ಕುಂದಗೋಳ: ಕಳೆದೆರಡು ದಿನಗಳ ಹಿಂದೆ ಸುರಿದ ಮಳೆಯಿಂದ ತಾಲ್ಲೂಕಿನಲ್ಲಿ ರಸ್ತೆಗಳು, ಬ್ರಿಜ್ ಗಳು, ವಿದ್ಯುತ್ ಕಂಬಗಳು ಕಿತ್ತುಹೋಗಿ ಹಳ್ಳಕೊಳ ತುಂಬಿ ಹರಿದಿದ್ದರಿಂದ ಜೀವಹಾನಿ ಅವಘಡಗಳು ಸಹ ಸಂಭವಿಸಿವೆ, ಕಾರಣ ಸಾರ್ವಜನಿಕರು ಅಪಾಯದ ಸ್ಥಳಗಳಲ್ಲಿ ಹಾಗೂ ಅಪಾಯ ಮಟ್ಟ ಮೀರಿ ತುಂಬಿ ಹರಿಯುವ ಹಳ್ಳ, ಕೋಳ್ಳ,ಕೆರೆ, ಭಾವಿಯಂತಹ ಪ್ರದೇಶಗಳಲ್ಲಿ ಚಲಿಸುವಾಗ ಜಾಗೃಕತೆಯಿಂದ ಸುರಕ್ಷೀತವಾಗಿ ಇರಬೇಕು ಹಾಗೂ ತೊಂದರೆಗೆ ಇಡಾದ ರಸ್ತೆ, ಬ್ರಿಜ್, ಶಾಲಾ ಕಟ್ಟಡ, ಕಂಪೌಂಡಗಳಿಗೆ ರಾಜ್ಯ ಸರ್ಕಾರ ಅನುದಾನವನ್ನು ಶೀಘ್ರವಾಗಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಶಾಸಕ ಎಂ ಆರ್ ಪಾಟೀಲ ಹೇಳಿದರು.
Smartphone Explosion: ಈ ತಪ್ಪುಗಳನ್ನು ಎಂದಿಗೂ ಮಾಡ್ಬೇಡಿ: ಮೊಬೈಲ್ ಬ್ಲಾಸ್ಟ್ ಆಗತ್ತೆ!
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ತಾಲ್ಲೂಕಿನಲ್ಲಿ ವಾಡಿಕೆಗಿತ 15 ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು. ಇದರಿಂದ ಪಟ್ಟಣದ ಶಿವಯ್ಯ, ಬಸಯ್ಯ, ವಾಟ್ನಾಳಮಠ ಅವರು ಹಳ್ಳದ ರಭಸಕ್ಕೆ ಟ್ರ್ಯಾಕ್ಟರ ಸಿಲುಕಿ ಸಾವನಪ್ಪಿದ್ದು. ಇವರ ಮನೆಗೆ ಭೇಟಿ ನೀಡಿ, ಸರ್ಕಾರದಿಂದ ಬರುವ ಪರಿಹಾರ ಧನದ ಆದೇಶ ಪತ್ರ ಸಹ ನೀಡಿಲಾಗಿದೆ ಎಂದರು.
ತಾಲ್ಲೂಕಿನಲ್ಲಿ ಪಿ ಆರ್ ಇ ಡಿ ಅಡಿ 108 ಕಿಲೋಮಿಟರ್ ರಸ್ತೆಗಳು ಹಾಗೂ 05 ಸಿಡಿಗಳು ಹಾಳಾಗಿದ್ದು. ಹಾಗೂ ಕೆಲ ಶಾಲೆಯ ಕಂಪೌಂಡ್ ಹಾಗೂ ಕಟ್ಟಡಗಳು ಸಹ ಹಾಳಾಗಿದ್ದು. ಹಾಗೂ ತಾಲ್ಲೂಕಿನಲ್ಲಿ 03 ಮನೆಗಳು ಬಿದ್ದು ಹಾಳಾಗಿದ್ದು. ಕೆಲ ಮನೆಗಳು ಬಾಗಶಹ ಹಾಳಾಗಿವೆ, ಇದರ ವರದಿ ಸರ್ಕಾರಕ್ಕೆ ಸಲ್ಲಿಸುತ್ತೇನೆ ಅದನ್ನು ಪರಿಶೀಲಿಸಿ ಬೇಗನೆ ಅನುದಾನ ಬೀಡುಗಡೆ ಮಾಡಿ ಸಾರ್ವಜನಿಕರಿಗೆ ಒಡಾಡಲು ಅನೂಕೂಲ ಮಾಡಿಕೊಡಬೆಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಹಾಗೂ ಕೃಷಿ ಇಲಾಖೆಯ ಹಾಗೂ ತೋಟಗಾರಿಕೆ ಇಲಾಖೆಯ ಮಾಹಿತಿಯಂತೆ ತಾಲ್ಲೂಕಿನಲ್ಲಿ 52000 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು. ಅದರಲ್ಲಿ ಗೋವಿನ ಜೋಳ 10000 ಹೆಕ್ಟೇರ್ ಹೆಸರು 9300 ಹೆಕ್ಟೇರ್, ಉದ್ದು, 2700 ಹೆಕ್ಟೇರ್, ಶೇಂಗಾ 1900 ಹೆಕ್ಟೇರ, ಸೋಯಾಬಿನ್ 6000 ಹೆಕ್ಟೇರ್, ಹತ್ತಿ 3000 ಹೆಕ್ಟೇರ್ ಹೀಗೆ ಒಟ್ಟು 32915 ಹೆಕ್ಟರನಷ್ಟು ಬಿತ್ತನೆಯಾಗಿದ್ದು. ಬುದುವಾರದಂದು