ಬೆಂಗಳೂರು:- ಕೊಲೆ ಮಾಡಲು ಬಂದ ರೌಡಿಶೀಟರ್ ನನ್ನ ಹತ್ಯೆ ಮಾಡಿದ್ದ ಗ್ಯಾಂಗ್ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಎಸ್, ಮಾರಕಾಸ್ತ್ರಗಳಿಂದ ಕೊಚ್ಚಿ ನಡುರಸ್ತೆಯಲ್ಲಿ ರೌಡಿಶೀಟರ್ ಕೊಲೆಗೈದಿದ್ದ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ. ಮಹೇಶ್, ಶ್ರೀಕಾಂತ್, ರಾಜೇಶ್ ಮತ್ತು ಸುಮಂತ್ ಬಂಧಿತರು.
ಕಳೆದ ಜೂನ್ 10 ರಂದು ಕಾಡುಗೋಡಿ ಠಾಣಾ ವ್ಯಾಪ್ತಿಯ ವಿಜಯಲಕ್ಷ್ಮಿ ಕಾಲೋನಿಯಲ್ಲಿ ನೇಪಾಳಿ ಅಲಿಯಾಸ್ ಪುನೀತ್ ನನ್ನು ನಾಲ್ವರು ಆರೋಪಿಗಳು ಕೊಲೆಗೈದಿದ್ದರು. ಪುನೀತ್ ಅಲಿಯಾಸ್ ನೇಪಾಳಿ ಹತ್ಯೆಯಾದ ರೌಡಿಶೀಟರ್. ಕೊಲೆಯಾದ ಪುನೀತ್ ಆರೋಪಿ ಮಹೇಶ್ ಬಳಿ 40 ಸಾವಿರಕ್ಕೆ ಬೈಕ್ ಖರೀದಿ ಮಾಡಿದ್ದ. ಆದ್ರೆ ದಿನ ಕಳೆದಂತೆ ಹಣ ಕೊಡದೆ ಸತಾಯಿಸ್ತಿದ್ದ. ಕೊನೆಗೆ ಹಣ ಕೊಡೋದಿಲ್ಲ ಎಂದು ಬೆದರಿಕೆ ಹಾಕಿದ್ದ. ಅಷ್ಟೆ ಅಲ್ದೆ ಕೇಳಿದಾಗ ದುಡ್ಡು ಕೊಡ್ಬೇಕು ಇಲ್ದಿದ್ರೆ ನಿನ್ನ ಮಗಳನ್ನ ಕಿಡ್ನಾಪ್ ಮಾಡ್ತೀವಿ ಎಂದು ಥ್ರೆಟ್ ಮಾಡಿದ್ದ.
ಅಲ್ಲದೇ ಮೃತ ಪುನೀತ್ ರೌಡಿ ಶ್ರೀಕಾಂತ್ ಜೊತೆ ಚರ್ಚೆ ನಡೆಸಿ ರಾಜಿಯಾಗಲು ಮಹೇಶ್ ಯತ್ನಿಸಿದ್ದ. ಇಷ್ಟಾದ್ರೂ ಶ್ರೀಕಾಂತ್ ಮತ್ತು ಮಹೇಶ್ ಗೆ ವಾರ್ನಿಂಗ್ ಕೊಟ್ಟು ಕೊಲೆ ಮಾಡೋದಾಗಿ ಪುನೀತ್ ಬೆದರಿಕೆ ಹಾಕಿದ್ದ. 2 ದಿನದ ಹಿಂದೆ ಅಟ್ಯಾಕ್ ಗೆ ಬಂದಿದ್ದ ಅರ್ಬಾಜ್ ಮತ್ತು ಪುನೀತ್ ಮೇಲೆ ಮಹೇಶ್ ಮಚ್ಚು ಬೀಸಿದ್ದ.
ಈ ವೇಳೆ ಸಣ್ಣ ಪುಟ್ಟ ಗಾಯಗಳಿಂದ ಪುನೀತ್ ಸಹಚರ ಅರ್ಬಾಜ್ ತಪ್ಪಿಸಿಕೊಂಡು ಓಡಿದ್ದ. ಆದ್ರೆ ಮಹೇಶ್ ಕೈಗೆ ರೌಡಿ ಪುನೀತ್ ಸಿಕ್ಕಿದ್ದು, ನಡು ರಸ್ತೆಯಲ್ಲೇ ಕೊಚ್ಚಿ ಕೊಂದಿದ್ದ. ಹೀಗಾಗಿ ಮಹೇಶ್ ಗೆ ಸಾಥ್ ನೀಡಿದ್ದ ಶ್ರಿಕಾಂತ್, ರಾಜೇಶ್, ಸುಮಂತ್ ಬಂಧಿಸಲಾಗಿದ್ದು, ನಾಲ್ವರು ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.