Close Menu
Ain Live News
    Facebook X (Twitter) Instagram YouTube
    Saturday, June 14
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನಿರುದ್ಯೋಗ ಯುವಕರಿಗಾಗಿ ಬೋಸ್ಟನ್ಇನ್ನಿ ಟ್ಯೂಟ್ ಆಫ್ ಅನಾಲಿಟಿಕ್ಸ್ ಕ್ಯಾಂಪಸ್ ಆರಂಭ: ಶ್ರೀನಿವಾಸ ಕ್ಯಾರಕಟ್ಟಿ

    By Author AINJune 13, 2025
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗ ಸೇರಿದಂತೆ ಈ ಭಾಗದಲ್ಲಿ ನಿರುದ್ಯೋಗ ಯುವಕ ಹಾಗೂ ಯುವತಿರಿಗೆ ಉದ್ಯೋಗ ಸೃಷ್ಟಿಸುವ ಹೊಸ ಹೊಸ ಕೋರ್ಸ್ ಪರಿಚಯಿಸುವ ನಿಟ್ಟಿನಲ್ಲಿ ಬೋಸ್ಟನ್‌ಇನ್‌ಸ್ಟಿಟ್ಯೂಟ್ ಆಫ್ ಅನಾಲಿಟಿಕ್ಸ್, ವಿದ್ಯಾನಗರದಲ್ಲಿ ತನ್ನ ಫ್ರಾಂಚೈಸ್ ಕ್ಯಾಂಪಸ್ ಅನ್ನು ತೆರೆಯುತ್ತಿದ್ದೇವೆ ಎಂದು ಸಂಸ್ಥೆಯ ನಿರ್ದೇಶಕರಾದ ಶ್ರೀನಿವಾಸ ಪ್ರಕಾಶ ಕ್ಯಾರಕಟ್ಟಿ ಹೇಳಿದರು.

    ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಎರಡೇ ಎರಡು ‘ನೆನೆಸಿಟ್ಟ ಬಾದಾಮಿ’ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

    ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡೇಟಾ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಜನರೇಟಿವ್ ಎಐ (Al) ಮತ್ತು ಏಜೆಂಟ್ Al ಅಭಿವೃದ್ಧಿ ಸೈಬರ್ ಸೆಕ್ಯುರಿಟಿ ಮತ್ತು ಎಥಿಕಲ್ ಹ್ಯಾಕಿಂಗ್, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಡೆವೊಪ್ಸ್ ಮತ್ತು ಇನ್ನೂ ಹೆಚ್ಚಿನವುಗಳಲ್ಲಿ ವಿಶ್ವ ದರ್ಜೆಯ ತರಬೇತಿಯನ್ನ ಆನ್ ಲೈನ್ ಹಾಗೂ ಆಪ್ ಲೈನ್ ವ್ಯವಸ್ಥೆಯಲ್ಲಿ ನೀಡಲಾಗುವುದು.

    ಬಿಐಎಯ ಫ್ರಾಂಚೈಸ್ ಕ್ಯಾಂಪಸ್ ಆಗಿರುವ ಈ ಹೊಸ ಕೇಂದ್ರವು ಸಂಸ್ಥೆಯ ಅಂತರರಾಷ್ಟ್ರೀಯ ಶೈಕ್ಷಣಿಕ ಮಾನದಂಡಗಳ ಜೊತೆಗೆ ವಿದ್ಯಾರ್ಥಿಗಳ ವ್ಯತ್ತಿ ಬದುಕಿಗೆ ಅನುಕೂಲ ಆಗಲು ಇಲ್ಲಿ ಶಿಕ್ಷಣವನ್ನು ನೀಡಲಾಗುತ್ತದೆ. ಡಿಪ್ಲೊಮಾ ಮತ್ತು ಮಾಸ್ಟರ್ ಡಿಪ್ಲೊಮಾ ಕೋರ್ಸ್‌ಗಳು ಸೇರಿದಂತೆ ಬಿಐಎಯ ಡ್ಯುಯಲ್ ಪ್ರಮಾಣೀಕರಣ ಕಾರ್ಯ ಕ್ರಮಗಳು ಕಲಿಯುವವರಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಎದುರಿಸಲು ಇದು ಸಹಕಾರಿಯಾಗುತ್ತದೆ.

