ಬೆಂಗಳೂರು:- ಬೆಂಗಳೂರಿನ ರಾಮಮೂರ್ತಿನಗರದ ರಾಘವೇಂದ್ರ ನಗರದಲ್ಲಿ ಸ್ಟ್ರೀಮ್ ಲೈನ್ ಸ್ಪೋರ್ಟ್ಸ್ ಇಂಡಿಯಾ ವತಿಯಿಂದ ಹಮ್ಮಿಕೊಂಡಿದ್ದ ನೂತನ ಬ್ಯಾಡ್ಮಿಂಟನ್ ಕೋರ್ಟ್ ಹಾಗೂ ವಿಕ್ಟರ್ ಬ್ರಾಂಡ್ ನ ಸ್ಟೋರ್ ನ್ನು ಶಾಸಕ ಬೈರತಿ ಬಸವರಾಜ್ ಹಾಗೂ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ಅಶ್ವಿನಿ ಪೊನ್ನಪ್ಪ ಉದ್ಘಾಟಿಸಿದರು.
ಹೃದಯಕ್ಕೆ ಬಹಳ ಅಪಾಯಕಾರಿ: ಎಷ್ಟೇ ಇಷ್ಟವಾಗಿದ್ದರೂ ಈ ಆಹಾರಗಳನ್ನು ತ್ಯಜಿಸಿಬಿಡಿ!
ಬಳಿಕ ಮಾತನಾಡಿದ ಕ್ರೀಡಾಪಟು ಅಶ್ವಿನಿಯವರು ಬೆಂಗಳೂರಲ್ಲಿ ಹುಟ್ಟಿ ಬೆಳೆದ ತಾವು ಇಂದು ಹತ್ತು ಬ್ಯಾಡ್ಮಿಂಟನ್ ಕೋರ್ಟ್ ಗಳನ್ನು ಉದ್ಘಾಟನೆ ಮಾಡುತ್ತಿರುವುದು ಸಂತಸ ತಂದಿದೆ. ಯುವಕರು ಶ್ರಮಪಟ್ಟು ಇದರ ಸದುಪಯೋಗ ಪಡೆಸಿಕೊಳ್ಳಿ ಎಂದು ಸಲಹೆ ನೀಡಿದರು. ಇನ್ನೂ ಶಾಸಕ ಬೈರತಿ ಬಸವರಾಜ್ ಅವರು ಗುಜರಾತಿನ ಅಹಮದಾಬಾದ್ ನಲ್ಲಿ ನಡೆದ ವಿಮಾನ ದುರಂತವನ್ನು ನೆನೆದು ವಿಷಾದ ವ್ಯಕ್ತಪಡಿಸಿದರು.. ಅರವತ್ತು ವರ್ಷಗಳ ಮೇಲ್ಪಟ್ಟವರಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ.. ಈ ಸಂದರ್ಭದಲ್ಲಿ ಸ್ಟ್ರೀಮ್ ಲೈನ್ ಸ್ಪೋರ್ಟ್ಸ್ ಇಂಡಿಯಾ ಮಾಲೀಕರಾದ ಗಣೇಶ್ , ಏಕಂಬರಂ, ಬಾಬು, ಅರುಣ್, ಪ್ರದೀಪ್ ಗೌಡ, ಅವಿನಾಶ್, ಗ್ಸೇವಿಯರ್ , ಚಂದ್ರಾದರ್ ಮತ್ತಿತರರಿದ್ದರು.