Close Menu
Ain Live News
    Facebook X (Twitter) Instagram YouTube
    Saturday, June 14
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    6 ತಿಂಗಳಲ್ಲಿ 6 ಘೋರ ದುರಂತಗಳು: ಏನಾಗಿದೆ ಈ ದೇಶಕ್ಕೆ?

    By Author AINJune 13, 2025
    Share
    Facebook Twitter LinkedIn Pinterest Email
    Demo

    2025ರ ಮೊದಲ 6 ತಿಂಗಳುಗಳು ಕಳೆದು ಹೋಗ್ತಿದೆ. ಈ ಆರು ತಿಂಗಳಲ್ಲಿ ದೇಶ 6 ಘೋರ ದುರಂತಗಳನ್ನು ಕಂಡಿರುವುದು ನಿಜಕ್ಕೂ ಶೋಚನೀಯ.

    1.ಪೆಹಲ್ಗಾಮ್‌ ದಾಳಿ
    ಅದು ಏಪ್ರಿಲ್‌ 22ನೇ ತಾರೀಕು. ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಆದ್ರೆ ಮಧ್ಯಾಹ್ನ 3ರಿಂದ 4 ಗಂಟೆ ಸುಮಾರಿಗೆ ಬರಸಿಡಿಲಿನಂತೆ ಬಂದ ಸುದ್ದಿಯೊಂದು ಭಾರತ ಮಾತ್ರವಲ್ಲದೇ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಈ ಸುದ್ದಿ ಕೇಳಿ ಭಾರತದ ಜನರಿಗೆ ನೋವಿನ ಜೊತೆಗೆ ರಕ್ತವೂ ಕುದಿದಿತ್ತು. ಅದಕ್ಕೆ ಕಾರಣ ಭೂಲೋಕದ ಸ್ವರ್ಗ ಎಂದೇ ಕರೆಯಲ್ಪಡುವ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇಸ್ಲಾಮಿಕ್‌ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದರು. ರುದ್ರ ರಮಣೀಯವಾದ ಪ್ರವಾಸಿ ತಾಣ ಪಹಲ್ಗಾಮ್ ಬಳಿ ಐವರು ಶಸ್ತ್ರಸಜ್ಜಿತ ಭಯೋತ್ಪಾದಕರು ಅಲ್ಲಿಗೆ ಬಂದಿದ್ದ ಪ್ರವಾಸಿಗರ ಮೇಲೆ ದಾಳಿ ನಡೆಸಿ ಬರೋಬ್ಬರಿ 26 ಮಂದಿಯನ್ನು ಕೊಲೆ ಮಾಡಿದ್ದರು. ತಮ್ಮ ಹೆಂಡತಿಯ ಮುಂದೆ, ಮಕ್ಕಳ ಕಣ್ಣೆದುರಲ್ಲೇ 26 ಮಂದಿ ಉಗ್ರರ ಗುಂಡೇಟಿಗೆ ಬಲಿಯಾಗಿದ್ದರು. ಇಸ್ಲಾಮಿಕ್ ಉಗ್ರರು ಧರ್ಮ ಕೇಳಿ ಕೊಲೆ ಮಾಡಿದ್ದು ಭಾರತೀಯರ ರಕ್ತ ಕುದಿಯುವಂತೆ ಮಾಡಿತ್ತು. ಈ ದುಷ್ಕೃತ್ಯಕ್ಕೆ ಬಲಿಯಾದವರಲ್ಲಿ ಇಬ್ಬರು ಕನ್ನಡಿಗರೂ ಸೇರಿದ್ದರು. ಖುಷಿ ಖುಷಿಯಾಗಿ ತಮ್ಮವರ ಜೊತೆ ಪ್ರವಾಸಕ್ಕೆಂದು ಬಂದವರ ಮೇಲೆ ಯಮನಂತೆ ಎಗರಿದ ಪಾಪಿ ಭಯೋತ್ಪಾದಕರು ಪಿಸ್ತೂಲು ಹಿಡಿದು 26 ನಾಗರಿಕರನ್ನು ಕೊಂದಿದ್ದರು. ಹಿಂದೂಗಳನ್ನೇ ಟಾರ್ಗೆಟ್‌ ಮಾಡಿ ಕೊಂದಿದ್ದ ಪಾಪಿಗಳಿಗೆ ಆಪರೇಷನ್‌ ಸಿಂಧೂರ ಮೂಲಕ ಭಾರತ ತಕ್ಕ ಶಾಸ್ತ್ರೀ ಮಾಡಿತ್ತು.

    2.ಕುಂಭ ಮೇಲೆ ಕಾಲ್ತುಳಿತ!