ಸುರಿದ ಮಳೆಗೆ ಬಹುತೇಕ ಬೀಜಗಳು ಹಾಳಾಗಿದ್ದು. ಆದ್ದರಿಂದ ಹಾಳಾಗಿರುವ ಬೀಜ ಗೊಬ್ಬರವನ್ನು ರೈತರಿಗೆ ಉಚಿತ ನೀಡಿ ಮತ್ತೆ ಬಿತ್ತನೆಗೆ ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ತಾಲ್ಲೂಕಿನಲ್ಲಿ ಬಸಾಪೂರ, ಹಿರೇನೆರ್ತಿ ಸೇರಿದಂತೆ ಹಲವು ಕಡೆ ಕೆಲ ವಿದ್ಯುತ್ ಕಂಬಗಳು ಸಹ ಬಿದ್ದು ತೊಂದರೆಯಾಗಿವೆ.ಇವುಗಳನ್ನು ಸಹ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಲು ಸೂಚಿಸಿದ್ದೆನೆಂದು ಹೇಳಿದರು. ಹಾಗೂ ರಸ್ತೆಗಳಲ್ಲಿ ಅಧಿಕ ಪ್ರಮಾಣದ ಲೋಡ ಹಾಕಿಕೊಂಡು ಒಡಾಡುವ ವಾಹನಗಳನ್ನು ತಡೆದು, ರಸ್ತೆ ಸುರಕ್ಷಿತವಾಗಿ ಇರುವಂತೆ ಪೋಲಿಸ್ ಇಲಾಖೆಗೆ ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ ಎಂದರು.
ತಾಲ್ಲೂಕಿನಲ್ಲಿ ಸದ್ಯ ಕುಡಿಯುವ ನೀರಿನ ಹಾಗೂ ಯಾವ ಪ್ರದೇಶದಲ್ಲಾದರೂ ನೀರಿನ ಪೈಪ ಒಡೆದು ಅದರಲ್ಲಿ ಕೊಳಚೆ ನೀರು ಸಹ ಸೇರ್ಪಡೆಯಾಗಿ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೆನೆ, ಹಾಗೂ ತಾಲ್ಲೂಕು ಆರೋಗ್ಯ ಇಲಾಖೆಯಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ಪ್ರತಿ ಗ್ರಾಮ ಪಂಚಾಯತಿಗೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಸೂಚನೆ ನೀಡಲು ಹೇಳಿದ್ದೇನೆ. ಹಾಗೂ ಆಸ್ಪತ್ರೆಗಳಲ್ಲಿ ಜೌಷದ ಹಾಗೂ ಮಾತ್ರೆಗಳು ಕೊರತೆಯಾಗದಂತೆ ನೀಗಾ ವಹಿಸಲು ಆರೋಗ್ಯ ಇಲಾಖೆಯ ಅಧಿಕರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು. ಹಂಚಿನಾಳದ ಹತ್ತಿರ ಇರುವ ಹಳ್ಳದ ಬ್ರಿಜ್ ಇಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದೇನೆ ಅದು ಶ್ರೀಘ್ರದಲ್ಲಿಯೇ ಆಗುತ್ತದೆ ಎಂದು ಹೇಳಿದರು.
ತುರ್ತು ಪರಿಸ್ಥಿತಿಯಲ್ಲಿ ಎನಾದರೂ ತೊಂದರೆ ಯಾದರೆ ಎನ್ ಡಿ ಆರ್ ಎಪ್ / ಎಸ್ ಡಿ ಆರ್ ಎಪ್ ಫಂಡನಿಂದ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದು. ಮತ್ತು ಶಾಲಾ ಕಂಪೌಂಡ್ ಕಟ್ಟಡ ಹಾಳಾಗಿದ್ದರೆ ಅವುಗಳಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಯವರು ಸಹ ಅನುದಾನ ನೀಡುತ್ತೇವೆ, ಅದರ ಪಟ್ಟಿಯನ್ನು ನೀಡಿ ಎಂದು ಸೂಚಿಸಿದ್ದಾರೆ ಎಂದು ಹೇಳಿದರು. ಇದರಂತೆ ರಾಜ್ಯ ಸರ್ಕಾರವು ಸಹ ಬೇಗನೆ ಸ್ವದಿಸಿ ಇದಕ್ಕೆ ಅನುದಾನ ನೀಡಬಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.