ಇದು ರೈತರಿಗೆ ಪ್ರತಿದಿನ ಆದಾಯ ತರುತ್ತದೆ. ವ್ಯಾಪಾರಿಗಳು ಮತ್ತು ಉದ್ಯೋಗಿಗಳಿಗಿಂತ ಹೆಚ್ಚಿನದನ್ನು ಗಳಿಸುವ ಅವಕಾಶವನ್ನು ಇದು ಒದಗಿಸುತ್ತದೆ. ಅಂತಹ ತರಕಾರಿ ಬೆಳೆಗಳಲ್ಲಿ, ‘ ಹೀರೆಕಾಯಿ ‘ ಮುಖ್ಯವಾಗಿದೆ.
ನೀವು ಕೂಡ ಜಾಸ್ತಿ ಉಪ್ಪಿನಕಾಯಿ ತಿಂತೀರಾ!? ಹಾಗಿದ್ರೆ ಈ ಸಮಸ್ಯೆಗಳು ಗ್ಯಾರಂಟಿ!
ಕಡಿಮೆ ಸಮಯದಲ್ಲಿ ಬೆಳೆ ಲಭ್ಯವಿದೆ. ಇದಲ್ಲದೆ, ಈ ತರಕಾರಿಗೆ ಮಾರುಕಟ್ಟೆಯಲ್ಲಿ ವರ್ಷದ 365 ದಿನಗಳು ಉತ್ತಮ ಬೇಡಿಕೆಯಿದೆ. ಆದ್ದರಿಂದ, ಮೇಲಾವರಣ ವ್ಯವಸ್ಥೆಯಲ್ಲಿ ಬೆಳೆಸಿದರೆ ಮತ್ತು ಸರಿಯಾದ ನಿರ್ವಹಣಾ ವಿಧಾನಗಳನ್ನು ಅನುಸರಿಸಿದರೆ, ಭಾರಿ ಲಾಭ ಗಳಿಸುವ ಸಾಧ್ಯತೆಯಿದೆ.
* ಹೀರೇಕಾಯಿಯಲ್ಲಿ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಇದನ್ನು ಮನೆಯ ಹಿತ್ತಲಿನಲ್ಲೇ ಬೆಳೆದು ತಿನ್ನುವುದರಿಂದ ಪೌಷ್ಟಿಕಾಂಶಗಳು ಹೇರಳವಾಗಿ ದೊರೆಯುತ್ತವೆ.
* ಇದು ಬೀಜದಿಂದ ಬರುವ ಸಸ್ಯವಾಗಿರುವುದರಿಂದ ಬಲಿತ, ಉತ್ತಮ ಗುಣಮಟ್ಟದ ಬೀಜವನ್ನು ಹಾಕಿದಾಗ ಮಾತ್ರ ಕಾಯಿಯು ಉತ್ತಮವಾಗಿ ಬರುತ್ತದೆ.
* ಕಾಲು ಮೊಳ ಆಳದಲ್ಲಿ ಬೀಜವನ್ನು ನೆಟ್ಟು, ಅದರ ಮೇಲೆ ಮಣ್ಣು ಹಾಕಬೇಕು. ಅಂದರೆ ಬೀಜ ಕಾಣದಂತೆ ಮುಚ್ಚಬೇಕು. ಆನಂತರ ಅದರ ಮೇಲೆ ಸ್ವಲ್ಪ ಸ್ವಲ್ಪ ನೀರು ಹಾಕಬೇಕು. 15 ದಿನದೊಳಗೆ ಬೀಜ ಮೊಳಕೆಯೊಡೆದು ಚಿಕ್ಕಗಿಡ ಮೇಲಕ್ಕೆ ಬರುತ್ತದೆ.
* ಒಂದು ತಿಂಗಳ ಬಳಿಕ ಅದು ಬೆಳೆಯುತ್ತಾ ಹೋಗುತ್ತದೆ. ಇದು ಬಳ್ಳಿಯ ಜಾತಿಯ ಗಿಡವಾದ್ದರಿಂದ ಇದಕ್ಕೆ ಚಪ್ಪರದ ಅಗತ್ಯ ಇದೆ. ಒಂದು ಉದ್ದವಾದ ಕೋಲನ್ನು ಊರಿ ದಾರದ ಸಹಾಯದಿಂದ ಬಳ್ಳಿಯನ್ನು ಕೋಲಿಗೆ ಸುತ್ತಿ ಕಟ್ಟಿದರೆ ಬಳ್ಳಿಯು ತನ್ನ ಪಾಡಿಗೆ ಬೆಳೆಯುತ್ತಾ ಹೋಗುತ್ತದೆ.
ನೀರಿನ ಅಭಾವವನ್ನು ಎದುರಿಸುತ್ತಿರುವ ರೈತರು ಇರುವ ನೀರಿನ ಸಂಪನ್ಮೂಲದಲ್ಲಿಯೇ ಇಂತಹ ತರಕಾರಿ ಬೆಳೆ ಬೆಳೆದು ಆದಾಯ ಗಳಿಸಬಹುದು. ಅದರಲ್ಲೂ ಈಗ ಮಳೆಗಾಲವಾಗಿದ್ದು, ಇರುವ ಮಿತವಾದ ನೀರನ್ನು ಹಾಗೂ ಜಮೀನನ್ನು ಸದ್ಬಳಕೆ ಮಾಡಿಕೊಳ್ಳುವುದರತ್ತ ಸಣ್ಣ ರೈತರೂ ಮನಸು ಮಾಡಬಹುದು.