    ಪ್ರಯಾಗರಾಜ್‌ನಲ್ಲಿ ಕುಂಭಮೇಳದ ಸಂದರ್ಭದಲ್ಲಿ ಜನವರಿ 29ರಂದು ಮೌನಿ ಅಮವಾಸ್ಯೆಯಂದು ಕಾಲ್ತುಳಿತ ಘಟನೆ ನಡೆದಿತ್ತು. ಈ ಕಾಲ್ತುಳಿತದಲ್ಲಿ 37 ಜನರು ಸಾವನ್ನಪ್ಪಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿತ್ತು. ಆದ್ರೆ BBC Hindi ಇತ್ತೀಚಿಗೆ ನಡೆಸಿದ ಆಳವಾದ ತನಿಖೆಯು ಕಾಲ್ತುಳಿತದ ಸಂಖ್ಯೆಯನ್ನು ಬಹಿರಂಗಗೊಳಿಸಿದೆ. ಬಿಬಿಸಿ ತನಿಖೆಯು ಕನಿಷ್ಠ 82 ಸಾವುಗಳನ್ನು ದೃಢಪಡಿಸಿದೆ.

    3. ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ!

    ಆರ್‌ ಸಿಬಿ ಚಾಂಪಿಯನ್‌ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಆರ್‌ ಸಿಬಿ ವಿಜಯೋತ್ಸವದಲ್ಲಿ 11 ಜನ ಅಭಿಮಾನಿಗಳು ಮತಪಟ್ಟಿದ್ದರು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ತಮ್ಮ ಇಷ್ಟದ ಕ್ರಿಕೆಟಿಗರನ್ನು ನೋಡಲು ಬಂದಿದ್ದ ವೇಳೆ ತಳ್ಳಾಟ ನೂಕಾಟ ಉಂಟಾಗಿ 11 ಜನ ಸಾವನ್ನಪ್ಪಿದ್ದರು. ಇಡೀ ದೇಶ ಈ ಘಟನೆಗೆ ಶೋಕ ಮಿಡಿದಿತ್ತು,.

    4.ದೆಹಲಿ ರೈಲು ಕಾಲ್ತುಳಿತ ಪ್ರಕರಣ!

    ಫೆಬ್ರವರಿ 15, 2025 ರಂದು, ಭಾರತದ ನವದೆಹಲಿಯಲಿ ರೈಲು ನಿಲ್ದಾಣದಲ್ಲಿ ಜನಸಂದಣಿಯಿಂದಾದ ನೂಕು ನುಗ್ಗಲಿನಿಂದ ಕನಿಷ್ಠ 18 ಜನರು ಸಾವನ್ನಪ್ಪಿದರು. ಉತ್ತರ ಭಾರತದ ಪ್ರಯಾಗರಾಜ್‌ನಲ್ಲಿ ನಡೆಯುವ ಧಾರ್ಮಿಕ ಉತ್ಸವ ಮಹಾ ಕುಂಭಕ್ಕೆ ಹೊರಟಿದ್ದ ವೇಳೆಯಲ್ಲಿ ಈ ಘಟನೆ ನಡೆದಿತ್ತು.

    5. ಮುಂಬೈ ಲೋಕಲ್ ಟ್ರೈನ್ ಅಪಘಾತ!

    ಜೂನ್‌ 9ರಂದು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಂದ ಥಾಣೆಯ ಕಸರಾ ಪ್ರದೇಶದ ಕಡೆಗೆ ಹೋಗುತ್ತಿದ್ದ ಸ್ಥಳೀಯ ರೈಲಿನಿಂದ ಹಳಿ ಮೇಲೆ ಬಿದ್ದು ಐವರು ಪ್ರಯಾಣಿಕರು ಸಾವನ್ನಪ್ಪಿದ್ದರು. ಜನದಟ್ಟಣೆಯಲ್ಲಿ ಸಂದರ್ಭದಲ್ಲಿ ಮಿತಿಮೀರಿ ತುಂಬಿದ್ದ ರೈಲಿನಿಂದ ಆಯತಪ್ಪಿ ಕೆಳಗೆ ಬಿದ್ದು, ಐವರು ಮೃತಪಟ್ಟಿದ್ದರು.

    6. ಅಹಮಾದಾಬಾದ್‌ ವಿಮಾನ ದುರಂತ!

