ಬೆಂಗಳೂರು:- ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನ ದುರಂತಕ್ಕೆ ಪರಿಷತ್ ಶಾಸಕ ಟಿಎ ಶರವಣ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಅಹಮದಾಬಾದ್ ನಲ್ಲಿ ಏರ್ ಇಂಡಿಯಾಗೆ ಸೇರಿರುವ ವಿಮಾನ ಪತನ ವಾದ ಕಾರಣ ಭಾರಿ ಪ್ರಮಾಣದಲ್ಲಿ ಸಂಭವಿಸಿದ ಸಾವು ನೋವುಗಳ ಬಗ್ಗೆ ನಾನು ಕಳಕಳಿಯನ್ನು ವ್ಯಕ್ತಪಡಿಸುತ್ತೇನೆ. ಮತ್ತು ಮೃತರ ಕುಟುಂಬಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ತಾಂತ್ರಿಕ ದೋಷದಿಂದ ಸಂಭವಿಸಿದ ಈ ದುರಂತ ನಮ್ಮ ಏರ್ ಇಂಡಿಯಾ ಸಂಸ್ಥೆ ಆಧುನಿಕವಾಗಿ ಬದಲಾವಣೆಯ ಜೊತೆ, ಸುರಕ್ಷತಾ ಕ್ರಮಗಳನ್ನು ಸುಧಾರಣೆ ಮಾಡಿಕೊಳ್ಳಬೇಕು ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ವಿಮಾನದಲ್ಲಿ ಕುಳಿತವರು ಈ ಭಾರಿ ದುರಂತದಲ್ಲಿ ಮಡಿದಿದ್ದರೆ, ಮತ್ತೊಂದೆಡೆ ಮೆಡಿಕಲ್ ಕಾಲೇಜು ಮೇಲೆ ಬಿದ್ದ ಈ ವಿಮಾನ ಹತ್ತಾರು ಅಮಾಯಕ ಜೀವಗಳನ್ನು, ಭವಿಷ್ಯದಲ್ಲಿ ಬೆಳೆದು ದೇಶವನ್ನು ಬೆಳಗಬೇಕಾದ ತರುಣ ವೈದ್ಯರ ಪ್ರಾಣವನ್ನು ಬಲಿ ಪಡೆದಿದೆ. ಇದು ನನ್ನ ಮನಸ್ಸನ್ನು ತೀವ್ರ ದುಃಖಕ್ಕೆ ತಳ್ಳಿದೆ. ದಕ್ಷ , ಕರುಣಾಮಯಿ ಪ್ರಧಾನಿ ನರೇಂದ್ರಮೋದಿ ಅವರು ಈ ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಸೂಕ್ತ ನ್ಯಾಯ ದೊರಕಿಸುತ್ತಾರೆ ಎನ್ನುವ ಅಚಲ ನಂಬಿಕೆ ನನ್ನದಾಗಿದೆ ಎಂದು ಟಿಎ ಶರವಣ ಬರೆದುಕೊಂಡಿದ್ದಾರೆ.