    ಬಿಐಎ ಪ್ರಮಾಣೀಕರಣ ಕೋರ್ಸ್‌ಗಳು 2 ತಿಂಗಳ ಖಾತರಿಯ ಇಂಟರ್ನ್‌ ಶಿಪ್‌ನೊಂದಿಗೆ ಡಿಪ್ಲೊಮಾ ಕಾರ್ಯಕ್ರಮಗಳು ಮತ್ತು 6 ತಿಂಗಳ ಕೆಲಸದ ತರಬೇತಿಯೊಂದಿಗೆ ಮಾಸ್ಟರ್ ಡಿಪ್ಲೊಮಾ ಕಾರ್ಯಕ್ರಮಗಳನ್ನು ನೀಡುತ್ತದೆ. ಈಗಾಗಲೇ ಸಾಕಷ್ಟು ಕಂಪನಿಗಳು ಐಟಿ ಬಿಟಿ ನಗರಕ್ಕೆ ಮಾತ್ರ ಸೀಮಿತ ಆಗಿದ್ದು ಈ ತಾರತಮ್ಯ ಹೋಗಲಾಡಿಸಲು ತಮ್ಮ ಕ್ಯಾಂಪಸ್ ಮುಂದಾಗಿದೆ ಎಂದರು.

    ಬಿಐಎದಲ್ಲಿ ಕೋರ್ಸ್ ಪಡೆದ ಸಂಸ್ಥೆಯನ್ನು ಹುಬ್ಬಳಿಗೆ ತರುವುದು ಸ್ಥಳೀಯ ಯುವಕರನ್ನ ಇನ್ನಷ್ಟು ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಭವಿಷ್ಯಕ್ಕೆ ಸಿದ್ಧವಾಗಿರುವ ಕೌಶಲ್ಯಗಳೊಂದಿಗೆ ಸಬಲೀ ಕರಣಗೊಳಿಸುವುದಾಗಿದೆ ಎಂದರು. ತಂದೆ ತಾಯಿ ಇಲ್ಲದ ಅನಾಥ ಮಕ್ಕಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡುವುದಾಗಿ ತಿಳಿಸಿದರು.

    ಈ ಕ್ಯಾಂಪಸ್ ವಿದ್ಯಾರ್ಥಿಗಳು ಮತ್ತು ಕೆಲಸ ಮಾಡುವ ವೃತ್ತಿಪರರಿಗೆ ಉತ್ತಮ ಗುಣಮಟ್ಟದ ತಾಂತ್ರಿಕ ಶಿಕ್ಷಣ ಮತ್ತು ವ್ರತ್ತಿಪರ ಬೆಳವಣಿಗೆಯ ಅವಕಾಶಗಳ ಕೇಂದ್ರವಾಗಿ ಕಾರ್ಯನಿರ್ವಣೆ ಮಾಡಲಿದೆ. ಜೂನ್ 15 ರಂದು

    ಭಾನುವಾರ ಬೆಳಿಗ್ಗೆ 11 ಗಂಟೆಗೆ
    ಕ್ಯಾಂಪಸ್ ಉದ್ಘಾಟನೆ ಮಾಡಲಿದ್ದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಎನ್‌.ಶಶಿಕುಮಾರ್, ನಿವೃತ್ತ ಡಿಸಿಪಿ ಬಸವರಾಜ ಮಾಲಗತ್ತಿ, ಹುಬ್ಬಳ್ಳಿ ಧಾರವಾಡ ಮಹಾನಗರ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಆಗಮಿಸಲಿದ್ದು ಸಾನ್ನಿಧ್ಯವನ್ನ ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಂದ್ರ ಮಹಾಸ್ವಾಮಿಗಳು ವಹಿಸುವರು ಎಂದರು. ಮ್ಯಾನೇಜರ್ ಅಶ್ವಿನಿ ನಿಟಾಲಿ, ಸುಜೀತ್ ಮಾಲಗತ್ತಿ,
    ಎಚ್. ಆರ್ ವಿಭಾಗದಮುಖ್ಯಸ್ಥೆ ನಿಶಾತ್ ಮುಧೋಳ ಇದ್ದರು.