    ಗುಜರಾತ್‌ ನ ಅಹಮಾದಾಬಾದ್‌ ನಲ್ಲಿ ನಿನ್ನೆ ನಡೆದ ಏರೋ ಇಂಡಿಯಾ ವಿಮಾನ ದುರಂತದಲ್ಲಿ 241 ಮೃತಪಟ್ಟಿದ್ದಾರೆ. ಅಹಮಾದಾಬಾದ್‌ ನಿಂದ ಲಂಡನ್‌ ಗೆ ಹೊರಟ್ಟಿದ್ದ ವಿಮಾನ ತಾಂತ್ರಿಕ ದೋಷದಿಂದ ಪತನಗೊಂಡಿದ್ದು, ಈ ವಿಮಾನದಲ್ಲಿ 242 ಮಂದಿ ಪಯಾಣ ಬೆಳೆಸುತ್ತಿದ್ದರು. ಆದ್ರೆ ಟೇಕಾಫ್‌ ಆದ ಕೆಲ ಸೆಕೆಂಡ್‌ ಗಳಲ್ಲಿಯೇ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಪತನಗೊಂಡಿದೆ. ಡಾಕ್ಟರ್‌ ಹಾಸ್ಟೆಲ್‌ ಮೇಲೆ ವಿಮಾನ ಎಗರಿದ್ದು, ಇದು ದೇಶದ ಅತಿ ದೊಡ್ಡ ದುರಂತ ಎನ್ನಲಾಗುತ್ತಿದೆ. ದುರಂತದಲ್ಲಿ ಓರ್ವ ಹೊರತುಪಡಿಸಿ ಎಲ್ಲಾ ಪ್ರಯಾಣಿಕರು ಮೃತಪಟ್ಟಿರುವುದು ಅತ್ಯಂತ ಶೋಚನೀಯ.

    Demo
    Share. Facebook Twitter LinkedIn Email WhatsApp

    Related Posts

    ಬೆಂಗಳೂರಿನ 30 ವರ್ಷದ ಹಳೆ ದೇಗುಲಕ್ಕೆ ಭೇಟಿ ಕೊಟ್ಟ ನಟಿ ಕಂಗನಾ ರನೌತ್‌!

    June 14, 2025

    Father’s Day 2025: ಅಪ್ಪನಿಗೆ ಹೇಗೆಲ್ಲಾ ಶುಭಾಶಯ ತಿಳಿಸಬೇಕು ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಟಿಪ್ಸ್

    June 14, 2025

    BMTC ಬಸ್ ಚಾಲಕನಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಮಹಿಳೆ! ಯಾಕೆ ಗೊತ್ತಾ..?

    June 14, 2025

    ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಂಡು ಕೇಂದ್ರದ ಮೇಲೆ ಆರೋಪ: ಬಿ.ವೈ ವಿಜಯೇಂದ್ರ

    June 14, 2025

    Axiom-4 mission: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ಪ್ರಯಾಣ ಯಾವಾಗ ಗೊತ್ತಾ..? ಇಲ್ಲಿದೆ ಉತ್ತರ

    June 14, 2025

    ಮಡೆನೂರು ಮನು ಮತ್ತೊಂದು ಆಡಿಯೋ ವೈರಲ್…ಏನಿದೆ ಆಡಿಯೋದಲ್ಲಿ?

    June 14, 2025

    Ahmedabad Plane Crash: ವಿಮಾನ ಮೇಲಕ್ಕೆ ಏರುತ್ತಿಲ್ಲ..: ಕ್ಯಾಪ್ಟನ್ ಸುಮಿತ್ ಕೊನೆ 5 ಸೆಕೆಂಡ್’ಗಳ ಆಡಿಯೋ ವೈರಲ್

    June 14, 2025

    ಪ್ಯಾನ್ ಕಾರ್ಡ್ ಇರುವವರಿಗೆ ಎಚ್ಚರಿಕೆ.. ಹೀಗೆ ಮಾಡದಿದ್ದರೆ ನಿಮಗೆ ಬೀಳಲಿದೆ 10 ಸಾವಿರ ರೂ. ದಂಡ!

    June 14, 2025

    ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು 7,400 ಕ್ಕೆ ಏರಿಕೆ..! 87 ಮಂದಿ ಸಾವು

    June 14, 2025

    11 ಸೀಟ್ ನಿಗೂಢತೆ: ವಿಮಾನ ದುರಂತದಲ್ಲಿ ವಿಶ್ವಾಸ್​ ಕುಮಾರ್ ರೀತಿ ಬದುಕಿ ಬಂದಿದ್ದ ನಟ..ಯಾರದು?

    June 14, 2025

    PM Modi: ನಾಳೆಯಿಂದ 3 ದಿನ ಕೆನಡಾದಲ್ಲಿ ಜಿ7 ಶೃಂಗಸಭೆ: ಪ್ರಧಾನಿ ಮೋದಿ ಭಾಗಿ

    June 14, 2025

    ಏರ್ ಇಂಡಿಯಾ ವಿಮಾನ ದುರಂತ: ಕಾರಣ ಪತ್ತೆ ಹಚ್ಚಲು ಉನ್ನತ ಮಟ್ಟದ ಸಮಿತಿ ರಚನೆ!

    June 14, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.