    ವಿಮಾನದಲ್ಲಿ ಪ್ರಯಾಣಿಸೋ ಮುನ್ನ ಇದು ತಿಳಿದಿರಲಿ: ಈ ಸೀಟಲ್ಲಿ ಕೂರೋದು ಸೇಫ್!

    June 13, 2025

    ಬಿಳಿ ಕೂದಲು ಕಪ್ಪಾಗಬೇಕಾ!? ದುಬಾರಿ Product ಗೆ ಹೇಳಿ ಟಾಟ… ಜಸ್ಟ್, ಎರಡು ಚಮಚ ಕಾಫಿ ಪುಡಿ ಸಾಕು!

    June 13, 2025

    ತುಂಬಾ ಹತ್ತಿರದಿಂದ ಕೂತು ಟಿವಿ ನೋಡ್ತೀರಾ? ಇದು ಡೇಂಜರ್.. ಈ ಬಗ್ಗೆ ನೀವು ತಿಳಿದುಕೊಳ್ಳಬೇಕು!

    June 13, 2025

    Aloe Vera Juice: ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿದರೆ ಎಷ್ಟೆಲ್ಲಾ ಲಾಭ ಗೊತ್ತಾ..?

    June 13, 2025

    ತಡವಾಗಿ ಊಟ ಮಾಡುವ ಅಭ್ಯಾಸ ನಿಮಗಿದೆಯಾ? ತಕ್ಷಣ ಬದಲಾಯಿಸಿಕೊಳ್ಳಿ.. ಇಲ್ಲದಿದ್ದರೆ ಈ 5 ಕಾಯಿಲೆಗಳು ಬರೋದು ಗ್ಯಾರಂಟಿ

    June 13, 2025

    ಮೆಡಿಕವರ್ ಆಸ್ಪತ್ರೆ, ಬೆಂಗಳೂರು: ಆರ್ಥೋಪೆಡಿಕ್ಸ್ ವಿಭಾಗದ ಉತ್ಕೃಷ್ಟತಾ ಕೇಂದ್ರಕ್ಕೆ ಭವ್ಯ ಉದ್ಘಾಟನೆ

    June 13, 2025

    ನೀವು ಯಾವಾಗಲೂ ಮೊಬೈಲ್, ಟಿವಿ ಜಾಸ್ತಿ ನೋಡುತ್ತೀರಾ? ಹಾಗಿದ್ರೆ ನಿಮ್ಮ ಲೈಂಗಿಕ ಜೀವನ ಕಷ್ಟ..ಕಷ್ಟ!

    June 12, 2025

    ನೀವು ಊಟ ಮಾಡುವಾಗಲೂ ಹೆಚ್ಚು ಕೂದಲು ಸಿಗುತ್ತಾ!? ಹಾಗಿದ್ರೆ ಈ ಸಮಸ್ಯೆಗಳಿರುವುದು ಫಿಕ್ಸ್!

    June 12, 2025

    ಈ ಆಹಾರ ಅಪ್ಪಿತಪ್ಪಿಯೂ ಸೇವಿಸಬೇಡಿ: ಹಾರ್ಟ್‌ ಅಟ್ಯಾಕ್‌ ಅಪಾಯ ಹೆಚ್ಚು!

    June 12, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.