    Demo
    Share. Facebook Twitter LinkedIn Email WhatsApp

    Related Posts

    Agumbe Ghat: ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ಬಂದ್!

    June 14, 2025

    Bagalkote Incident: ನರ್ಸ್ ಎಂದು ಹೇಳಿ 1 ದಿನದ ಮಗು ಕದ್ದೊಯ್ದ ಕಳ್ಳಿ..! ತಾಯಿಯ ಗೋಳಾಟ

    June 14, 2025

    ಮಗುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ತಾಯಿ ಎಸ್ಕೇಪ್..! ಅನಾಥವಾಯ್ತು ಕಂದಮ್ಮ

    June 14, 2025

    ಛೇ ಇದೆಂಥಾ ವಿಕೃತಿ: ಹಸುವಿನ ಕೆಚ್ಚಲು ಕೊಯ್ದ ದುರುಳರು!

    June 14, 2025

    ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದ ಕಾರು: ಇಬ್ಬರು ದುರ್ಮರಣ- ಓರ್ವ ಗಂಭೀರ!

    June 14, 2025

    ಧಾರಾಕಾರ ಮಳೆಗೆ ನೀರಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವ ಪತ್ತೆ: ಮೃತನ ನಿವಾಸಕ್ಕೆ ಸಚಿವ ಸಂತೋಷ್ ಲಾಡ್ ಭೇಟಿ!

    June 14, 2025

    ವಿಜಯಪುರದಲ್ಲಿ ಭಾರೀ ಮಳೆ: ಮನೆಗಳಿಗೆ ಹೊಕ್ಕಿದ ನೀರು.. ಜನ ಜೀವನ ಅಸ್ತವ್ಯಸ್ತ!

    June 14, 2025

    ರೋಲ್ ಕಾಲ್ ಗಿರಾಕಿಗಳು: ಹೋರಾಟಗಾರರ ವಿರುದ್ಧ ನಾಲಿಗೆ ಹರಿಬಿಟ್ಟ ಮದ್ದೂರು ಶಾಸಕ!

    June 14, 2025

    ಹುಬ್ಬಳ್ಳಿ ಮೇಲ್ವೇತುವೆ ಕಾಮಗಾರಿಗಾಗಿ ‘ಈದ್ಗಾ” ಕಾಂಪೌಂಡ್‌ ತೆರವು!

    June 14, 2025

    ಕಾಡಾನೆಯ ಪುಂಡಾಟ: ಕಾರು-ಬೈಕ್ ಜಖಂ; ಕಾರ್ಮಿಕರ ಮೇಲೂ ಹಲ್ಲೆಗೆ ಯತ್ನ!?

    June 14, 2025

    ಲಂಚಕ್ಕೆ ಬೇಡಿಕೆ: ಸರ್ಕಾರಿ ಅಧಿಕಾರಿ ಹಾಗೂ ಕಂಪ್ಯೂಟರ್ ಆಪರೇಟರ್ ಲೋಕಾ ಬಲೆಗೆ!

    June 13, 2025

    ರಬಕವಿಯಲ್ಲಿ ಪ್ರಜಾ ಸೌಧ ಕಟ್ಟಡ ನಿರ್ಮಾಣ ಮಾಡಲು 4 ಎಕರೆ ಜಾಗ ಮೀಸಲು: ಶಾಸಕ ಸಿದ್ದು ಸವದಿ

    June 13, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.