ಇದನ್ನು ಕಾಕತಾಳಿಯಾ ಅನ್ನೋದಾ? ಮುನ್ಸೂಚನೆ ಅನ್ನೋದಾ ಗೊತ್ತಿಲ್ಲ. ಅಹಮದಾಬಾದ್ ನಿಂದ ಲಂಡನ್ ಗೆ 242 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ಏರ್ ಇಂಡಿಯಾ ನಿನ್ನೆ ಪತನಗೊಂಡು 241 ಮಂದಿ ಮೃತಪಟ್ಟಿದ್ದಾರೆ. ಈ ಘೋರ ದುರಂತಕ್ಕೆ ಇಡೀ ದೇಶವೇ ಮಮ್ಮಲ ಮರುಗಿದೆ. ಘಟನೆಗೆ ಕಾರಣ ಏನು? ಏನಾಯ್ತು? ಅನ್ನೋದರ ಬಗ್ಗೆ ಇಲ್ಲಿವರೆಗೂ ಸರಿಯಾದ ಕ್ಲಾರಿಟಿ ಸಿಕ್ಕಿಲ್ಲ. ಆದ್ರೆ ಪ್ರಾಣ ಕಳೆದುಕೊಂಡು ಒಂದೊಂದು ಕುಟುಂಬದ ಕಥೆ ಎಲ್ಲರನ್ನು ಕಾಡುತ್ತಿದೆ. ಹೀಗಿರುವಾಗಲೇ ಅಪಘಾತದ ದೃಶ್ಯ ಹೋಲುವ ಜಾಹೀರಾತಿನ ಫೋಟೋವೊಂದು ವೈರಲ್ ಆಗಿದ್ದು, ಎಲ್ಲರನ್ನು ಚಕಿತಗೊಳಿಸಿದೆ.
ಗುಜರಾತ್ ನ ಮಿಡ್ ಡೇ ಪತ್ರಿಕೆಯ ಜಾಹೀರಾತು ಹಲವಾರು ಅಚ್ಚರಿಕೆ ಕಾರಣವಾಗಿದೆ. ಏರ್ ಇಂಡಿಯಾ ದುರಂತಕ್ಕೂ ಮೊದಲೇ ಮಿಡ್ ಡೇ ಪತ್ರಿಕೆ ತನ್ನ ಮುಖ ಪುಟದಲ್ಲಿ ದೊಡ್ಡದಾದ ಜಾಹೀರಾತನ್ನು ಪ್ರದರ್ಶಿಸಿತ್ತು. ಇದು ಸಾವಿಗೆ ಸಿಕ್ಕ ಮುನ್ಸೂಚನೆ ಎಂಬ ಹಲವರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಪತ್ರಿಕೆ ಪ್ರಕಟಗೊಂಡ ದಿನವೇ ಘೋರ ವಿಮಾನ ದುರಂತ ನಡೆದಿದೆ. ಗುಜರಾತ್ ಫೇಮಸ್ ಪತ್ರಿಕೆ ಮಿಡ್ ಡೇ ತನ್ನ ಮುಖಪುಟದಲ್ಲಿ ಏರ್ ಇಂಡಿಯಾ ವಿಮಾನವನ್ನು ಒಳಗೊಂಡ ಕಿಡ್ಝಾನಿಯಾ ಪ್ರೋಮೋ ಫೋಟೋ ಪ್ರಕಟಿಸಿದೆ.
ಅಪ್ಪಂದಿರ ದಿನದ ಪ್ರಯುಕ್ತ ಕಿಡ್ಝಾನಿಯಾ ಕಾರ್ಯಕ್ರಮ ಪ್ರಚಾರವಾಗಲಿದೆ. 4-16 ವರ್ಷ ವಯಸ್ಸಿನ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಒಳಾಂಗಣ ಚಿಕಣಿ ನಗರವಾದ ಕಿಡ್ಝಾನಿಯಾ, ಮಕ್ಕಳು ಪೈಲಟ್ಗಳು, ವೈದ್ಯರು, ಅಡುಗೆಯವರು ಮತ್ತು ಎಂಜಿನಿಯರ್ಗಳಂತಹ ನೈಜ ಜಗತ್ತಿನ ವೃತ್ತಿಗಳನ್ನು ಪಾತ್ರವಹಿಸಿರುವ ಆಂಡ್ ಪ್ರಕಟಿಸಿದೆ. ಅಸಲಿಗೆ ಏರ್ ಇಂಡಿಯಾ ವಿಮಾನ ಕಟ್ಟಡದ ಮುಂಭಾಗ ಮುಂದೆ ಬಂದಿರುವ ರೀತಿ ಡಿಸೈನ್ ಮಾಡಲಾಗಿದೆ. ಸೇಮ್ ಟು ಸೇಮ್ ಅದೇ ರೀತಿ ನಿನ್ನೆ ದುರಂತ ನಡೆದಿದ್ದು, ಎಲ್ಲರ ಅಚ್ಚರಿಕೆ ಕಾರಣವಾಗಿದೆ.
ಏರ್ ಇಂಡಿಯಾ ವಿಮಾನ ನಿನ್ನೆ ಟೇಕಾಫ್ ಆಗ್ತಿದ್ದಂತೆ ಸಮಸ್ಯೆ ಉಂಟಾಗಿ ಡಾಕ್ಟರ್ ಕಟ್ಟಡದ ಮೇಲೆ ಬಂದು ಎಗರಿದೆ. ಇಡೀ ವಿಮಾನ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಈ ವಿಮಾನದಲ್ಲಿ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 241 ಜನ ಕೊನೆಯುಸಿರೆಳದಿದ್ದು, ಓರ್ವ ಪವಾಡ ರೀತಿ ಬದುಕುಳಿದಿದ್ದಾರೆ.