ಬೆಳಗಾವಿ:- ದನಗಳ ಶೆಡ್ಡು ನಿರ್ಮಾಣದಲ್ಲಿ ಗೊಂದಲ ಉಂಟಾಗಿದ್ದು, ದನಗಳ ಶೆಡ್ಡು ನಿರ್ಮಾಣಕ್ಕಾಗಿ ಅರ್ಜಿ ನೀಡಿ ಬೆಸತ್ತ ಜನರು ಇಂದು ಗ್ರಾಮ ಪಂಚಾಯಿತಿಗೆ ಎಮ್ಮೆ ತಂದು ಕಟ್ಟುವ ಮೂಲಕ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
2024 ರಲ್ಲಿ ನರೇಗಾ ಯೋಜನೆಯಡಿಯಲ್ಲಿ 134 ಮಂಜೂರಾಗಿದ್ದ ದನಗಳ ಶೆಡ್ಡು ರದ್ದು ಮಾಡಿದ್ದಾರೆ ಎಂಡ ಆರೋಪ ಕೇಳಿ ಬಂದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಧಿಕಾರಿಗಳು ಬಂದು ನಮ್ಮ ಸಮಸ್ಯೆ ಬಗೆಹರಿಸುವಂತೆ ಪಟ್ಟು ಹಿಡಿದಿದ್ದು, ರೈತರು ಹಲವು ಬಾರಿ ದನಗಳ ಶೆಡ್ಡಿಗಾಗಿ ಅರ್ಜಿ ನೀಡಿದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಟೊಳ್ಳು ಭರವಸೆ ನೀಡಿ ಜಾರಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಪಂಚಾಯಿತ್ ರಾಜ್ಯ ಇಲಾಖೆ ಇಂಜಿನಿಯರ್ ಶಂಕರ ಶಾಸ್ತ್ರಿ ಎಡವಟ್ಟಿನಿಂದ ಈ ಗೊಂದಲ ಸೃಷ್ಟಿಯಾಗಿದೆ ಎಂದು ಅಭಿವೃದ್ಧಿ ಅಧಿಕಾರಿ ಧರೆಪ್ಪಾ ತಗಲಿ ಗಂಭೀರ ಆರೋಪ ಮಾಡಿದ್ದಾರೆ.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡೆಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಶೆಡ್ಡು ನಿರ್ಮಾಣಕ್ಕಾಗಿ ಜನರು ಗ್ರಾಮ ಪಂಚಾಯ್ತಿಗೆ ಅಲೆದಾಡಿ ಬೇಸತ್ತಿದ್ದಾರೆ, ಈ ಸಮಸ್ಯೆಯ ಬಗ್ಗೆ ಅಭಿವೃದ್ಧಿ ಅಧಿಕಾರಿ ಧರೆಪ್ಪಾ ತಗಲಿ ಇವರನ್ನು ಸಂಪರ್ಕಿಸಲಾಗಿ, ನಾವು ಜನರು ಕೊಟ್ಟ ಅರ್ಜಿಯನ್ನು ತೆಗೆದುಕೊಂಡು ಅನುಮೋದನೆಗೆ ಕಳಿಸಿದ್ದು, ಪಂಚಾಯತ್ ರಾಜ್ ಇಂಜಿನಿಯರ್ ಶಂಕರ ಶಾಸ್ತ್ರಿ ಇದರಲ್ಲಿ ನಿರ್ಲಕ್ಷ್ಯತಾಳಿದ್ದಾರೆ ಎಂದು ಹೇಳುವ ಮೂಲಕ ಪಿಡಿಒ ಸಾಹೇಬ್ರು ಜಾರಿಕೊಂಡಿದ್ದಾರೆ.