ಹಾಸನ- ಜಿಲ್ಲೆಯಲ್ಲಿ ಮತ್ತೆ ಪುಡಿರೌಡಿಗಳ ಅಟ್ಟಹಾಸ ಮಿತಿಮೀರಿದೆ. ತನ್ನೊಂದಿಗೆ ಕೊಲೆ ಮಾಡಲು ಬರ್ತಿಲ್ಲ ಎಂದು ಯುವಕನ ಮೇಲೆ ಪುಡಿರೌಡಿಯೋರ್ವ ಮಾರಣಾಂತಿಕ ದಾಳಿ ನಡೆಸಿದ್ದಾನೆ. ಲಾಂಗ್ ನಿಂದ ಕೊಚ್ಚಿ ಯುವಕನ ಕೊಲೆಗೆ ಪುಂಡ, ಯತ್ನಿಸಿದ್ದು, ಈ ಘಟನೆ ಹಾಸನ ನಗರದ ದೇವರಾಯಪಟ್ಟಣದ ಬಾರ್ ಬಳಿ ಜರುಗಿದೆ. ಪುಡಿರೌಡಿಯ ಅಟ್ಟಹಾಸ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಯುಧ ಹಳೆಯದಾದ್ದರಿಂದ ಯುವಕ ಜೀವ ಉಳಿಸಿಕೊಂಡಿದ್ದಾರೆ. ವಿಜಯ್ ಎಂಬ ಕಿಡಿಗೇಡಿಯಿಂದ ಈ ಕೃತ್ಯ ಆರೋಪ ಕೇಳಿ ಬಂದಿದೆ.
ಎಸ್, ಆರೋಪಿ ವಿಜಯ್, ನಾನು ಒಬ್ಬನನ್ನ ಮುಗಿಸಬೇಕು ನನ್ನೊಟ್ಟಿಗೆ ಬಾ ಎಂದು ಯುವಕನಿಗೆ ಹಿಂಸೆ ಕೊಡ್ತಿದ್ದ. ವಿಜಯ್ ಜೊತೆಗೆ ಹೋಗಲು ನಿರಾಕರಿಸಿದ್ದಕ್ಕೆ ಯುವಕ ಸುನಿಲ್ ಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಘಟನೆಯಿಂದ ಸುನಿಲ್ ಗೆ ಗಂಬೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ನನ್ನೊಟ್ಟಿಗೆ ನೀನು ಕೊಲೆ ಮಾಡಲು ಬಾ. ನಾನೇ ಬೇಲ್ ಕೊಡಿಸ್ತೇನೆ. ನೀನು ನನ್ನ ಸ್ನೇಹಿತ ಹಾಗಾಗಿ ನನ್ನೊಟ್ಟಿಗೆ ಬರಬೇಕು ಎಂದು ಆರೋಪಿ ವಿಜಯ್ ಒತ್ತಾಯ ಮಾಡಿದ್ದಾನೆ. ತಾನು ಇಂತಹ ಕೃತ್ಯ ಕ್ಕೆ ಬರಲ್ಲ ಎಂದಿದ್ದಕ್ಕೆ ಕೊಲೆ ಯತ್ನ ನಡೆದಿದೆ. ಅದೃಷ್ಟವಶಾತ್ ಹಳೆಯ ಲಾಂಗ್ ನಿಂದ ಅಟ್ಯಾಕ್ ಮಾಡಿದ್ದಕ್ಕೆ ಯುವಕ ಬಚಾವ್ ಆಗಿದ್ದಾನೆ. ಹಾಸನ ಪೆನ್ಷನ್ ಮೊಹಲ್ಲಾ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.